ಕಾಗವಾಡದಲ್ಲಿ ಉಚಿತ ಆರೋಗ್ಯ ಶಿಬಿರ: 280 ಜನರಿಗೆ ತಪಾಸಣೆ
Free health camp in Kagwad: 280 people examined
ಲೋಕದರ್ಶನ ವರದಿ
ಕಾಗವಾಡ 10 : ಮತಕ್ಷೇತ್ರದ ಸಂಬರಗಿಯಲ್ಲಿ ರವಿವಾರ ದಿ. 09 ರಂದು ಮಹಾರಾಷ್ಟ್ರದ ಮಿರಜ ಪಟ್ಟಣದ ಸ್ಪಂದನ ಹೃದಯಾಲಯ ಮತ್ತು ಸೂಪರ್ ಸ್ಪೆಷಲಿಸ್ಟ್ ಆಸ್ಪತ್ರೆಯಿಂದ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿತ್ತು.
ಈ ಶಿಬಿರವನ್ನು ಡಾ. ರಿಯಾಜ ಮುಜಾವರ, ಡಾ. ಸಚಿನ್ ಗಾವಡೆ ಮತ್ತು ಮೊರಯಾ ಗ್ರೂಪ್ನ ದೀಪಕ ಪಾಟೀಲ ಉದ್ಘಾಟಿಸಿದರು. ಶಿಬಿರದಲ್ಲಿ ಭಾಗವಹಿಸಿದವರಿಗೆ ಪರೀಕ್ಷೆಗಳನ್ನು ನಡೆಸಲಾಯಿತು,
ಇದರಲ್ಲಿ 50 ಜನರಿಗೆ ಇಸಿಜಿ, 50 ಕ್ಯಾನ್ಸರ್ ರೋಗಿಗಳು, 20 ಮೂತ್ರಶಾಸ್ತ್ರ ರೋಗಿಗಳು, 40 ಇತರ ಕಾಯಿಲೆಗಳ ರೋಗಿಗಳು, 40 ಸಕ್ಕರೆ-ಬಿಪಿ, 80 ಇತರ ವಿವಿಧ ಕಾಯಿಲೆಗಳು ಸೇರಿ ಒಟ್ಟು 280 ಜನರನ್ನು ಪರೀಕ್ಷಿಸಲಾಯಿತು.
ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಅವರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗಿದ್ದು, ಪ್ರತಿಯೊಬ್ಬರ ಕರ್ನಾಟಕ ಸರ್ಕಾರದ ಯೋಜನೆಗಳನ್ನು ಪಡೆಯಬೇಕೆಂದು ವೈದ್ಯರು ವಿನಂತಿಸಿದ್ದಾರೆ. ಈ ಸಮಯದಲ್ಲಿ, ಗಣೇಶ ಅವಳೆಕರ, ಡಾ. ಅಮಿತ್ ಜೋಶಿ ಸೇರಿದಂತೆ ಆಸ್ಪತ್ರೆಯ ಇತರ ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 