ದಿ. 10ರಂದು ದೇವಸ್ಥಾನಗಳಲ್ಲಿ ಗುರುಪೂರ್ಣಿಮೆಯ ಕಾರ್ಯಕ್ರಮಗಳು
Guru Purnima programs in temples on the 10th
ದಿ. 10ರಂದು ದೇವಸ್ಥಾನಗಳಲ್ಲಿ ಗುರುಪೂರ್ಣಿಮೆಯ ಕಾರ್ಯಕ್ರಮಗಳು
ಹಾವೇರಿ 06: ಇಲ್ಲಿನ ಹಾನಗಲ್ ರೋಡಿನ ವೈಭವಿಲಕ್ಷ್ಮಿ ಪಾರ್ಕಿನ ಹತ್ತಿರದ ಶ್ರೀಗಣೇಶ, ಅಂಬಾಭವಾನಿ,ಶ್ರೀ ಶಿರಡಿ ಸಾಯಿಬಾಬಾ ಹಾಗೂ ನವಗ್ರಹಗಳ ದೇವಸ್ಥಾನದಲ್ಲಿ ಗುರುಪೂರ್ಣಿಮೆಯ ವಿಶೇಷ ಕಾರ್ಯಕ್ರಮಗಳು ದಿ. 10ರಂದು ಗುರುವಾರ ಜರುಗಲಿದೆ.ಅಂದು ಬೆಳಿಗ್ಗೆ 6 ಗಂಟೆಗೆ ಶಿರಡಿ ಸಾಯಿಬಾಬಾ ದೇವರ ಕಾಕಡ ಆರತಿ.7:30 ಗಂಟೆಗೆ ಸೂರ್ಯೋದಯ ಆರತಿ,8 ಗಂಟೆಗೆ ಶ್ರೀ ಗಣೇಶ ದೇವರಿಗೆ ಅಸ್ಟೋತ್ತರ ಪೂಜೆ,9 ಗಂಟೆಗೆ ಶ್ರೀ ಸಾಯಿ ಸತ್ಯವ್ರತ ಪೂಜೆ. ಮಧ್ಯಾಹ್ನ 1 ಗಂಟೆಗೆ ಆರತಿ ನಂತರ ಅನ್ನಪ್ರಸಾದ ಸೇವೆ.4 ಗಂಟೆಗೆ ಶ್ರೀಚಕ್ರಕ್ಕೆ ಲಲಿತ ಸಹಸ್ರನಾಮದೊಂದಿಗೆ ಕುಂಕುಮಾರ್ಚನೆ. 5:30 ಗಂಟೆಗೆ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ. ಸಂಜೆ 6 ಗಂಟೆಗೆ ಭಜನೆಯೊಂದಿಗೆ ಪಾಲಕಿ ಸೇವೆ. 7 ಗಂಟೆಗೆ ಶಿರಡಿ ಸಾಯಿಬಾಬಾ ರವರಿಗೆ ಧೂಪಾರತಿ ಹಾಗೂ ರಾತ್ರಿ 8 ಗಂಟೆಗೆ ಶೇಜಾರತಿ ಹೀಗೆ ದೇವರಿಗೆ ಪೂಜೆ ವಿಜೃಂಭಣೆಯಿಂದ ಜರುಗಲಿವೆ.ಗುರುಪೂರ್ಣಿಮೆಯ ಪ್ರಯುಕ್ತ ಜಿಲ್ಲಾ ಆಸ್ಪತ್ರೆ.ರಕ್ತನಿಧಿ ಕೇಂದ್ರದಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿದೆ.ಹಾವೇರಿ ನಗರದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಹಾಗೂ ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುವಂತೆ ಹಾಗೂ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವಂತೆ ಅಂಬಾಭವಾನಿ ದೇವಸ್ಥಾನ ಟ್ರಸ್ಟ(ರಿ) ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 