ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಈದ್ಗಾ ಕಟ್ಟಡಕ್ಕೆ ಅಡಿಗಲ್ಲು

ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಈದ್ಗಾ ಕಟ್ಟಡಕ್ಕೆ ಅಡಿಗಲ್ಲು   Foundation stone laid for Idgah building amidst religious rituals


ಹುಲಗೂರು, ಆ.29: ತಾಲೂಕಿನ ಹುಲಗೂರು ಗ್ರಾಮದ ಪ್ರಸಿದ್ಧ ಹಜರತ್ ಸೈಯದ್ ಹಜರತ್ ಶಾ ಖಾದ್ರಿ ದರ್ಗಾ ಶರೀಫ್ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಈದ್ಗಾ ಕಟ್ಟಡದ ಅಡಿಗಲ್ಲು ಕಾರ್ಯಕ್ರಮ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನೆರವೇರಿತು.  

ಶ್ರೀ ಸೈಯದ್ ಅಬ್ದುಲ್ಹಸನ್ ಖಾದ್ರಿ ಹಾಗೂ ಖಾದ್ರಿ ಮನೆತನದ ಗುರುಗಳ ಸಾನ್ನಿಧ್ಯದಲ್ಲಿ, ಕರ್ನಾಟಕ ಸರ್ಕಾರದ ಹೆಸ್ಕಾಂ ನಿಗಮದ ಅಧ್ಯಕ್ಷರು ಹಾಗೂ ಮಾಜಿ ಶಾಸಕ ಸೈಯದ್ ಅಜೀಂ ಪೀರ್ ಖಾದ್ರಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.  

ಈ ಸಂದರ್ಭದಲ್ಲಿ ಸೈಯದ್ ಯಾಸಿನ್ ಪೀರ್ ಖಾದ್ರಿ, ಸೈಯದ್ ವಲಿವುಲ್ಲಾ ಖಾದ್ರಿ, ಸೈಯದ್ ಪೀರಭಾಷಾ ಖಾದ್ರಿ, ಸೈಯದ್ ಗೌಸ್ ಪೀರ್ ಖಾದ್ರಿ, ಸೈಯದ್ ಯುನೀಸ್ ಪೀರ್ ಖಾದ್ರಿ, ನರಸುಲ್ಲಾ ಖಾದ್ರಿ ಸೇರಿದಂತೆ ಅಜ್ಜುಮನ್ ಅಧ್ಯಕ್ಷ ರಿಯಾಜ್ ಮುಲ್ಲಾ ಹಾಗೂ ಸಮಿತಿಯ ಸದಸ್ಯರು, ಜಮಾಯತ್ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.