ಗಣೇಶ ಚತುರ್ಥಿ: ಶಾಂತಿ, ಸೌಹಾರ್ದದಿಂದ ಹಬ್ಬ ಆಚರಿಸಿ ಶ್ರಿ ಪಿಎಸ್‌ಐ ಎಲ್‌.ಬಿ. ಮಾಳಿ

ಗಣೇಶ ಚತುರ್ಥಿ: ಶಾಂತಿ, ಸೌಹಾರ್ದದಿಂದ ಹಬ್ಬ ಆಚರಿಸಿ ಶ್ರಿ ಪಿಎಸ್‌ಐ ಎಲ್‌.ಬಿ. ಮಾಳಿ  Ganesh Chaturthi: Celebrate the festival with peace and harmony – PSI L.B. Mali


ಯರಗಟ್ಟಿ 6: ಗಣೇಶ ಚತುರ್ಥಿ ಹಬ್ಬವನ್ನು ಗ್ರಾಮದಲ್ಲಿ ಪರಸ್ಪರ ಪ್ರೀತಿ, ಶಾಂತಿ ಹಾಗೂ ಸೌಹಾರ್ದದಿಂದ ಆಚರಿಸಬೇಕು. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಎಲ್ಲರೂ ಸಹಕರಿಸಬೇಕು ಎಂದು ಪಿಎಸ್‌ಐ ಎಲ್‌.ಬಿ. ಮಾಳಿ ಹೇಳಿದರು.  

ತಾಲೂಕಿನ ಜೀವಾಪುರ ಹಾಗೂ ಜಾಲಿಕಟ್ಟಿ ಗ್ರಾಮಗಳಲ್ಲಿ ಗಣೇಶ ಚತುರ್ಥಿ ಅಂಗವಾಗಿ ನಡೆದ ಶಾಂತಿ ಪಾಲನಾ ಸಭೆಯಲ್ಲಿ ಅವರು ಮಾತನಾಡಿದರು. ಹಬ್ಬದ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಿದೆ ಎಂದರು.  

ಡಿಜೆ, ಪ್ರೆಶರ್ ಮೈಕ್ ಬಳಕೆಗೆ ನಿರ್ಬಂಧ  

ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ಹೆಚ್ಚಿನ ಶಬ್ದ ಹೊರಸೂಸುವ ಡಿಜೆ ಮತ್ತು ಪ್ರೆಶರ್ ಮೈಕ್ ಸ್ಪೀಕರ್ಗಳ ಬಳಕೆಗೆ ಅನುಮತಿ ಇರುವುದಿಲ್ಲ. ಸುಪ್ರೀಂ ಕೋರ್ಟ್ನ ನಿಯಮಾವಳಿಗಳಂತೆ ನಿಗದಿಪಡಿಸಿರುವ ಡೆಸಿಬಲ್ ಮಿತಿಯೊಳಗೆ ಸಾಂಪ್ರದಾಯಿಕ ಧ್ವನಿವರ್ಧಕಗಳನ್ನು ಮಾತ್ರ ಬಳಸಬೇಕು ಎಂದು ಸೂಚಿಸಿದರು.  

ಡಿಜೆ ಬದಲಾಗಿ ಕಲಾತ್ಮಕ ಹಾಗೂ ಸಾಂಪ್ರದಾಯಿಕ ಡೋಲು, ತಾಸೆ, ಲೇಜಿಮ್ ಮತ್ತು ಭಜನಾ ಮೇಳಗಳ ಬಳಕೆಗೆ ಆದ್ಯತೆ ನೀಡಬೇಕು ಎಂದು ಅವರು ಹೇಳಿದರು.  

ಈ ಸಂದರ್ಭದಲ್ಲಿ ಎಎಸ್‌ಐ ಬಿ.ಕೆ. ರಂಗಣ್ಣವರ, ಪಿಎಸ್‌ಐ ಎಂ.ಬಿ. ಸಣ್ಣನಾಯ್ಕರ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಹಲವು ಮುಖಂಡರು ಮತ್ತು ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು.