ಹುಬ್ಬಳ್ಳಿ 02: ಕರ್ನಾಟಕದ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ ಜಯಂತ್ಯೋತ್ಸವದ ಶುಭ ಸಂದರ್ಭದಲ್ಲಿ ಸಿದ್ಧೇಶ್ವರ ಪಾರ್ಕ, ಬನಕಾಶಿ ಬಸವೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಗಜ್ಯೋತಿ ಬಸವೇಶ್ವರ ಅವರ ಭಾವಚಿತ್ರಕ್ಕೆ ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ.ಹೊರಕೇರಿ ಅವರು ಜಗಜ್ಯೋತಿ ಬಸವೇಶ್ವರ ಅವರ ಭಾವಚಿತ್ರಕ್ಕೆ ಮಾಲಾರ್ಪಣೆಮಾಡುವ ಮೂಲಕ ಗೌರವ ಅರ್ಪಣೆ ಮಾಡಿ, ಭಕ್ತಿ ಪೂರ್ವಕ ನಮನಗಳನ್ನು ಸಲ್ಲಿಸಿದರು.
ಡಾ. ಸುರೇಶ ಡಿ. ಹೊರಕೇರಿ ಅವರು ಮಾತನಾಡಿ ಮನುಷ್ಯ ಮಾನಸಿಕ ಹಾಗೂ ದೈಹಿಕಒತ್ತಡಕ್ಕೆ ಸಿಲುಕಿ ತೊಂದರೆ ತಾಪತ್ರಯಗಳಿಗೆ ಈಡಾಗಿದ್ದಾನೆ. ಮನುಷ್ಯನ ಸಹಜ ಬದುಕಿಗೆ ಕುಂದುಉಂಟಾಗಿದೆ. ಇಂದಿನ ಸಾಮಾಜಿಕ, ರಾಜಕೀಯ, ಆರ್ಥಿಕ ಒತ್ತಡದಿಂದ ಮಾನವರ ಬದುಕು ಡೋಲಾಯ ಮಾನವಾಗಿದೆ. ಮೊಸ-ವಂಚನೆ, ದ್ವೇಷ-ಅಸೂಹೆ, ಅನೀತಿ-ಅನ್ಯಾಯ, ಸಾವು-ನೋವು, ಮೊದಲಾದವುಗಳು ತುಂಬಿ ತುಳುಕುತ್ತಿರುವ ಇಂದಿನ ಅಂಧಮಯ ದಿನಮಾನದಲ್ಲಿ ಬೆಳಕಾಗಿ ತೋರುತ್ತಿರುವುದು ಶರಣತತ್ವ. ಶರಣರ ವಿಚಾರಗಳಲ್ಲಿದೆ ಸಮಸ್ಯೆಗಳಿಗೆ ಪರಿಹಾರ. ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳಲು ಇರುವ ಮಾರ್ಗ ಮನುಷ್ಯಧರ್ಮದತ್ತ್ತ ವಾಲುವುದು. 12ನೇ ಶತಮಾನದ ಶರಣರು ಮಾನವರ ಸರ್ವತೋಮುಖ ಅಭಿವೃದ್ಧಿಗಾಗಿ ಚಿಂತಿಸಿದರು ಮಾತ್ರವಲ್ಲ ಅವರು ಮಾನಸಿಕ ನೆಮ್ಮದಿಗೆ ಬೇಕಾದತನು ಶುಚಿ, ಮನ ಶುಚಿ, ಭಾವ ಶುಚಿ ಮಾರ್ಗಗಳನ್ನು ತೋರಿದರು. ನುಡಿದಂತೆ-ನಡೆದುದು ಶರಣರ ಹೆಗ್ಗಳಿಕೆ ಎಂದರು. ಸೋಹನ ಸುರೇಶ ಹೊರಕೇರಿ, ಬನಕಾಶಿ ಶ್ರೀ ಬಸವೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯದರ್ಶಿ ಸುರೇಶ ಮ. ಲಿಂಬಿಕಾಯಿ, ಖಜಾಂಚಿಎಸ್.ಬಿ.ತಿಗಡಿ, ಪ್ರೊ ಎಸ್.ಸಿ.ಪಟ್ಟಣಶೆಟ್ಟಿ, ಸತೀಶ, ಪ್ರೀಯಾ ಕಲಾಲ, ಸಂಭಾಜಿ ಕಲಾಲ, ಡಿ.ಬಿ.ಬಾರಿಕಾಯಿ, ರಮೇಶ, ಭಕ್ತರು, ಭಾಗವಹಿಸಿದ್ದರು.