ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗಾಗಿ ಹೆಚ್ಚಿನ ಒತ್ತು: ಶಾಸಕ ಐಹೊಳೆ

ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗಾಗಿ ಹೆಚ್ಚಿನ ಒತ್ತು: ಶಾಸಕ ಐಹೊಳೆ Greater emphasis on development of rural roads: MLA Aihole

ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗಾಗಿ ಹೆಚ್ಚಿನ ಒತ್ತು: ಶಾಸಕ ಐಹೊಳೆ 

ರಾಯಬಾಗ 11: ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವ ರಸ್ತೆಗಳ ಅಭಿವೃದ್ಧಿಗಾಗಿ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಶಾಸಕ ಡಿ.ಎಮ್‌.ಐಹೊಳೆ ಹೇಳಿದರು. 

ಶನಿವಾರ ತಾಲೂಕಿನ ಕಂಕಣವಾಡಿ ಪಟ್ಟಣದಲ್ಲಿ ಜಿ.ಪಂ. ಇಲಾಖೆಯಿಂದ ಮಂಜೂರಾದ 50 ಲಕ್ಷ ರೂ. ಅನುದಾನದಲ್ಲಿ ಕಂಕಣವಾಡಿ-ಕೊಡ್ಡಿನ ತೋಟದ ರಸ್ತೆ ಡಾಂಬರೀಕರಣ ಮತ್ತು 20 ಲಕ್ಷ ರೂ.ಅನುದಾನದಲ್ಲಿ ಕಂಕಣವಾಡಿ-ಸವಸುದ್ದಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ರೈತರು ಬೆಳೆದ ಬೆಳೆಗಳನ್ನು ಶೀಘ್ರ ಮಾರುಕಟ್ಟೆಗಳಿಗೆ ಸಾಗಿಸಲು ಮತ್ತು ಗ್ರಾಮೀಣ ಭಾಗದ ಜನರು ತಾಲೂಕು ಮತ್ತು ಜಿಲ್ಲಾ ಕೇಂದ್ರ ಸ್ಥಾನಗಳಿಗೆ ಪ್ರಯಾಣಿಸಲು ಗುಣಮಟ್ಟದ ರಸ್ತೆಗಳು ಅವಶ್ಯಕವಾಗಿದೆ. ಗುತ್ತಿಗೆದಾರರು ಗುಣಮಟ್ಟದ ರಸ್ತೆಗಳನ್ನು ಶೀಘ್ರವಾಗಿ ನಿರ್ಮಾಣ ಮಾಡುವುದರ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ತಿಳಿಸಿದರು.ಜಿ.ಪಂ.ಎಇಇ ವಿ.ಆರ್‌. ಭಜಂತ್ರಿ, ಮುಖಂಡರಾದ ಸದಾಶಿವ ಘೋರೆ​‍್ಡ, ರಾಜಶೇಖರ ಖನದಾಳೆ, ಅಪ್ಪಾಸಾಬ ಬ್ಯಾಕೂಡೆ, ನಟರಾಜ ಮಾವರಕರ, ಹಾಲಪ್ಪ ಪೀರಗೀಪಾಟೀಲ, ಭೀಮಪ್ಪ ನಾಯಿಕವಾಡಿ, ರಮೇಶ ಪೂಜಾರಿ, ಬಸವರಾಜ ಬೆಳಕೂಡ, ಮಹಾಂತೇಶ ಹತ್ತರಕಿ, ಅಶೋಕ ಪಾಮದಿನ್ನಿ, ವೀರೇಂದ್ರ ಬ್ಯಾಕೂಡೆ, ವಿಠ್ಠಲ ಗುಡೆನ್ನವರ ಸೇರಿ ಅನೇಕರು ಇದ್ದರು.