ಗ್ರಾಮದ ನೇಕಾರ ಸಹಕಾರ ಸಂಘದಲ್ಲಿ ಕೈಮಗ್ಗ ತರಬೇತಿ ಶಿಬಿರ ಉದ್ಘಾಟನೆ

ಗ್ರಾಮದ ನೇಕಾರ ಸಹಕಾರ ಸಂಘದಲ್ಲಿ ಕೈಮಗ್ಗ ತರಬೇತಿ ಶಿಬಿರ ಉದ್ಘಾಟನೆ Handloom training camp inaugurated at village weaver cooperative society

ಹನುಮಸಾಗರ 01:   ನೇಕಾರರು ಸ್ವಲಂಬಿಯಾಗಿ ಬದುಕನ್ನು ಸಾಗಿಸಲು ಸರಕಾರದ ತರಬೇತಿ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದು ಕೈಮಗ್ಗದ ಮುಖ್ಯಾಧಿಕಾರಿ ತುಳಸಿರಾಮನ್ ಹೇಳಿದರು.   ಪಟ್ಟಣದ ನೆಕಾರ ಸಹಕಾರಿ ಸಂಘದಲ್ಲಿ ಭಾರತ ಸರ್ಕಾರದ ಕೈಮಗ್ಗ ನೇಕಾರರ ಸೇವಾ ಕೇಂದ್ರ ಹಿ ಅಭಿವೃದ್ಧಿ ಆಯುಕ್ತರ ಕಚೇರಿ, ಬೆಂಗಳೂರು ಇವರ ವತಿಯಿಂದ ಸಮರ್ಥ್‌ ಯೋಜನೆಯಡಿ ಆಯೋಜಿಸಲಾದ **“ಕೈಮಗ್ಗ ನೇಕಾರ (ಪ್ರೇಮ್ ಲೂಮ್) ಕೌಶಲ್ಯ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.   ನೇಕಾರರ ಜೀವನಮಟ್ಟ ಸುಧಾರಣೆಗೆ ಕೇಂದ್ರ ಸರ್ಕಾರ ಕೈಗೊಂಡಿರುವ ಸಮರ್ಥ್‌ ಯೋಜನೆ ಮಹತ್ವದ್ದಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಸಹಕಾರ ಸಂಘದ ಅಧ್ಯಕ್ಷ ಅನಿಲ್ ಎಂ. ಸಿನ್ನೂರ್ ಅವರು ಮಾತನಾಡಿ, ಕೈಮಗ್ಗ ಕ್ಷೇತ್ರ ಉಳಿಯಬೇಕಾದರೆ ಯುವ ನೇಕಾರರು ಕೌಶಲ್ಯ ತರಬೇತಿ ಪಡೆದು ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವುದು ಅಗತ್ಯ. ತರಬೇತಿ ಕಾರ್ಯಕ್ರಮಗಳು ನೇಕಾರರಿಗೆ ಉದ್ಯೋಗಾವಕಾಶ ಮತ್ತು ಆದಾಯ ವೃದ್ಧಿಗೆ ಸಹಕಾರಿಯಾಗಲಿವೆ ಎಂದರು.   ಇದೇ ಕಾರ್ಯಕ್ರಮದಲ್ಲಿ ಅಧಿಕಾರಿಗಳಾದ ಪ್ರತಾಪ್, ವಸಂತ, ವಿರೇಂದ್ರ ಅಮರ​‍್ಪ (ಜವಳಿ ಇಲಾಖೆ), ಮೈನುದ್ದಿನ್ ಖಜಿ, ಬಸವರಾಜ ಸಿನ್ನೂರ, ವಿಶಾಲ ಸಿನ್ನೂರ ಅವರು ಮಾತನಾಡಿ, ಸಮರ್ಥ್‌ ಯೋಜನೆಯಡಿ ನೀಡಲಾಗುವ ತರಬೇತಿ ನೇಕಾರರಿಗೆ ಸ್ವಾವಲಂಬನೆ ಸಾಧಿಸಲು ನೆರವಾಗಲಿದೆ ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿಗಳು, ನಿರ್ದೇಶಕ ಮಂಡಳಿ ಸದಸ್ಯರು ಹಾಗೂ ನೇಕಾರ ಸಂಘದ ಸದಸ್ಯರು ಇತರರು ಇದ್ದರು.