ಉಚಿತ ಆಯುರ್ವೇದಿಕ ಚಿಕಿತ್ಸಾ ಅಭಿಯಾನ

ಉಚಿತ ಆಯುರ್ವೇದಿಕ ಚಿಕಿತ್ಸಾ ಅಭಿಯಾನ Free Ayurvedic treatment campaign

ಯಮಕನಮರಡಿ, 19 : ಸಮೀಪದ ಹತ್ತರಗಿ ಆನಂದಪೂರ ಗ್ರಾಮದಲ್ಲಿರುವ ಆಯುರ್ವೇದಿಕ ಆಸ್ಪತ್ರೇ ಹಾಗೂ ಗ್ರಾಮ ಪಂಚಾಯತಿ ಹತ್ತರಗಿ ಇವರ ಸಂಯುಕ್ತಾಶ್ರಯದಲ್ಲಿ ದಿ. 19 ರಂದು ಸಾರ್ವಜನಿಕ ಉಚಿತ ಆರೋಗ್ಯ ತಪಾಸನಾ ಶಿಭಿರ ಮಾಡಲಾಯಿತು. ಕರ್ನಾಟಕ ಸರ್ಕಾರ ಜಿಲ್ಲಾ ಪಂಚಾಯತ, ಜಿಲ್ಲಾ ಆಯುಷ ಇಲಾಖೆ ಬೆಳಗಾವಿ. ರಾಷ್ಟ್ರೀಯ ಆಯುಷ್ ಅಭಿಯಾನದಡಿ “ಆಯುಷ್ ಗ್ರಾಮ” ಸ್ಥಳೀಯ ಓಷದಿಯ ಗಿಡಮೂಲಿಕೆಗಳ ಗುರುತಿಸುವಿಕೆ, ಮನೆ ಮದ್ದುಗಳ ತಯ್ಯಾರಿಕಾ ಕಾರ್ಯಕ್ರಮ ಸಾಂಕ್ರಾಮಿಕ ರೋಗಗಳು ಹರಡುವ ಬಗ್ಗೆ ನಿಯಂತ್ರಣೋಪಾಯಗಳು ಆಯುಷ್ ಪದ್ದತ್ತಿಗಳ ಜಾಗೃತಿಗೊಳಿಸಲಾಯಿತು. ಈ ಸಂದರ್ಬದಲ್ಲಿ ವೈಧ್ಯಾಧಿಕಾರಿಗಳಾದ ಚಂದ್ರಶೇಖರ ಜಂಬಗಿ ಹತ್ತರಗಿ ಗ್ರಾ.ಪಂ ಅಧಿಕಾರಿ ಆನಂದ ಹೋಳೆನ್ನವರ ಗ್ರಾ.ಪಂ ಅಧ್ಯಕ್ಷ ಸಮೀರ್ ಬೇಪಾರಿ, ಡಾ. ತೇಜಸ್ವಿನಿ ತುಪ್ಪದ, ಇಎಸ್‌ಓ ಅಮೃತ್ ಮಜ್ಜಿಗಿ ಹಾಗೂ ಅಂಗನವಾಡಿ ಕಾರ್ಯಕರ್ತರು ್ಘ ಆಶಾ ಕಾರ್ಯಕರ್ತರು ಉಪಸ್ಥಿತರಿದ್ದು ಗ್ರಾಮದ ಜನರಿಗೆ ಉಚಿತ ಓಷದ ವಿತರಿಸಲಾಯಿತು.