ಉಚಿತ ವಿಶೇಷ ಬಾಳೆಹಣ್ಣಿನ ಅನುಭೂತ ಓಷಧ ವಿತರಣಾ ಶಿಬಿರ

ಉಚಿತ ವಿಶೇಷ ಬಾಳೆಹಣ್ಣಿನ ಅನುಭೂತ ಓಷಧ ವಿತರಣಾ ಶಿಬಿರ Free special banana-based medicine distribution camp

ಲೋಕದರ್ಶನ ವರದಿ 

ಚಿಕ್ಕೋಡಿ 02: ಕೆ.ಎಲ್‌.ಇ ಸಂಸ್ಥೆಯ ಆಯುರ್ವೇದ ಆಸ್ಪತ್ರೆ, ಬಸವ ಸರ್ಕಲ್ ಚಿಕ್ಕೋಡಿ ಇವರ ವತಿಯಿಂದ ಉಚಿತ ವಿಶೇಷ ಬಾಳೆಹಣ್ಣಿನ ಅನುಭೂತ ಓಷಧ ವಿತರಣಾ ಶಿಬಿರವನ್ನು 04ರಂದು ಮುಂಜಾನೆ 06:00 ರಿಂದ ಮುಂಜಾನೆ 8:00ರವರೆಗೆ ಏರಿ​‍್ಡಸಲಾಗಿದೆ.  

ಶಿಬಿರದಲ್ಲಿ ಕೆಮ್ಮು, ದಮ್ಮು, ಶೀತ, ಅಲರ್ಜಿ, ಅಸ್ತಮಾ, ಇತರೆ ಶ್ವಾಸರೋಗಗಳಿಗೆ ಬಾಳೆಹಣ್ಣಿನ ವಿಶೇಷ ಅನುಭೂತ ಆಯುರ್ವೇದ ಓಷಧವನ್ನು 3 ವರ್ಷ ಮೇಲ್ಪಟ್ಟವರಿಗೆ ಮಾತ್ರ ನೀಡಲಾಗುವುದು.  ಆಸಕ್ತರು ಪೂರ್ವ ನೋಂದಣಿಯನ್ನು ಒಂದು ದಿನ ಮುಂಚಿತವಾಗಿ ದೂರವಾಣಿಯ ಮೂಲಕ ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಮಾಡಿಸಬೇಕು ಮತ್ತು  ಓಷಧಿಯನ್ನು ವೈದ್ಯರ ಸಮ್ಮುಖದಲ್ಲಿ ಸೇವಿಸಿ ಒಂದು ಘಂಟೆ ನಂತರ ಅನುಮತಿ ಪಡೆದು ಹೋಗಬೇಕು. ನೊಂದಾಯಿತ ಮೊದಲ 100 ಜನರಿಗೆ ಮಾತ್ರ ಓಷಧಿಯನ್ನು ಪಡೆಯಲು ಬರುವವರು ಬೆಳಿಗ್ಗೆ 6 ರಿಂದ 8 ಘಂಟೆಯೊಳಗೆ ಖಾಲಿ ಹೊಟ್ಟೆಯಲ್ಲಿ ಬರಬೇಕು.  

ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ಕಿರಣ ಮುತ್ನಾಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಧಿಕ ಮಾಹಿತಿಗಾಗಿ ಸಂಪರ್ಕಿಸಿ 08338275100.