ಸಿಎಸ್ ಕೋರ್ಸ್ನಿಂದ ಭವಿಷ್ಯ: ಚಂದನ

ಸಿಎಸ್ ಕೋರ್ಸ್ನಿಂದ ಭವಿಷ್ಯ: ಚಂದನ Future from CS course: Chandana

ಗಂಗಾವತಿ 07: ನಗರದ ಶ್ರೀ ಕೊಲ್ಲಿ ನಾಗೇಶ್ವರ ರಾವ್ ಗಂಗಯ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ, ಪ್ಲೇಸ್ಮೆಂಟ್ ಘಟಕದ ವತಿಯಿಂದ ಹಾಗೂ ಋಖಋ ಬೆಂಗಳೂರು ಚಾಪ್ಟರ್ ಸಹಯೋಗದೊಂದಿಗೆ ಪದವಿ ವಿದ್ಯಾರ್ಥಿಗಳಿಗೆ (ಕಂಪೆನಿ ಸೆಕ್ರೆಟರಿ) ಕೋರ್ಸಿನ ತಿಳುವಳಿಕೆ ಮೂಡಿಸಲಾಯಿತು, ಸಂಪನ್ಮೂಲ ವ್ಯಕ್ತಿಗಳಾಗಿ ಅಖ ಚಂದನ ಅವರು ವಿದ್ಯಾರ್ಥಿಗಳಿಗೆ ಅಖ ವಿಷಯಗಳ ಬಗ್ಗೆ, ಭವಿಷ್ಯದ ಅವಕಾಶಗಳ ಬಗ್ಗೆ, ಓದಲು ತಗಲುವ ವೆಚ್ಚ, ಶಿಸ್ತಿನ ತಯಾರಿ ಇಂದ ಅಖ ಬಹಳ ಸುಲಭವಾಗಿ ಓದಬಹುದು ಎಂದು ವಿವರಿಸಿದರು. ಈ ಸಮಯದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶಿವರಾಜ ಗುರಿಕಾರ ಮಾತನಾಡಿವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳ ಸದುಪಯೋಗ ವನ್ನು ಪಡಿಸಿಕೊಳ್ಳಬೇಕು ಎಂದು ಮನವರಿಕೆ ಮಾಡಿದರು, 

ಸಂಚಾಲಕರಾದ ಶ್ರೀ ಮಂಜುನಾಥ ಕೆ ಎಚ್ ಅವರು ವೃತ್ತಿಪರ ಪದವಿಗಳ ಬಗ್ಗೆ ಸಂಕ್ಷಿಪ್ತವಾಗಿ ಮಾತನಾಡಿದರು. ಹಾಗೂ ಪ್ಲೇಸ್ಮೆಂಟ್ ಘಟಕದ ಸಂಚಾಲಕರಾದ ಅಶ್ರಫ್ ಅಳ್ಳಳ್ಳಿ ಪ್ರಾಸ್ತಾವಿಕವಾಗಿ ಅಖ ಪದವಿಯ ರೂಪು ರೇಷೆಗಳನ್ನು,  ಅವಕಾಶಗಳು ಹಾಗೂ ಪದವಿಯ ಮಹತ್ವವನ್ನು ವಿವರಿಸಿದರು, ಹಾಗೂ ಈ ಕಾರ್ಯಕ್ರಮದಲ್ಲಿ ಗಣಕ ವಿಜ್ಞಾನ ವಿಭಾಗದ ಶ್ರೀ ರವಿಕುಮಾರ್ ಕೆ, ನಿರ್ವಹಣಾಶಾಸ್ತ್ರ ವಿಭಾಗದ ಶ್ರೀಮತಿ ಅನಿತಾ ಕೆ ಎಂ, ರಾಜ್ಯ ಶಾಸ್ತ್ರ ವಿಭಾಗದ ಬಿ. ಫಣಿರಾಜ,  ವಾಣಿಜ್ಯಶಾಸ್ತ್ರ ವಿಭಾಗದ ಶ್ರೀ ಅಕ್ಕಿ ಮಾರುತಿ, ಶಿವಕುಮಾರ ಉಪವಾಸಿ, ಗಣಿತ ಶಾಸ್ತ್ರ ವಿಭಾಗದ ಡಾ. ಅಶೋಕ, ರಸಾಯನ ಶಾಸ್ತ್ರ ವಿಭಾಗದ ಶ್ರೀ ಮಲ್ಲಿಕಾರ್ಜುನ ಹಾಗೂ ಇನ್ನಿತರ ಅಧ್ಯಾಪಕರು ಹಾಜರಿದ್ದರು.