ಮಾಜಿ ಸಚಿವ ಶ್ರೀಮಂತ ಪಾಟೀಲಗೆ ಸನ್ಮಾನ

ಮಾಜಿ ಸಚಿವ ಶ್ರೀಮಂತ ಪಾಟೀಲಗೆ ಸನ್ಮಾನ Former Minister Shrimant Patil honored


ಸಂಬರಗಿ 19: ಶಿವ ಛತ್ರಪತಿ ಮಹಾರಾಜರ ಪ್ರತಿಮೆ ಲೋಕಾರೆ​‍್ಣ ಕಾರ್ಯಕ್ರಮಗಳಲ್ಲಿ ಸಿಂಹಪಾಲು ಪಡೆದಿದ್ದಕ್ಕಾಗಿ ಶಿನಾಳ ಗ್ರಾಮದ ಮರಾಠಾ ಸಮುದಾಯದ ಮುಖ್ಯಸ್ಥ ಗ್ರಾಮ ಪಂಚಾಯತ್ ಸದಸ್ಯ ಅಶೋಕ್ ಡಿ ಪಾಟೀಲ್ ನೇತೃತ್ವದಲ್ಲಿ ಕೆಂಪವಾಡ ಕಾರ್ಖಾನೆಯಲ್ಲಿ ಮಾಜಿ ಸಚಿವ ಶ್ರೀಮಂತ್ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.  

ಶ್ರೀಮಂತ ಪಾಟೀಲ ಮಾತನಾಡಿ ಸಮಾಜವನ್ನು ಅಭಿವೃದ್ಧಿಪಡಿಸುವುದು ನನ್ನ ಗುರಿ ಮತ್ತು ಸಮಾಜದ ತಳಮಟ್ಟದಲ್ಲಿರುವ ಜನರು ಸುಧಾರಿಸಬೇಕು ಎಂದು ಹೇಳಿದರು. ನಾನು ಯಾವಾಗಲೂ ಅದಕ್ಕಾಗಿ ಪ್ರಯತ್ನಿಸಿದ್ದೇನೆ. ಸಮಾಜದ ಎಲ್ಲ ಜನರ ಸಹಕಾರದಿಂದ ನಾನು ಉನ್ನತ ಸ್ಥಾನವನ್ನು ತಲುಪಿದ್ದರೂ, ಹಿಂದಿನ ಸಮಾಜದ ಸಮಸ್ಯೆಗಳನ್ನು ನಾನು ಮರೆತಿಲ್ಲ. ಸಮಾಜವನ್ನುಅಭಿವೃದ್ಧಿಪಡಿಸುವುದು ನನ್ನ ಗುರಿ.  

 ಹಿಮ್ಮತ್ ಪಾಟೀಲ್ ರಾಮಚಂದ್ರ ಕವ್ಟೇಕರ್, ಶಿವಾಜಿ ಪಾಟೀಲ್ ರಾಮನ್ ಪಾಟೀಲ್ ಇಂದ್ರಜಿತ್ ಕವ್ಟೇಕರ್ ನಾನಾ ಕವ್ಟೇಕರ್ ಉಪಸ್ಥಿತರಿದ್ದರು.  ಫೋಟೋ ಶಿನಾಳ ಗ್ರಾಮದ ಮರಾಠಾ ಸಮುದಾಯದ ಮುಖ್ಯಸ್ಥ ಅಶೋಕ್ ಡಿ ಪಾಟೀಲ್ ನೇತೃತ್ವದಲ್ಲಿ ಶ್ರೀಮಂತ್ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು. ರಾಮನ್ ಪಾಟೀಲ್ ಮತ್ತು ಇತರರು ಇದ್ದರು.