ಉತ್ಸವಗಳು ಕೇವಲ ಮನರಂಜನೆಯ ಆಚರಣೆಯಲ್ಲ ಭಾರತೀಯ ಪರಂಪರೆಯ ರಕ್ಷಣೆಗೆ ಮುನ್ನುಡಿ ಬರೆದ ಭೂಮಿ ಆನೆಗೊಂದಿ
ಕೊಪ್ಪಳ ೧೦: ಇವತ್ತು ರಾಷ್ಟ್ರೀಯ ಹಿತಾಸಕ್ತಿ ಕಡೆಗಣಿಸಿ, ರಾಜಕೀಯ ಹಿತಾಸಕ್ತಿಗಾಗಿ ಮತಬ್ಯಾಂಕ್ ಓಲೈಕೆ ರಾಜಕಾರಣ ಮಾಡದೇ , ನಮ್ಮ ಪೂವರ್ಿಕರ ಇತಿಹಾಸ ಅರಿತು ಮೌಲ್ಯ ಮತ್ತು ಪರಂಪರೆಯನ್ನು ನಮ್ಮ ವರ್ತಮಾನ ಹಾಗೂ ಭವಿಷ್ಯ ರೂಪಿಸಿಕೊಳ್ಳಲು ಇಂತಹ ಸಾಂಸ್ಕೃತಿಕ ಉತ್ಸವಗಳು ಸಹಕಾರಿಯಾಗಲಿವೆ.
ನಮ್ಮ ಸನಾತನ ಸಂಸ್ಕೃತಿಯನ್ನು ರಕ್ಷಿಸಲು ವಿಜಯನಗರದ ಸಾಮ್ರಾಜ್ಯ ಸ್ಥಾಪನೆಯಾಯಿತು. ದಕ್ಷಿಣದ ಮಲಿಕ್ ಕಾಫರ್ ನ ಬರ್ಬರ ದಾಳಿಯನ್ನು ಎದುರಿಸಲಾರದೇ ಹಳೆಬೀಡಿನ ಹೊಯ್ಸಳರು, ವಾರಂಗಲ್ ಕಾಕತೀಯರು ,ಮಧುರೆಯ ಪಾಂಡ್ಯರು, ದೇವಗಿರಿಯ ಯಾದವರ ವಂಶಗಳು ನೆಲಕಚ್ಚಿದಾಗ ಅದನ್ನು ಎದುರಿಸಿ ಮತ್ತೆ ಭಾರತೀಯ ಪರಂಪರೆಯ ಪುನರುತ್ಥಾನಕ್ಕೆ ಮುನ್ನುಡಿ ಬರೆದ ನೆಲ ಆನೆಗೊಂದಿಯಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ ಹಾಗೂ ಸಕ್ಕರೆ ಸಚಿವ ಸಿ.ಟಿ.ರವಿ ಹೇಳಿದರು.
ಆನೆಗೊಂದಿ ಉತ್ಸವದ ಶ್ರೀಕೃಷ್ಣದೇವರಾಯ ವೇದಿಕೆಯ ಉದ್ಘಾಟನಾ ಸಮಾರಂಭದಲ್ಲಿ ಇಂದು ಡಾ.ಶರಣಬಸಪ್ಪ ಕೋಲಕಾರ ಸಂಪಾದಕತ್ವದ "ಭವ್ಯ ಪರಂಪರೆಯ ತಾಣ ಆನೆಗೊಂದಿ" ಸ್ಮರಣ ಸಂಚಿಕೆ , ಡಾ.ವಿಜಯ ಢಣಾಪುರ, ಡಾ.ಹಾಲೇಶ, ಡಾ.ಶ್ರೀನಿವಾಸ ಸಂಪಾಕತ್ವದ "ಕಿಷ್ಕಿಂದಾ ಕಾಂಡ" ಔಷಧೀಯ ಸಸ್ಯಗಳ ಸಂಗ್ರಹವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಈ ಕ್ಷೇತ್ರ ರಾಮಾಯಣ ಕಾಲದಿಂದಲೂ ಪ್ರಸಿದ್ಧಿ ಹೊಂದಿದೆ, ರಾಮನಿಗೆ ಬೆಂಬಲವಾಗಿ ನಿಂತುಕೊಂಡು ಸತ್ಯ ಮತ್ತು ಧರ್ಮಕ್ಕೆ ಬೆಂಬಲ ಸೂಚಿಸಿದ ಭೂಮಿ ಇದೆ.ನೇಪಾಳದಿಂದ ಶ್ರೀಲಂಕಾವರೆಗಿನಿ ರಾಮಾಯಣ ಸಕ್ಯರ್ೂಟ್ ,ಮಹಾಭಾರತ,ಜೈನ,ಬುದ್ಧ ಸಕ್ಯರ್ೂಟ್ ನಡುವೆ ಸಂಪರ್ಕ ಕಲ್ಪಿಸಿ ಅಂತಾರಾಷ್ಟ್ರೀಯ ಮಟ್ಟದ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಭಾರತ ಸರ್ಕಾರ ಚಿಂತನೆ ನಡೆಸಿದೆ.ನಮ್ಮ ಪೂವರ್ಿಕರ ಪ್ರಾಚೀನ ಪರಂಪರೆ ಮತ್ತು ಇತಿಹಾಸದ ಘಟನೆಗಳನ್ನು ತಿಳಿಯದವರು ವರ್ತಮಾನ ದಲ್ಲಿ ಯೂ ಸ್ವಾಭಿಮಾನದಿಂದ ಬದುಕಲು ಸಾಧ್ಯವಿಲ್ಲ.ಭವಿಷ್ಯವೂ ರೂಪಿಸಿಕೊಳ್ಳಲು ಸಾಧ್ಯವಿಲ್ಲ. ಸಂಸ್ಕೃತಿ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಆ ನಿಟ್ಟಿನಲ್ಲಿ ಕನರ್ಾಟಕ ಸಕರ್ಾರ ಕ್ರಮ ಕೈಗೊಳ್ಳಲಿದೆ.ಕಲ್ಯಾಣ ಕನರ್ಾಟಕ ಉತ್ಸವ, ಕನಕಗಿರಿ, ಕಿತ್ತೂರು ಮೊದಲಾದ ಉತ್ಸವಗಳು ಕೇವಲ ಮನರಂಜನೆಯ ಆಚರಣೆಗಳಾಗಬಾರದು.ನಮ್ಮನ್ನು ನಾವು ಅರಿಯಲು ಮತ್ತು ಪರಂಪರೆಯ ರಕ್ಷಣೆಯ ದೀಕ್ಷೆ ತೊಡಲು ಇಂತಹ ಉತ್ಸವಗಳು ಸದ್ಬಳಕೆಯಾಗಬೇಕು. ಮುಖ್ಯಮಂತ್ರಿಗಳು ಯಾವುದೇ ಖಾತೆ ನೀಡಿದರೂ ಸಮರ್ಥವಾಗಿ ಕಾರ್ಯನಿರ್ವಹಿಸುತ್ತೇನೆ ಎಂದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 