ರಾಜ್ಯಮಟ್ಟದ ಸಾಂಸ್ಕೃತಿಕ ಹಬ್ಬದಲ್ಲಿ ಜಿ.ಎಚ್ ಕಾಲೇಜು ಸಾಧನೆ
ಲೋಕದರ್ಶನ ವರದಿ
ಹಾವೇರಿ 11: ನಗರದ ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ವಿದ್ಯಾಥರ್ಿಗಳು ಇತ್ತೀಚೆಗೆ ಮೈಸೂರಿನ ವಿಶ್ವಮಾನವ ವಿದ್ಯಾಥರ್ಿ ಯುವ ವೇದಿಕೆ ಹಮ್ಮಿಕೊಂಡಿದ್ದ 'ರಾಜ್ಯಮಟ್ಟದ ಅಂತರ ಮಹಾವಿದ್ಯಾಲಯಗಳ ಸಾಂಸ್ಕೃತಿಕ ಹಬ್ಬ-2018'ರಲ್ಲಿ ಭಾಗವಹಿಸಿ ಹಲವಾರು ಹಂತಗಳ ಪ್ರಶಸ್ತಿ, ಪದಕಗಳನ್ನು ಬಾಚಿಕೊಂಡಿರುತ್ತಾರೆ.
ಬಿಕಾಂ. ವಿಭಾಗದ ವಿದ್ಯಾಥರ್ಿನಿ ಮೇಘನಾ ಪಾಟೀಲ ಹಿಂದಿ ಚಿತ್ರಗೀತೆ, ಭಾವಗೀತೆ ಪ್ರಥಮ ಹಾಗೂ ಕನ್ನಡ ಚಿತ್ರಗೀತೆ ತೃತೀಯ, ಬಿಸಿಎ ವಿಭಾಗದ ಕಿರಣಕುಮಾರ ದೊಡ್ಡಮನಿ ಚಚರ್ಾ ಸ್ಪಧರ್ೆಯಲ್ಲಿ ತೃತೀಯ, ಬಿಎ ವಿಭಾಗದ ಲಿಂಗರಾಜ ಕುರುಬರ ಕಿರುನಾಟಕದಲ್ಲಿ ತೃತೀಯ, ಸ್ವರಚಿತ ಕವನವಾಚನದಲ್ಲಿ ಸಮಾಧಾನಕರ ಬಹುಮಾನಗಳನ್ನು ಪಡೆದು ರಾಜ್ಯಮಟ್ಟದ ಪುರಸ್ಕಾರಗಳನ್ನು ಪಡೆದಿರುತ್ತಾರೆ.
ಸ್ಪಧರ್ೆಯಲ್ಲಿ ಭಾಗವಹಿಸಿದ್ದ ಒಟ್ಟು 23 ಜನರ ತಂಡಕ್ಕೆ ಕಾಲೇಜು ಒಕ್ಕೂಟದ ಕಾಯಾಧ್ಯಕ್ಷ ಪ್ರೊ. ಡಿ. ಎ. ಕೊಲ್ಲಾಪುರೆ, ಡಾ|| ಸಿ. ಮಲ್ಲಣ್ಣ, ಪ್ರೊ. ಸಿದ್ಧೇಶ್ವರಯ್ಯ ಹುಣಸಿಕಟ್ಟಿಮಠ ಮಾರ್ಗದರ್ಶನ ನೀಡಿದ್ದರು. ವಿದ್ಯಾಥರ್ಿಗಳ ಸಾಧನೆಗೆ ಕೆ.ಎಲ್.ಇ. ಸಂಸ್ಥೆಯ ಆಡಳಿತ ಮಂಡಳಿ, ಸ್ಥಾನಿಕ ಮಂಡಳಿ, ಪ್ರಾಚಾರ್ಯರು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾಥರ್ಿಗಳು ಅಭಿನಂದಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 