ಗೋಹತ್ಯೆ ತಡೆಗಟ್ಟಿ ಗೋರಕ್ಷಣೆಗಾಗಿ ಗೋಮಾತಾ ಆಹ್ವಾನ ಅಭಿಯಾನ - ಪ್ರತಿಭಟನೆ ಮನವಿ

ಗೋಹತ್ಯೆ ತಡೆಗಟ್ಟಿ ಗೋರಕ್ಷಣೆಗಾಗಿ ಗೋಮಾತಾ ಆಹ್ವಾನ ಅಭಿಯಾನ - ಪ್ರತಿಭಟನೆ ಮನವಿ  Gomata Ahavna campaign to prevent cow slaughter and protect cows - protest appeal

ಲಕ್ಷ್ಮೇಶ್ವರ 28 : " ಹಿಂದೂ ಧರ್ಮದಲ್ಲಿ ಗೋಮಾತೆಗೆ ಮಹತ್ವದ ಸ್ಥಾನವನ್ನು ನೀಡಿ ಪೂಜಿಸುತ್ತಾ ಬಂದಿದ್ದೇವೆ ಅಂತಾ ಮಹಾ ಶಕ್ತಿಯನ್ನು ಹೊಂದಿರುವ ಗೋಮಾತೆಯನ್ನು ರಾಷ್ಟ್ರಮಾತೆಯನ್ನಾಗಿ ಘೋಷಿಸಬೇಕು ಗೋಹತ್ಯೆ ತಡೆಗಟ್ಟಬೇಕು ಗೋಸುರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ ಯಾಗಬೇಕು ಎಂದು ರಾಜ್ಯಾದ್ಯಂತ ಬಿಜೆಪಿ ಶ್ರೀರಾಮ ಸೇನೆ ಮತ್ತು ಸನಾತನ ಧರ್ಮದ ಮುಖಂಡರು ಪಟ್ಟಣದ ತಹಶೀಲ್ದಾರ್ ಕಛೇರಿ ಮುಂದೆ ಪ್ರತಿಭಟಸಿ ಗೋಹತ್ಯೆ ನಿಷೇಧಿಸಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ರಾಷ್ಟ್ರಪತಿಗಳಿಗೆ ರಾಜ್ಯಪಾಲರಿಗೆ ಉಪ ತಹಸಿಲ್ದಾರ್ ಮಂಜುನಾಥ ಅಮಾಸಿ ಅವರ ಮೂಲಕ ಮನವಿ ಸಲ್ಲಿಸಿದರು.

ಈ ಸಮಯದಲ್ಲಿ ಬಿಜಿಪಿ ಶಿರಹಟ್ಟಿ ಮಂಡಲ ಅಧ್ಯಕ್ಷರಾದ ಸುನಿಲ್ ಮಹಾತಂಶೆಟ್ಟರು ಅವರು ಮಾತನಾಡಿ ಹಿಂದೂ ಧರ್ಮದಲ್ಲಿ ಗೋಮಾತೆಗೆ ಅಗ್ರಸ್ಥಾನವನ್ನು ನೀಡಿದ್ದೇವೆ ಅಂತ ಗೋಮಾತೆಯನ್ನು ರಕ್ಷಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಅದಕ್ಕಾಗಿ ರಾಜ್ಯಾದ್ಯಂತ ಗೋ ಸುರಕ್ಷಣೆಯ ಅಭಿಯಾನ ಹಮ್ಮಿಕೊಂಡಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗೋ ಹತ್ಯೆ ತಡೆಗಟ್ಟಲು ಸೂಕ್ತ ಆದೇಶನವನ್ನು ನೀಡಬೇಕು ಗೋಮಾತೆಯ ರಕ್ಷಣೆಗೆ ಮುಂದಾಗಬೇಕು ಎಂದರು ಈ ಸಮಯದಲ್ಲಿ ಮುಖಂಡರಾದ ಎಂ ಆರ್ ಪಾಟೀಲ್ ಎಂ ಎಸ್ ದೊಡ್ಡಗೌಡ್ರ ನಿಂಗಪ್ಪ ಬನ್ನಿ ಗಂಗಾಧರ ಮೆಣಸಿನಕಾಯಿ ದುಂಡೇಶ್ ಕೊಟೀಗಿ ನವೀನ ಹಿರೇಮಠ ವಿಜಯ ಕುಂಬಾರ ಪ್ರವೀಣ್ ಭೋಮಲೆ ಸೋಮಣ್ಣ ಉಪನಾಳ ರಾಜಶೇಖರ್ ಶಿಗ್ಲಿಮಠ ಈರಣ್ಣ ಪೂಜಾರ್ ಭೀಮಣ್ಣ ಯಂಗಾಡಿ ರುದ್ರ​‍್ಪ ಉಮಚಗಿ ಬಸವರಾಜ ಕಲ್ಲೂರ ಪ್ರವೀಣ್ ಜಾವೂರು ಬಸವರಾಜ ಚಕ್ರಸಾಲಿ ತಾವರೇಪ್ಪ ಲಮಾಣಿ ಶ್ರೀಕಾಂತ ಚೋಟಗಲ್ಲ ಮುತ್ತಣ್ಣ ಚೋಟಗಲ್ಲ ಸೇರಿದಂತೆ ಇನ್ನೂ ಅನೇಕ ಹಿರಿಯ ಮುಖಂಡರು ಯುವಕರು ಇದ್ದರು