ಫೂಟ್ ಪಲ್ಸ್ ಥೆರಪಿ: ನರರೋಗ ಸಮಸ್ಯೆ ಚಿಕಿತ್ಸೆ ನೀಡುವ ವಿಧಾನ: ಡಾ. ರತ್ನಾಕರಶೆಟ್ಟಿ
Foot Pulse Therapy: A Method of Treating Neuropathy: Dr. Ratnakar Shetty
ಶಿಗ್ಗಾವಿ 24: ಫೂಟ್ ಪಲ್ಸ್ ಥೆರಪಿ ಎಂದರೆ ಪಾದದ ನೋವು ಮತ್ತು ನರರೋಗದಂತಹ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಬಳಸುವ ಒಂದು ಚಿಕಿತ್ಸಾ ವಿಧಾನವಾಗಿದ್ದು ಇದು ಕಾಂತೀಯ ನಾಡಿಗಳನ್ನು ಬಳಸಿ ನೋವನ್ನು ಕಡಿಮೆ ಮಾಡಲು ಮತ್ತು ಚೇತರಿಕೆಯನ್ನು ಸುಧಾರಿಸಲು ಪ್ರಯತ್ನಿಸುತ್ತದೆ ಎಂದು ಬೆಂಗಳೂರಿನ ಆರೋಗ್ಯ ತಜ್ಞ ಡಾ. ರತ್ನಾಕರಶೆಟ್ಟಿ ಹೇಳಿದರು.
ಪಟ್ಟಣದ ಸಾಯಿ ಮಂದಿರದಲ್ಲಿ ಮಲ್ಲಿಕರ್ಜುನ ಮತ್ತು ಕಲ್ಮೇಶ್ವರ ಜಾನಪದ ಕಲಾ ತಂಡ ಮುಗಳಿ, ಎನ್ ಎಸ್ ಸ್ನೇಹಜೋತಿ ನಗರ ಗ್ರಾಮೀಣಾಭೀವೃದ್ದಿ ಸಂಸ್ಥೆ ರಾಣೆಬೆನ್ನೂರ, ಕಂಪಾನಿಯೋ ಇವುಗಳ ಸಂಯುಕ್ತ ಆಶ್ರಯದಲ್ಲಿ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರದಲ್ಲಿ ಮಾತನಾಡಿದ ಅವರು, ಫೂಟ್ ಪಲ್ಸ್ ಥೆರಪಿ ಅಥವಾ ಪಲ್ಸೆಡ್ ಎಲೆಕ್ಟ್ರೋಮ್ಯಾಗ್ನೆಟಿಕ್ ಫೀಲ್ಡ್ ಥೆರಪಿ ಒಂದು ಚಿಕಿತ್ಸಾ ವಿಧಾನವಾಗಿದ್ದು, ಇದು ಕಾಂತೀಯ ಕ್ಷೇತ್ರಗಳನ್ನು ಬಳಸಿ ದೇಹದ ಕೋಶಗಳ ಮೇಲೆ ಪರಿಣಾಮ ಬೀರುತ್ತದೆ. ಈ ಚಿಕಿತ್ಸೆಯು ನೋವು, ಉರಿಯೂತ ಮತ್ತು ಅಂಗಾಂಶಗಳ ಪುನರುತ್ಪಾದನೆಗೆ ಸಹಾಯ ಮಾಡುತ್ತದೆ ಎಂದು ಂದರು.
ಈ ಚಿಕಿತ್ಸೆಯಲ್ಲಿ, ಕಾಂತೀಯ ನಾಡಿಗಳನ್ನು ಪಾದದ ಮೇಲೆ ಹರಿಸಲಾಗುತ್ತದೆ. ಇದು ನರಗಳ ಮೇಲೆ ಪರಿಣಾಮ ಬೀರಿ, ನೋವಿನ ಸಂಕೇತಗಳನ್ನು ಮೆದುಳಿಗೆ ತಲುಪದಂತೆ ತಡೆಯುತ್ತದೆ ಎಂದು ಹೇಳಲಾಗುತ್ತದೆ. ಈ ಮೂಲಕ ನೋವು ಕಡಿಮೆಯಾಗುತ್ತದೆ ಮತ್ತು ಚೇತರಿಕೆ ವೇಗಗೊಳ್ಳುತ್ತದೆ. ಈ ಚಿಕಿತ್ಸೆಯನ್ನು ಮಧುಮೇಹ ನರರೋಗ, ಕೀಮೋಥೆರಪಿ-ಪ್ರೇರಿತ ನರರೋಗ, ಮತ್ತು ಪ್ಲ್ಯಾಂಟರ್ ಫ್ಯಾಸಿಟಿಸ್ನಂತಹ ನೋವಿನ ಸ್ಥಿತಿಗಳಿಗೆ ಬಳಸಲಾಗುತ್ತದೆ. ಫೂಟ್ ಪಲ್ಸ್ ಥೆರಪಿಯನ್ನು ಸಂಶೋಧನೆಯು ಬೆಂಬಲಿಸುತ್ತದೆ ಮತ್ತು ಯಾವುದೇ ದೊಡ್ಡ ಅಡ್ಡ ಪರಿಣಾಮಗಳಿಲ್ಲ ಎಂದು ಹೇಳಿದರು.
ಕಳೆದ 13 ದಿನಗಳ ಈ ಶಿಬಿರದಲ್ಲಿ ಶಿಗ್ಗಾವಿ ತಾಲೂಕು ಸೇರಿದಂತೆ ವಿವಿಧ ತಾಲೂಕಿನ 2 ಸಾವಿರಕ್ಕೂ ಹೆಚ್ಚು ಜನ ಇದರ ಪ್ರಯೋಜನ ಪಡೆದರು.
ಕಾರ್ಯಕ್ರಮದಲ್ಲಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ನಿತ್ಯಾನಂದ ಕುಂದಾಪುರ, ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಜಾಧವ್, ಶಿಗ್ಗಾವಿ ತಾಲೂಕಾಧ್ಯಕ್ಷ ಬಸವರಾಜ ಗೊಬ್ಬಿ, ಶಿಬಿರದ ವ್ಯವಸ್ಥಾಪಕ ನಾಗರಾಜ ಹುನಸೆಮನೆ, ಸಿಬ್ಬಂದಿ ಜಯಣ್ಣ, ಮುಖಂಡರಾದ ಆನಂದ ಲಮಾಣಿ, ವಿ ಎಸ್ ಪಾಟೀಲ, ರಮೇಶ್ ಬಾಲಣ್ಣನವರ, ಶಿವಪ್ಪ ಅಳವುಂಡಿ ಸೇರಿದಂತೆ ಕರವೇ ಪದಾಧಿಕಾರಿಗಳು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 