ಉಚಿತ ಆರೋಗ್ಯ ತಪಾಸಣಾ ಶಿಬಿರ

Free health check-up camp- Mudalagi

ಮೂಡಲಗಿ 18: ಇಲ್ಲಿನ ಕಲ್ಮೇಶ್ವರ ವೃತ್ತದ ಬಳಿಯ ನವಜೀವನ ಆಸ್ಪತ್ರೆಯಲ್ಲಿ ನವಜೀವನ ಆಸ್ಪತ್ರೆ ಹಾಗೂ ಖಿದ್ಮಮತ್ ಸೋಷಿಯಲ್ ವೆಲ್ಫೇರ್ ಕಮೀಟಿ ಸಂಯುಕ್ತ ಆಶ್ರಯದಲ್ಲಿ  ಉಚಿತ ಆರೋಗ್ಯ ತಪಾಸಣಾ ಶಿಬಿರ ಮಂಗಳವಾರ ಜರುಗಿತು.                                               

ಶಿಬಿರವನ್ನು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಭಾರತಿ ಕೋಣಿ ಹಾಗೂ ನವಜೀವನ ಆಸ್ಪತ್ರೆ ವೈದ್ಯ ಡಾ.ಅಬ್ದುಲ್ ರಸೀದ್ ನಗಾರ್ಚಿ ಅವರು ಉದ್ಘಾಟಿಸಿದರು.   

ಮಹಾಲಿಂಗಪೂರದ ಕೃಷ್ಣಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯ ಡಾ. ಗೀರೀಶ್ ಕೊರಡ್ಡಿ  ಸೇರಿದಂತೆ ಅನೇಕ ತಜ್ಞ ವೈದ್ಯರು 162 ಕ್ಕೂ ಹೆಚ್ಚು ಜನರು ತಪಾಸನೆ ಮಾಡಿದರು. ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ ಮುಖಂಡರಾದ ಅಜೀಜ ಡಾಂಗೆ, ಅನ್ವರ್ ನದಾಫ್, ಮಲೀಕ ಹುಣಶ್ಯಾಳ, ರಾಘವೇಂದ್ರ ಪಾಟೀಲ, ಗಜಬರ ಗೋಕಾಕ ಸೇರಿದಂತೆ ವೆಲ್ಫೇರ್ ಕಮೀಟಿ ಸದಸ್ಯರು ಹಾಗೂ ಮುಂತಾದವರು ಇದ್ದರು.