ಜನರಿಗೆ ಸಮರ್ಪಕ ಮಾಹಿತಿ ನೀಡಿ, ಕಚೇರಿಗೆ ಬಂದಾಗ ತಾಳ್ಮೆಯಿಂದ ಉತ್ತರಿಸಿ

ಹಾವೇರಿ: ಜೂನ್ 12: ವಿವಿಧ ಮಾಹಿತಿ ಕೇಳಿ ಸಕರ್ಾರಿ ಕಚೇರಿಗೆ ಬರುವ ಸಾರ್ವಜನಿಕರೊಂದಿಗೆ ತಾಳ್ಮೆಯಿಂದ ನಡೆದುಕೊಳ್ಳಿ. ಜನರಿಗೆ ಸಮರ್ಪಕ ಮಾಹಿತಿ ನೀಡಿ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಸವನಗೌಡ ದೇಸಾಯಿ ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.

       ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಮೇ 2020 ಮಾಹೆ  ಕನರ್ಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

      ಯಾವುದೇ ಸಮಸ್ಯೆಗಳನ್ನು ಹೊತ್ತು ತಮ್ಮ ಕಚೇರಿಗೆ ಬರುವ ಸಾರ್ವಜನಿಕರಿಗೆ ಸಕರ್ಾರದ ಮಾರ್ಗಸೂಚಿ, ಮಾನದಂಡಗಳಡಿಯಲ್ಲಿ ಪರಿಹಾರ ಕಲ್ಪಿಸಿ. ಸಾಧ್ಯವಾಗದಿದ್ದರೆ ತಾಳ್ಮೆಯಿಂದ ಮನವರಿಕೆಮಾಡಿಕೊಡಿ. 

  ನಿಮ್ಮ ಹಂತದಲ್ಲೇ ಸಮಸ್ಯೆಗಳು ಪರಿಹರಿಸದರೇ ಜನಪ್ರತಿನಿಧಿಗಳ ಹತ್ತಿರ ದೂರು ತರುವುದು ಕಡಿಮೆಯಾಗುತ್ತದೆ. ಆಡಳಿತ ಸರಳವಾಗುತ್ತದೆ ಎಂದು ಅಧಿಕಾರಿಗಳಿಗೆ ತಿಳಿಸಿದರು.

     ಜಿಲ್ಲಾ ಕಚೇರಿಗಳ ವರೆಗೆ ಹಳ್ಳಿ ಜನರ ದೂರು ಬರದಂತೆ ಪಂಚಾಯತ್ ಅಥವಾ ತಾಲೂಕಾ ಹಂತದಲ್ಲೇ ಜನರ ಸಮಸ್ಯೆ ಇತ್ಯರ್ಥವಾಗಬೇಕು. ಗ್ರಾಮೀಣ ಹಾಗೂ ತಾಲೂಕು ಹಂತಯದಲ್ಲಿದೇ ಸಮಸ್ಯೆಗಳು ಇತ್ಯರ್ಥವಾದಲ್ಲಿ ಸಾರ್ವಜನಿಕರಿಗೆ ಜಿಲ್ಲಾ ಮಟ್ಟದ ಕಚೇರಿಗೆ ಅಲೆದಾಡುವುದು ತಪ್ಪುತ್ತದೆ. ಕೆಳಮಟ್ಟದಲ್ಲಿ ಸಮಸ್ಯೆಗಳು ಇತ್ಯರ್ಥಗೊಂಡಲ್ಲಿ ನಿಮಗೆ ಒತ್ತಡ ಕಡಿಮೆಯಾಗುತ್ತದೆ ಹಾಗೂ ಕಚೇರಿಗಳಿಗೆ ಬರುವ ಜನರು ಕಡಿಮೆಯಾಗುತ್ತಾರೆ. ಈ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ವಾರಕ್ಕೆ ಒಂದುಬಾರಿ ತಾಲೂಕಾ ಕಚೇರಿಗೆ ಭೇಟಿ ನೀಡಿ ಆಡಳಿತ ಚುರುಕುಗೊಳಿಬೇಕು. 

