ನಾಲ್ಕನೇ ವಾರ್ಷಿಕ ಸಭೆ

ನಾಲ್ಕನೇ ವಾರ್ಷಿಕ ಸಭೆ Fourth Annual Meeting

ಯರಗಟ್ಟಿ  09:  ಅಕ್ಕಮಹಾದೇವಿ ಮಹಿಳಾ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯ 4ನೇ ವರ್ಷದ ವಾರ್ಷಿಕ ಸಭೆ ಸ್ಥಳೀಯ ಮಹಾಂತ ದುರದುಂಡೇಶ್ವರ ಶ್ರೀಮಠದಲ್ಲಿ ನಡೆಯಿತು. 

ವರದಿ ಸಾಲಿನಲ್ಲಿ ಸಂಘವು 320456.24 ರೂ. ನಿವ್ವಳ ಲಾಭ ಗಳಿಸಿದ್ದು, ಶೇ. 5 ಡಿವಿಡೆಂಡ್ ನೀಡಲಾಯಿತು.  

ಕಾಯ್ದಿಟ್ಟ ನಿಧಿ 25ಅ, ಸಹಕಾರ ಶಿಕ್ಷಣ ನಿಧಿ 2ಅ, ಧರ್ಮಾರ್ಥಕ ನಿಧಿ 2ಅ ಮುಳುಗವ ಸಾಲ ನಿಧಿ 5ಅ ಜುಬಲಿ ನಿಧಿ 3ಅ, ಸದಸ್ಯರ ಕಲ್ಯಾಣ ನಿಧಿ 5ಅ ಇಡಲಾಗಿದೆ ಸಂಘದ ಒಟ್ಟು ದುಡಿಯುವ ಬಂಡವಾಳ 48635320-50ರೂ. ಇರುತ್ತದೆ ಎಂದು ಸಂಘದ ಅಧ್ಯಕ್ಷ ಶೀಲ್ಪಾ ಹಾದಿಮನಿ ಅಧ್ಯಕ್ಷತೆ ವಹಿಸಿ ಹೇಳಿದರು. 

ಈ ವೇಳೆ ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳಿ ನಿರ್ದೇಶಕರಾದ ಉಮೇಶ ಬಾಳಿ, ಡಾ. ಸಂಜಯ ಹೊಮಠ, ತಮ್ಮಣ್ಣಾ ಕೆಂಚರಡ್ಡಿ, ಸಂಘದ ಉಪಾಧ್ಯಕ್ಷ ಸುರೇಖಾ ಅಂಗಡಿ, ನಿರ್ದೇಶಕರಾದ ಅನ್ನಪೂರ್ಣಾ ಜಕಾರಿ, ಸವಿತಾ ಬಾಳಿ, ನಿರ್ಮಲಾ ಮದ್ದಾನಿ, ನೀತಾ ಪಾಟೀಲ, ನೀಲಾ ಬೆಣ್ಣಿ, ನಿರ್ಮಲಾ ನಿಜಗುಲಿ, ಶೈಲಜಾ ಪಟ್ಟಣಶೆಟ್ಟಿ, ವೇದಾ ಕಮ್ಮಾರ, ನೇತ್ರಾವತಿ ಕಾಮಣ್ಣವರ, ಸುನೀತಾ ಸತ್ತಿಗೇರಿ, ರೇಖಾ ತಳವಾರ, ಮುಖ್ಯ ಕಾರ್ಯನಿರ್ವಾಹಕಿ ಸೌಮ್ಯಾ ಸಂಗಪ್ಪನ್ನವರ, ಗಂಗಾ ಶಿವಾಪೂರ, ಶಿವಕುಮಾರ ಅಂಗಡಿ, ಶ್ರೀದೇವಿ ಬಾಗಿಹಳ್ಳಿ, ಯಲ್ಲನಾಯ್ಕ ಸತ್ಯನಾಯ್ಕರ, ಸ್ಪೂರ್ತಿ ಗುಂಡ್ಲೂರ, ಮೋಹನ ಹಾದಿಮನಿ, ತಮ್ಮಣ್ಣಾ ಕಾಮಣ್ಣವರ, ಶಿವಾನಂದ ಮದ್ದಾನಿ, ದೇವೇಂದ್ರ ಕಮ್ಮಾರ ಸೇರಿದಂತೆ ಇತ್ತರರು ಇದ್ದರು.