ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ : ಅಭಿಜ್ಞಾ ದೈವಜ್ಞ

ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ : ಅಭಿಜ್ಞಾ ದೈವಜ್ಞ  First place in essay competition: Abhijna Daivagna


ಶಿಗ್ಗಾವಿ 08  : ಪಟ್ಟಣದ ಚೆನ್ನಪ್ಪ ಕುನ್ನೂರ ಮಹಾವಿದ್ಯಾಲಯದಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ ಜೀವನ ಮತ್ತು ಕೊಡುಗೆಗಳು ವಿಷಯದ ಪ್ರಬಂಧ ಸ್ಪರ್ಧೆಯಲ್ಲಿ   ವಿದ್ಯಾರ್ಥಿನಿ ಕುಮಾರಿ ಅಭಿಜ್ಞಾ ಸುಧಾಕರ ದೈವಜ್ಞ ಪ್ರಥಮ ಸ್ಥಾನ ಪಡೆದು 4 ಸಾವಿರ ರೂಪಾಯಿಗಳ ಬಹುಮಾನ ಗಳಿಸಿ, ಶಿಗ್ಗಾವಿ ಏಕಲವ್ಯ ಇಂಟರ್ ನ್ಯಾಷನಲ್ ಸ್ಕೂಲ್ ಹಾಗೂ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದಾಳೆ ಅವರಿಗೆ ಪ್ರಾಚಾರ್ಯ ಡಾ.ಎಸ್‌.ಹೆಚ್‌.ಹಾವೇರಿ ಅಭಿನಂದನೆ ಸಲ್ಲಿಸಿದ್ದಾರೆ.    ಈ ಸಂದರ್ಭದಲ್ಲಿ ಇಓ ಮಂಜುನಾಥ ಸಾಳೊಂಕೆ, ಬಿ.ಇ.ಓ ಎಂ.ಬಿ.ಅಂಬಿಗೇರ, ಪ್ರಾಚಾರ್ಯ ದ್ಯಾಮನಕೊಪ್ಪ , ಬಿ.ಆರ್‌.ಸಿ.ಸಿ ಓ ಗೀತಾಂಜಲಿ ತೆಪ್ಪದ, ಇಸಿಓ ಪ್ರೌಡ ಬಸಯ್ಯ ಹಿರೇಮಠ, ಬಿ.ಆರ್‌.ಪಿ ಪ್ರೌಡ ಶ್ರೀನಿವಾಸ.ಬಿ,ಇಸಿಓ ಪ್ರಾಥಮಿಕ ಉಮೇಶ.ಎಸ್‌.ಆರ್, ಇಸಿಓ ಪ್ರೌಡ ಉರ್ದು ಅಬ್ದುಲ್ ಖಾದರ್ ಕಡೇಮನಿ, ಬಿ.ಆರ್‌.ಸಿ. ಪ್ರೌಡ ಸೈಯದ್ ಮುಲ್ಲಾ, ಹೈಸ್ಕೂಲ್ ಪ್ರಾಚಾರ್ಯಎಂ.ಬಿ,ಅರಗೋಳ,ಸೇರಿದಂತೆ ಶಿಕ್ಷಕರು, ಮಕ್ಕಳು ಉಪಸ್ಥಿತರಿದ್ದರು.