     ಇದೇ ಮಾದರಿಯಲ್ಲಿ ತಾಲೂಕಾ ಅಧಿಕಾರಿಗಳು ಹೋಬಳಿ ಹಾಗೂ ಗ್ರಾಮ ಪಂಚಾಯತ್ಗಳಿಗೆ ಪ್ರವಾಸಕೈಗೊಂಡು ಕೆಳಹಂತದಿಂದ ಆಡಳಿತ ಚುರುಕುಗೊಳಿದರೆ ಸಭೆಯಲ್ಲಿ ಉತ್ತರ ಹೇಳುವ ಅಧಿಕಾರಿಗಳಿಗೆ ಇಲಾಖೆಯಲ್ಲಿ ನಡೆಯುತ್ತಿರುವ ಜಿಲ್ಲೆಯ ಸಮಗ್ರ ಮಾಹಿತಿ ದೊರೆಯುತ್ತದೆ. ಸಭೆಯಲ್ಲಿ ಸಮರ್ಪಕ ಉತ್ತರ ಹೇಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಶಾಲಾ ಕಟ್ಟಡಗಳ ನಿಮರ್ಾಣ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಶಾಲಾ ಕಟ್ಟಡ ನಿಮರ್ಾಣದಲ್ಲಿ ವಿಳಂಬಮಾಡುತ್ತಿರುವ ಲೋಕೋಪಯೋಗಿ ಇಲಾಖೆಗೆ ಅಂಗನವಾಡಿ ಕಟ್ಟಡ ನಿಮರ್ಾಣ ಜವಾಬ್ದಾರಿ ವಹಿಸದಂತೆ ಸಭೆಯಲ್ಲಿ ಸೂಚನೆ ನೀಡಿದರು.

ಅರಣ್ಯ ಇಲಾಖೆಯಿಂದ  ಈ ವರ್ಷಬೆಳೆಸಿರುವ ಸಸಿಗಳನ್ನು ವರದಾ ನದಿ ಪಾತ್ರದ ರೈತರಿಗೆ ಆದ್ಯತೆ ಮೇರೆಗೆ ವಿತರಿಸಲು ಸೂಚನೆ ನೀಡಲಾಯಿತು. ಜಲಸಂರಕ್ಷಣೆ ಯೋಜನೆಯಡಿ ಉದ್ಯೋಗ ಖಾತ್ರಿ ಅನುದಾನ ಬಳಸಿ ವರದಾ ನದಿ ಪಾತ್ರದಲ್ಲಿ 123 ಕಿ.ಮೀ. ಅರಣ್ಯ ಬೆಳೆಸುವ ಯೋಜನೆ ಹಾಕಿಕೊಳ್ಳಲಾಗಿದೆ. ಈ ಸಸಿಗಳನ್ನು ಇಲ್ಲಿ ಬಳಕೆ ಮಾಡಿದರೆ. ಸಸ್ಯ ಸಂರಕ್ಷಣೆ ಹಾಗೂ ಯೋಜನೆ ಸಫಲವಾಗುತ್ತದೆ ಎಂದು ಅರಣ್ಯಾಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಣಾಧಿಕಾರಿ ರಮೇಶ ದೇಸಾಯಿ ಅವರು ಸಲಹೆ ನೀಡಿದರು.

ಮಳೆಗಾಲ ಆರಂಭವಾಗಿರುವುದರಿಂದ ಈಗಾಗಲೇ ನಿರ್ಧರಿಸಿದಂತೆ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ನಿವೇಶನ ಲಭ್ಯವಿರುವ ಅಂಗನವಾಡಿ  ಕೇಂದ್ರಗಳ ಆವರಣದಲ್ಲಿ ಕಿಚನ್ ಗಾಡರ್್ನ್ ಬೆಳೆಸಲು ಕ್ರಮವಹಿಸಬೇಕು. ಇದೇ ಮಾದರಿಯಲ್ಲಿ ತೋಟಗಾರಿಕೆ ಇಲಾಖೆಯ ಸಮನ್ವಯತೆಯಿಂದ ಶಾಲಾ ಆವರಣ, ವಿದ್ಯಾಥರ್ಿ ನಿಲಯಗಳ ಆವರಣದಲ್ಲಿ ಕಿಚನ್ ಗಾಡರ್್ನ್ ನಿಮರ್ಾಣಕ್ಕೆ ಸಮಾಜ ಕಲ್ಯಾಣ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ , ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಗಳಿಗೆ ಸೂಚನೆ ನೀಡಿದರು.

ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಸೋಯಾಬೀನ್ ಬಿತ್ತನೆ ಬೀಜದ ವಿತರಣೆ, ಬಿತ್ತನೆ ಪ್ರದೇಶದ ಮಾಹಿತಿಯನ್ನು ಪಡೆದರು.

ಸಭೆಯಲ್ಲಿ  ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಗಿರಿಜವ್ವ ಬ್ಯಾಲದಹಳ್ಳಿ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ  ನಿರ್ಮಲಾ ಎನ್.ಕೆ., ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರತಿ ಪರೀಕ್ಷಾಥರ್ಿಗೂ ಸ್ಕ್ರೀನಿಂಗ್, ಮಾಸ್ಕ್ ಕಡ್ಡಾಯ: ಅಪರ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