ಡಾ.ಬಿ.ಎಫ್‌. ದಂಡಿನ ಅವರಿಗೆ ಅಂತಿಮ ನಮನ

ಡಾ.ಬಿ.ಎಫ್‌. ದಂಡಿನ ಅವರಿಗೆ ಅಂತಿಮ ನಮನ  Final tribute to Dr. B.F. Dandina

  ಗದಗ  29 : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಉತ್ತರ ಕರ್ನಾಟಕದ ಶಿಕ್ಷಣ ಭೀಷ್ಮ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ಪುರಸ್ಕೃತ ಡಾ. ಬಿ.ಎಫ್ ದಂಡಿನ ಅವರ ಅಂತಿಮಕ್ರಿಯೆಯು ರವಿವಾರ   ಸ್ಥಳೀಯ ರಾಜೀವಗಾಂದಿ ನಗರದ ಕೆಎಸ್‌ಎಸ್ ಕಾಲೇಜ ಆವರಣದಲ್ಲಿನ  ಜರುಗಿತು.  ಅವರು ಗದುಗಿನ ಕನಕದಾಸ ಶಿಕ್ಷಣ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾಗಿ 1965 ರಿಂದ ಇದುವರೆಗೂ 65 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ ಡಾ. ಬಿ. ಎಫ್‌. ದಂಡಿನ ಅವರು ಕನಕದಾಸ ಶಿಕ್ಷಣ ಸಮಿತಿಯ ಅಧ್ಯಕ್ಷ  ರವೀಂದ್ರನಾಥ ದಂಡಿನ ಸೇರಿದಂತೆ ಇಬ್ಬರು ಪುತ್ರರು, ಮೂವರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಮರಿಮೊಮ್ಮಕ್ಕಳನ್ನು ಅಗಲಿದ್ದಾರೆ.  

 ಈ ಸಂದರ್ಭದಲ್ಲಿ  ಗದುಗಿನ ಶಿವಾನಂದ ಮಠದ ಉಭಯ ಶ್ರೀಗಳು, ಹರ್ಲಾಪೂರದ ಪೂಜ್ಯಶ್ರೀ ಕೊಟ್ಟೂರೇಶ್ವರ  ಶ್ರೀಗಳು, ವಿರೇಶ್ವರ ಪುಣ್ಯಾಶ್ರಮದ ಪೂಜ್ಯಶ್ರೀ ಕಲ್ಲಯ್ಯಜ್ಜನವರು, ಮುಖಂಡರುಗಳಾದ ಬೈರತಿ ಬಸವರಾಜ,  ಮಾಜಿ ಸಂಸದ ಕೆ. ವಿರುಪಾಕ್ಷ, ರಾಜ್ಯಸಭಾ ಸದಸ್ಯ ಮಾ. ನಾಗರಾಜ, ಶಾಸಕರಾದ ಸಿ.ಸಿ.ಪಾಟೀಲ, ವಿಧಾನ ಪರಿಷತ್ ಸದಸ್ಯ ಎಸ್‌.ವಿ.ಸಂಕನೂರ, ಕೃಷ್ಣಗೌಡ್ರ ಪಾಟೀಲ, ಫಕ್ಕೀರ​‍್ಪ ಹೆಬಸೂರ, ರುದ್ರಣ್ಣ ಗುಳಗುಳಿ, ರಾಜೇಂದ್ರ ಹಾವೇರಿ, ಮೈಲಾರ​‍್ಪ ತಳಹಳ್ಳಿ, ಎಸ್‌.ಎಸ್‌.ಚವಟಗೇರ ಸೇರಿದಂತೆ ಮುಂತಾದವರು ಅಂತಿಮ ದರ್ಶನ ಪಡೆದರು.