ಎಚ್ ಶೇಷಗಿರಿರಾವ್ ಕೃತಿ ಬಿಡುಗಡೆ ಮಾ.14ಕ್ಕೆ
H Seshagirirao's book to be released on March 14th
ಲೋಕದರ್ಶನ ವರದಿ
ಹೂವಿನ ಹಡಗಲಿ 11: ಮಲ್ಲಿಗೆ ನೆಲದ ಹಿರಿಯ ಬಂಡಾಯ ಸಾಹಿತಿ ಹೆಚ್ ಶೇಷಗಿರಿರಾವ್ ರವರ "ಏನಿದು ಬದುಕು ಇದೆಂಥಾ ತಿರುವು" ಕೃತಿ ಬಿಡುಗಡೆ ಮಾರ್ಚ್ 14 ಶನಿವಾರ ನಡೆಯಲಿದೆ ಎಂದು ಸಮತಾ ಹವಾಲ್ದಾರ್ ತಿಳಿಸಿದ್ದಾರೆ.ವಿಶ್ವ ಕಿಡ್ನಿ ದಿನ ಅಂಗವಾಗಿ ತಂದೆ ದಿವಂಗತ ಶೇಷಗಿರಿರಾವ್ ಹವಾಲ್ದಾರ್ ರವರ ಪರಿಷ್ಕೃತ ಆವೃತ್ತಿ ಬಿಡುಗಡೆ ಸಮಾರಂಭವನ್ನು ಶನಿವಾರ ಬೆಳಗ್ಗೆ 11 ಗಂಟೆಗೆ ಪಟ್ಟಣದ ತಾಲೂಕು ಪಂಚಾಯಿತಿ ಮಲ್ಲಿಗೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಅಖಂಡ ಬಳ್ಳಾರಿ ವಿಜಯನಗರ ಜಿಲ್ಲೆಯ ಹಿರಿಯ ರೈತ ಹೋರಾಟಗಾರರಾದ ಜಿ ಎಂ ವೀರಸಂಗಯ್ಯ ಅಧ್ಯಕ್ಷತೆ ವಹಿಸುವರು. ಲೋಹಿಯಾ ಪ್ರಕಾಶನದ ಸಿ ಚೆನ್ನಬಸವಣ್ಣ ಕೃತಿ ಬಿಡುಗಡೆ ಮಾಡುವರು.ಡಾ ಸಂದೀಪ್ ಕೃತಿ ಕುರಿತು ಮಾಹಿತಿ ನೀಡುವರು. ಪ್ರಕಾಶಕಿ ಕಲಾವತಿ ಹವಾಲ್ದಾರ್ ಉಪಸ್ಥಿತರಿರುವರು.ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಮತಾ ಹವಾಲ್ದಾರ್ ಕೋರಿದ್ದಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 