ರಾಕ್ ಗಾರ್ಡನ್ನಲ್ಲಿ ಕನರ್ಾಟಕ ರೈತ ರಾಜ್ಯ ಚಲನಚಿತ್ರದ ಚಿತ್ರೀಕರಣ
ಲೋಕದರ್ಶನವರದಿ
ಶಿಗ್ಗಾವಿ 20
: ಬಣಕಾರ ಫಿಲ್ಮ್ಸ್ನ 'ಕನರ್ಾಟಕ ರೈತ ರಾಜ್ಯ ಚಲನಚಿತ್ರದ್ದು.
ಈ ಹಾಡಿಗೆ ನಟಿ ಪವಿತ್ರಾ ಗೊಟಗೋಡಿಯ
ಉತ್ಸವ ರಾಕ್ ಗಾರ್ಡನ್ನ ಗ್ರಾಮೀಣ
ಕ್ರೀಡಾಕೂಟ, ಗೌಡರ ಓಣಿ, ಉತ್ತರ
ಕನರ್ಾಟಕ ಹಿಂದಿನ ಗ್ರಾಮ ಸಂಸ್ಕೃತಿ, , ಜನಪದರ ದನದ ಸಂತೆ, ವಾರದ
ಸಂತೆ ಮತ್ತಿತರ ಗ್ಯಾಲರಿಗಳಲ್ಲಿ ಹೆಜ್ಜೆ ಹಾಕಿದ ದೃಶ್ಯಗಳ ಚಿತ್ರೀಕರಣ ಅಕ್ಟೋಬರ್ 18ರ ಗುರುವಾರ ನಡೆಯಿತು.
ಪ್ರಸಕ್ತ ರೈತರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳು ಸೇರಿದಂತೆ ಅವರ ದಾರುಣ ಬದುಕು
ಚಿತ್ರದ ಕಥಾ ವಸ್ತು ಎಂದು
ಚಿತ್ರದ ನಿಮರ್ಾಪಕ, ನಿದರ್ೇಶಕ ಕುರಡಿ ಬಣಕಾರ ಚಿತ್ರದ ಬಗ್ಗೆ ಮಾಹಿತಿ ನೀಡಿದರು. ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಂ ಅತಿಥಿ
ನಟರಾಗಿ ಕಾಣಿಸಿಕೊಂಡರೆ, ಸುಮತಿಶ್ರೀ ನಾಯಕನ ತಾಯಿ ಪಾತ್ರ ನಿರ್ವಹಿಸಿದ್ದಾರೆ.
ಅನಂತವೇಲು ಮುಖ್ಯಮಂತ್ರಿಯಾಗಿ ಕಾಣಿಸಿಕೊಂಡಿದ್ದಾರೆ.
ಸನಿಹ, ಸವಾಲು, ಅಮರೇಶ್ವರ ಮಹಾತ್ಮೆ ಚಿತ್ರಗಳಲ್ಲಿ ನಾಯಕನಾಗಿ ನಟಿಸಿರುವ ಅಭಯ, ರೈತರ ಸಮಸ್ಯೆಗಳಿಗೆ
ಸ್ಪಂದಿಸಿ, ಅವರಿಗೆ ನ್ಯಾಯ ಕೊಡಿಸುವ ಆ್ಯಂಗ್ರಿ ಯಂಗಮ್ಯಾನ್ ಪಾತ್ರ ನಿರ್ವಹಿಸಿದ್ದಾರೆ.
ಉದಯನ್ಮೋಖ ನಟಿ ಪರಿ ಚಿತ್ರದ
ನಾಯಕಿ. ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ, ಐರಣಿ, ಕಡೂರು, ಬುಳ್ಳಾಪುರ ಹಾಗೂ ಗೊಟಗೋಡಿಯ ಉತ್ಸವ
ರಾಕ್ ಗಾರ್ಡನ್ ಹಚ್ಚು ಹಸಿರಿನ ಸುಂದರ ರಮಣೀಯ ದೃಶ್ಯಗಳನ್ನು ತನ್ನ ಕ್ಯಾಮೆರಾ ಕಣ್ಣುಗಳಲ್ಲಿ
ಸೆರೆ ಹಿಡಿದವರು ಯುವ ಛಾಯಾಗ್ರಾಹಕ ಎಸ್.ಬಾಲು. ಕುರಡಿ ಬಣಕಾರ ರಚಿತ ಸುಮಧುರ ಹಾಡುಗಳಿಗೆ ಸಂಗೀತ
ಸಂಯೋಜನೆ ಮಾಡಿದವರು ಯುವ ಸಂಗೀತಗಾರ ಅಭಿಷೇಕ.
ವಸಂತ
ದ್ಯಾವಕ್ಕಳವರ ಕೊಟ್ರೇಶ ಹಾಗೂ ದ್ಯಾವನಗೌಡ ಚಿತ್ರದ
ಸಹ ನಿಮರ್ಾಪಕರ ಹೊಣೆ ಹೊತ್ತಿದ್ದಾರೆ. ನಿದರ್ೇಶಕ
ಕುರುಡಿ ಬಣಕಾರ ಅವರೊಂದಿಗೆ ಚಿತ್ರದ ಸಹ ನಿದರ್ೇಶನ ಜವಾಬ್ದಾರಿಯನ್ನು
ರವಿಶಂಕರ ಮತ್ತು ಮನು ನಿಭಾಯಿಸುತ್ತಿದ್ದಾರೆ.
ನಾಯಕ
ಅಭಯ ಮತ್ತು ಖಳ ನಟರಾದ ಜತಿನ್
ಅವಿ ಹಾಗೂ ಅಜೇಯ ಮಧ್ಯದ
ಫೈಟ್ ದೃಶ್ಯಗಳಿಗೆ ಆ್ಯಕ್ಷನ್, ಕಟ್ ಹೇಳಿದ್ದು ಜನಪ್ರಿಯ
ಸಾಹಸ ಸಂಯೋಜಕ ಥ್ರಿಲ್ಲರ್ ಮಂಜು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 