ಎಚ್ ಶೇಷಗಿರಿರಾವ್ ಕೃತಿ ಬಿಡುಗಡೆ ಮಾ.14ಕ್ಕೆ
H Seshagirirao's book to be released on March 14th
ಲೋಕದರ್ಶನ ವರದಿ
ಹೂವಿನ ಹಡಗಲಿ 11: ಮಲ್ಲಿಗೆ ನೆಲದ ಹಿರಿಯ ಬಂಡಾಯ ಸಾಹಿತಿ ಹೆಚ್ ಶೇಷಗಿರಿರಾವ್ ರವರ "ಏನಿದು ಬದುಕು ಇದೆಂಥಾ ತಿರುವು" ಕೃತಿ ಬಿಡುಗಡೆ ಮಾರ್ಚ್ 14 ಶನಿವಾರ ನಡೆಯಲಿದೆ ಎಂದು ಸಮತಾ ಹವಾಲ್ದಾರ್ ತಿಳಿಸಿದ್ದಾರೆ.ವಿಶ್ವ ಕಿಡ್ನಿ ದಿನ ಅಂಗವಾಗಿ ತಂದೆ ದಿವಂಗತ ಶೇಷಗಿರಿರಾವ್ ಹವಾಲ್ದಾರ್ ರವರ ಪರಿಷ್ಕೃತ ಆವೃತ್ತಿ ಬಿಡುಗಡೆ ಸಮಾರಂಭವನ್ನು ಶನಿವಾರ ಬೆಳಗ್ಗೆ 11 ಗಂಟೆಗೆ ಪಟ್ಟಣದ ತಾಲೂಕು ಪಂಚಾಯಿತಿ ಮಲ್ಲಿಗೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಅಖಂಡ ಬಳ್ಳಾರಿ ವಿಜಯನಗರ ಜಿಲ್ಲೆಯ ಹಿರಿಯ ರೈತ ಹೋರಾಟಗಾರರಾದ ಜಿ ಎಂ ವೀರಸಂಗಯ್ಯ ಅಧ್ಯಕ್ಷತೆ ವಹಿಸುವರು. ಲೋಹಿಯಾ ಪ್ರಕಾಶನದ ಸಿ ಚೆನ್ನಬಸವಣ್ಣ ಕೃತಿ ಬಿಡುಗಡೆ ಮಾಡುವರು.ಡಾ ಸಂದೀಪ್ ಕೃತಿ ಕುರಿತು ಮಾಹಿತಿ ನೀಡುವರು. ಪ್ರಕಾಶಕಿ ಕಲಾವತಿ ಹವಾಲ್ದಾರ್ ಉಪಸ್ಥಿತರಿರುವರು.ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಮತಾ ಹವಾಲ್ದಾರ್ ಕೋರಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 