ಪ್ರವಾಹ, ಅತಿವೃಷ್ಟಿ: ಸಹಾಯವಾಣಿ ಪ್ರಾರಂಭ

Floods, heavy rain: Helpline launched

ಕಾಗವಾಡ 29: ತಾಲೂಕಿನಲ್ಲಿ 2025-26 ನೇ ಸಾಲಿನಲ್ಲಿ ಸಂಭವಿಸಬಹುದಾದ ಪ್ರವಾಹ, ಅತೀವೃಷ್ಠಿ ಕುರಿತು ಮೇಲಾಧಿಕಾರಿಗಳಿಂದ ಹಾಗೂ ಸಾರ್ವಜನಿಕರಿಂದ ದೂರವಾಣಿ ಕರೆಗಳನ್ನು ಸ್ವೀಕರಿಸಲು, ಮತ್ತು ಈ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣ ಸಲ್ಲಿಸಲು ಜೊತೆಗೆ ಅಗ್ಯ ಕ್ರಮ ಜರುಗಿಸಲು ಅನುಕೂಲವಾಗುವಂತೆ ತಹಶೀಲ್ದಾರ ಕಾರ್ಯಾಲಯದಲ್ಲಿ ಸಹಾಯವಾಣಿ ಕೇಂದ್ರವನ್ನು ತೆರೆಯಲಾಗಿದೆ ಎಂದು ತಹಶೀಲ್ದಾರ ರಾಜೇಶ ಬುರ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಪ್ರವಾಹ., ಅತಿವೃಷ್ಟಿ ಕುರಿತು ಸಮಸ್ಯೆ, ಸಲಹೆಗಳು ಇದ್ದಲ್ಲಿ ತಾಲೂಕಿನ ನಾಗರೀಕರು ಸಹಾಯವಾಣಿ ಸಂಖ್ಯೆ: 08339-264555 ಗೆ ಸಂಪರ್ಕಿಸಲು ಕೋರಲಾಗಿದೆ.