ದೇವಗಿರಿ ಗ್ರಾಪಂಗೆ ಹಣಕಾಸು ಆಯೋಗದ ಅಧ್ಯಕ್ಷ ಭೇಟಿ
ಹಾವೇರಿ 04: ತಾಲೂಕಿನ ದೇವಗಿರಿ ಗ್ರಾಪಂಗೆ ಐದನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷರಾದ ಸಿ ನಾರಾಯಣಸ್ವಾಮಿ ಹಾಗೂ ಸದಸ್ಯರು ಭೇಟಿ ನೀಡಿದರು. ಗ್ರಾಮ ಪಂಚಾಯತಿಯ ಜನಸಂಖ್ಯೆ, ಗ್ರಾಮ ಕುಡಿಯುವ ನೀರಿನ ಮೂಲ, ಪಂಚಾಯತಿ ವ್ಯಾಪ್ತಿಯ ಶಾಲೆಗಳ ವಿವರ, ಅಂಗನವಾಡಿ ಕೇಂದ್ರದ ವಿವರ,ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಅಂಗನವಾಡಿ, ಜೆಜೆಮ್ ಯೋಜನೆ ವಿವರ, ಪಂಚಾಯತಿ ಸಿಬ್ಬಂದಿ, ಬೀದಿ ದೀಪಗಳ ಮಾಹಿತಿ,15ನೇ ಹಣಕಾಸು ಮತ್ತು ಪಂಚಾಯಿತಿ ತೆರಿಗೆ ವಸುಲಾತಿ ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ವಿವರವಾಗಿ ಪಂಚಾಯಿತಿಯಿಂದ ಕೆಲಸ ಮಾಡಿರುವ ಬಗ್ಗೆ ಡಿಜಿಟಲ್ ಮುಖಾಂತರ ನಿಯೋಗದ ಪದಾಧಿಕಾರಿಗಳಿಗೆ ತಿಳಿಸಲಾಯಿತು. ಅಂಗನವಾಡಿ ಕೇಂದ್ರಗಳಿಗೆ ಮತ್ತು ಡಿಜಿಟಲ್ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಪರೀಶೀಲಿಸಿದರು. ಈ ಸಂದರ್ಭದಲ್ಲಿ, ಐದನೇ ರಾಜ್ಯ ಹಣಕಾಸು ಆಯೋಗದ ಸದಸ್ಯರಾದ ಮೊಹಮ್ಮದ್ ಸನಾವುಲಾ, ್ಲಆರ್ಎಸ್ ಪೊಂಡೆ,ಎಂ ಕೆ ಕೆಂಪೇಗೌಡ,ಸಿ ಜಿ ಸುಪ್ರಸನ್ನ, ಕೆಯಾಲಕ್ಕಿಗೌಡ, ಗ್ರಾಪಂ ಅಧ್ಯಕ್ಷರಾದ ಪ್ರಭಾಕರ ಪಾರಿಗಂಟಿ, ಗ್ರಾಪಂ ಉಪಾಧ್ಯಕ್ಷರಾದ ಕವಿತಾ ಪರಸಣ್ಣನವರ, ವಸಂತ ಶೇಖಪ್ಪ ಮತ್ತಿಕಟ್ಟಿ, ತಾಪಂ ಕಾರ್ಯನಿರ್ವಾಕ ಅಧಿಕಾರಿ ಪರಮೇಶ ಹುಬ್ಬಳ್ಳಿ, ಬಸವರಾಜ ಕರಜಗಿ, ಪಿಡಿಓ ಸುನೀತಾ ಗರಡಿ, ಗ್ರಾಪಂ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.