ಇಂದು ಉಚಿತ ಹೃದಯರೋಗ ತಪಾಸಣಾ ಶಿಬಿರ
Free heart disease check-up camp today
ಬೀಳಗಿ 31: ತಾಲೂಕಿನ ಯಡಹಳ್ಳಿ ಗ್ರಾಮದ ಗ್ರಾಪಂ ಕಾರ್ಯಾಲಯದ ಎದುರು ಇರುವ ಹಳೆ ಕನ್ನಡ ಶಾಲಾ ಆವರಣದಲ್ಲಿ ದಿ.01.ರಂದು ಮುಂ.9.00 ಗಂಟೆಗೆ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಉಚಿತ ಹೃದಯರೋಗ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೃದಯರೋಗ ತಜ್ಞ ಡಾ.ವಿಕ್ರಮ್ ಎಸ್ ಪಾಟೀಲ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆದ 27 ವರ್ಷಗಳ ಹಿಂದೆ ಲಂಡನ್ ರಾಷ್ಟ್ರದಿಂದ ಡಾ. ಪ್ರೋ ಸ್ಟಾಬಿಲಿ ಅವರು ಈ ಭಾಗದ ಹಳ್ಳಿಗಳಿಗೆ ಭೇಟಿ ನೀಡಿ ಹೃದಯರೋಗ ತಪಾಸಣೆ ಮಾಡಿ ಹಲವಾರು ಜನರಿಗೆ ಉಪಯೋಗ ಆಗುವ ಚಿಕಿತ್ಸೆ ನೀಡಿದ್ದು ನನ್ನನ್ನು ಹೃದಯರೋಗ ಡಾಕ್ಟರ್ ಆಗುವಂತೆ ಮಾಡಿದ್ದು ಬೆಂಗಳೂರಿನ ಪ್ರತಿಷ್ಠಿತ ಹೃದಯರೋಗ ಆಸ್ಪತ್ರೆಯಲ್ಲಿ ಡಾ ಸಿ ಎನ್ ಮಂಜುನಾಥ ಅವರ ಹತ್ತಿರ ಹಲವಾರು ಹೃದಯರೋಗಗಳಿಗೆ ಚಿಕಿತ್ಸೆ ನೀಡುತ್ತಿದ್ದೇನೆ, ಹಿರಿಯರು ದೊಡ್ಡಪ್ಪನವರಾದ ಶಾಸಕ ಜೆ ಟಿ ಪಾಟೀಲ್ ಹಾಗೂ ತಂದೆಯವರಾದ ಶಿವನಗೌಡ ಟಿ ಪಾಟೀಲ ಅವರ ಜನಸೇವೆ ಗಮನಿಸಿ ಬಾಗಲಕೋಟೆ ಜಿಲ್ಲೆಯಲ್ಲಿ ಪ್ರತಿ ತಿಂಗಳು ಇಂತಹ ಶಿಬಿರ ಹಮ್ಮಿಕೊಳ್ಳಬೇಕು ಎಂದು ಕನ್ನಡ ರಾಜ್ಯೋತ್ಸವ ದಿನದಂದು ಈ ಶಿಬಿರ ಆರಂಭ ಮಾಡಿ ಈ ಭಾಗದ ಜನರ ಸೇವೆ ಮಾಡಬೇಕು ಎಂದು ಉದ್ದೇಶಿಸಲಾಗಿದೆ ಎಂದರು.
ಡಾ ಆರ್ ಟಿ ಪಾಟೀಲ್ ಅವರ ನೇತ್ರತ್ವದಲ್ಲಿ ಜರುಗುವ ಈ ಶಿಬಿರದ ಸಾನಿಧ್ಯವನ್ನು ಮರೆಗುದ್ದಿ ದಿಗಂಬರೇಶ್ವರ ಸ್ವಾಮೀಜಿ ವಹಿಸಲಿದ್ದು, ಹಿರಿಯರಾದ ಡಾ.ಎಂ.ಆರ್.ದೇಸಾಯಿ ಅವರು ಉದ್ಘಾಟಿಸಲಿದ್ದಾರೆ ಎಂದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 