ಜೆ.ಎಸ್‌.ಎಸ್‌. ಶ್ರೀಮಂಜುನಾಥೇಶ್ವರ ಸೆಂಟ್ರಲ್ ಶಾಲೆಯ ಮಕ್ಕಳ ಫುಟ್ ಬಾಲ್ ಸಾಧನೆ

ಜೆ.ಎಸ್‌.ಎಸ್‌. ಶ್ರೀಮಂಜುನಾಥೇಶ್ವರ ಸೆಂಟ್ರಲ್ ಶಾಲೆಯ ಮಕ್ಕಳ ಫುಟ್ ಬಾಲ್ ಸಾಧನೆ Football achievements of children of J.S.S. Srimanjunatheshwara Central School

ಲೋಕದರ್ಶನ ವರದಿ 

ಧಾರವಾಡ 19: ದಿ. 28ರಂದು ಕರ್ನಾಟಕ ಕಾಲೇಜ್ ಧಾರವಾಡ ಗ್ರೌಂಡ್‌ನಲ್ಲಿ ನಡೆದ ಅಂತರ ಶಾಲಾ ಡಿಡಿಎಫ್‌ಎ ಡಾ. ಸತೀಶ್ ಕನ್ಹಯ್ಯಾ ಟ್ರೋಫಿ ಫುಟ್ ಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಹಾಗೂ ಸೆಂಟ್ ಮೇರಿ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಹುಬ್ಬಳ್ಳಿ ಸ್ಪೋರ್ಟ್ಸ ಕ್ಲಬ್‌ನಲ್ಲಿ ನಡೆದ ಫುಟ್ ಬಾಲ್ ಪಂದ್ಯಾವಳಿಯಲ್ಲಿ ಎರಡನೇ ಸ್ಥಾನವನ್ನು ಪಡೆದು ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ.  

ತಂಡದ ಈ ಸಾಧನೆಗೆ ಕಾರಣರಾದ ತಂಡದ ತರಬೇತುದಾರ ಸ್ಯಾಮ್‌ಸನ್‌. ಕೆ ಹಾಗೂ ವಿದ್ಯಾರ್ಥಿಗಳನ್ನು ಜೆ.ಎಸ್‌.ಎಸ್ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದ, ಆಡಳಿತಾಧಿಕಾರಿಗಳಾದ ಶ್ರೀಯುತ ಅರಿಹಂತ ಪ್ರಸಾದ, ಐಟಿಐ ಕಾಲೇಜಿನ ಪ್ರಾಂಶುಪಾಲರಾದ ಮಹಾವೀರ ಉಪಾಧ್ಯೆ ಹಾಗೂ ಶಾಲಾ ಪ್ರಾಂಶುಪಾಲರಾದ ಸಾಧನಾ ಎಸ್ ಅಭಿನಂದಿಸಿ ಶುಭ ಹಾರೈಸಿದರು.