ದಿ. 30 ತಾಳಿಕೋಟಿ ಪಟ್ಟಣದಲ್ಲಿ ಶ್ರೀರಾಮನವಮಿ ಉತ್ಸವಕ್ಕೆ ಭವ್ಯ ಚಾಲನೆ

ದಿ. 30 ತಾಳಿಕೋಟಿ ಪಟ್ಟಣದಲ್ಲಿ ಶ್ರೀರಾಮನವಮಿ ಉತ್ಸವಕ್ಕೆ ಭವ್ಯ ಚಾಲನೆ   Grand inauguration of Sri Ramanavami festival in Talikoti town on 30th

ತಾಳಿಕೋಟೆ 27: ಪಟ್ಟಣದಲ್ಲಿ ಎರಡನೇ ವರ್ಷದ ಶ್ರೀರಾಮನವಮಿ ಉತ್ಸವಕ್ಕೆ ದಿ. 30 ಸೋಮವಾರ ಸಂಜೆ 4ಗಂಟೆಗೆ ಭವ್ಯವಾಗಿ ಚಾಲನೆ.  

ಈ ಸಂದರ್ಭದಲ್ಲಿ ಮಾಜಿ ಪುರಸಭೆ ಅಧ್ಯಕ್ಷರಾದ ದಸರತ ಸಿಂಗ್ ಮನಗೂಳಿ, ಮಾಜಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಆರ್‌.ಎಸ್‌. ಪಾಟೀಲ್ (ಕೂಚಬಾಳ ), ಅಮಿತ್ ಸಿಂಗ್ ಮನಗೂಳಿ, ಪಿಂಟು ಹಜೇರಿ, ವಿಠ್ಠಲ್ ಸಿಂಗ್ ಹಜೇರಿ, ರತನ್ ಸಿಂಗ್ ಹಜೇರಿ, ರಾಜು ಹಜೇರಿ, ತಿಪ್ಪಣ್ಣ ಸಜ್ಜನ್, ರಮೇಶ್ ಹಜೇರಿ ಸೇರಿದಂತೆ ಹಲವಾರು ಪದಾಧಿಕಾರಿಗಳು ಮತ್ತು ಊರಿನ ಗಣ್ಯರು ಉಪಸ್ಥಿತರಿದ್ದು ಉತ್ಸವಕ್ಕೆ ಬೆಂಬಲ ಸೂಚಿಸಿದರು. 

ಶ್ರೀರಾಮನವಮಿ ಉತ್ಸವದ ಅಂಗವಾಗಿ ನಡೆಯಲಿರುವ ಈ ಶೋಭಾಯಾತ್ರೆ ತಾಳಿಕೋಟಿ ಪಟ್ಟಣದ ಭಕ್ತಿ ಹಾಗೂ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸಲಿದೆ.