ಶಿರಗುಪ್ಪಿಯಲ್ಲಿ ಬೌಧ್ಧ ವಿಹಾರ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ
Groundbreaking ceremony for the construction of a Buddhist monastery in Shiraguppi
ಶಿರಗುಪ್ಪಿಯಲ್ಲಿ ಬೌಧ್ಧ ವಿಹಾರ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ
ಕಾಗವಾಡ 14 ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯ ವತಿಯಿಂದ ಸುಮಾರು 30 ಲಕ್ಷ ಅನುದಾನದ ನೂತನ ಬೌದ್ಧ ವಿಹಾರ ನಿರ್ಮಾಣ ಕಾಮಗಾರಿಗೆ ಮಂಗಳವಾರ ದಿ. 14 ರಂದು ಗಣ್ಯರು ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ರಾಜು ಕಾಂಬಳೆ ಮಾತನಾಡಿ, ಡಾ. ಬಾಬಾಸಾಹೇಬ ಅಂಬೇಡ್ಕರ ಅವರು ಬೌದ್ಧ ಧರ್ಮ ಸ್ವೀಕರಿಸಿದ ಇಂದಿನ ದಿನ ಅಂಬೇಡ್ಕರ ಅನುಯಾಯಿಗಳಿಗೆ ಮಹತ್ವದ ದಿನವಾಗಿದ್ದು, ಬೌದ್ಧ ಧರ್ಮದ ಪ್ರಚಾರ ಮತ್ತು ಬೌದ್ಧ ಉಪಾಸನಕ್ಕಾಗಿ ಬೌದ್ಧ ವಿಹಾರಗಳ ಅವಶ್ಯಕತೆ ಇರುತ್ತದೆ. ಈಗಿನ ರಾಜ್ಯ ಸರ್ಕಾರ ಮತ್ತು ಮಾಜಿ ಶಾಸಕರು, ಹಾಗೂ ಮಾಜಿ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯ ಸಚಿವರಾದ ಶ್ರೀಮಂತ ಪಾಟೀಲ ಮತ್ತು ಹಾಲಿ ಶಾಸಕರಾದ ರಾಜು ಕಾಗೆ ಅವರ ಸಹಕಾರದೊಂದಿಗೆ ಶಿರಗುಪ್ಪಿಯಲ್ಲಿ ರಾಜ್ಯದಲ್ಲಿಯೇ ್ರ್ರಥಮ ಬಾರಿಗೆ ಅದ್ಭುತವಾದ ಬೌದ್ಧ ವಿಹಾರ ನಿರ್ಮಾಣದ ಕನಸು ನನಸಾಗುತ್ತಿದೆ ಎಂದರು.
ದಿವ್ಯ ಸಾನಿಧ್ಯವನ್ನು ಧಮ್ಮಪಾಲ ಭಂತೇಜಿ ವಹಿಸಿದ್ದರು. ಅತಿಥಿಗಳಾಗಿ ಪ್ರಾ. ಡಾ. ಎಸ್.ಪಿ. ತಳವಾರ, ಬಾಳಾಸಾಬ ಕಾಂಬಳೆ, ತುಕಾರಾಮ ಕಾಂಬಳೆ, ಗ್ರಾ.ಪಂ. ಅಧ್ಯಕ್ಷೆ ಶೋಭಾ ಗದಾಳೆ, ಮುಖಂಡರಾದ ಶಿವಾನಂದ ಪಾಟೀಲ, ಮಹಾವೀರ ಕಾತ್ರಾಳೆ, ಅಭಿಯಂತರ ಕಿರಣ ದಾಮನ್ನವರ, ರಾಜುಗೌಡಾ ಪಾಟೀಲ, ರಾಜೇಂದ್ರ ಚೌಗುಲೆ, ಶಿವಾನಂದ ನವಿನಾಳೆ, ಅಜೀತ ಪೂಜಾರಿ, ಸದಾಶಿವ ಪೂಜಾರಿ, ಇಕ್ಬಾಲ ಕನವಾಡೆ, ಮಸ್ತಾನ ಕನವಾಡೆ, ಸಂದೀಪ ಕೋಳಿ, ಕಮಲಾ ಜಂಗಟಾಳೆ, ಬೌದ್ಧ ಫೌಂಡೇಶನ್ ಅಧ್ಯಕ್ಷ ವಿದ್ಯಾಧರ ಮೌರ್ಯ, ಉಪಾಧ್ಯಕ್ಷೆ ಗೀತಾ ಕಾಂಬಳೆ, ರಮೇಶ ಕಾಂಬಳೆ, ಸಚೀನ ಕಾಂಬಳೆ, ಪ್ರೇಮಾ ಕಾಂಬಳೆ, ಶ್ರೀದೇವಿ ನಾಯಿಕ, ಶಿಲ್ಪಾ ಶಿರಗಾಂವೆ, ಗ್ರಾಮ ಆಡಳಿತಾಧಿಕಾರಿ ಪ್ರಕಾಶ ಕಾಂಬಳೆ ಸೇರಿದಂತೆ ಬೌದ್ಧ ಸಮಾಜ ಬಾಂಧವರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 