ನೇಕಾರ ಹೋರಾಟಗಾರ ಶಿವಲಿಂಗ ಟರ್ಕಿಗೆ ಸನ್ಮಾನ

ಯಮಕನಮರಡಿ 16: ಕರ್ನಾಟಕ ನೇಕಾರ ಹೊರಾಟ ಸಂಘದ ರೂವಾರಿ ಶಿವಲಿಂಗ ಟರ್ಕಿ ರವರು ನಿನ್ನೆ ಮಂಗಳವಾರ ದಿ.15 ರಂದು ಯಮಕನಮರಡಿ ಗ್ರಾಮಕ್ಕೇ ಬಾಗಲಕೊಟ್ ಜಿಲ್ಲೆ ರಬಕವಿ ಬನಹಟ್ಟಿ ಮಹಾಲಿಂಗಪೂರದಿಂದ ಪಾದಯಾತ್ರೆ ಮೂಲಕ ಆಗಮಿಸಿದಕ್ಕಾಗಿ ಶಿವಲಿಂಗ ಟರ್ಕಿ ಯವರಿಗೆ ಯಮಕನಮರಡಿ ನೇಕಾರ ಸಮಾಜದ ವತಿಯಿಂದ ಸನ್ಮಾನಿಸಲಾಯಿತು. 

 ಅವರು ಹುಬ್ಬಳ್ಳಿಯಲ್ಲಿ ದಿ.19 ರಂದು ಜರುಗಲಿರುವ ಬೃಹತ್ ನೇಕಾರ ಸಮಾವೇಶಕ್ಕೆ ರಾಜ್ಯದ ಎಲ್ಲ ನೇಕಾರ ಸಮುದಾಯದವರನ್ನು ಒಗ್ಗೂಡಿಸಿ ಪಾದಯಾತ್ರೇ ಮೂಲಕ ಪ್ರತಿಬಟನೆಯಲ್ಲಿ ಭಾಗವಹಿಸಲು ಆನಂದಪೂರ ಯಮಕನಮರಡಿ ನೇಕಾರ ಬಾಂದವರಿಗೆ ಅಹ್ವಾನ ನೀಡಿದರು ಶಿವಲಿಂಗ ಟರ್ಕಿ ಯವರು ಈಗಾಗಲೇ ನೇಕಾರರಿಗೆ ಸಿಗಬೇಕಾದ ಸೌಲತ್ತುಗಳನ್ನು ಮಂಜೂರು ಮಾಡುವಲ್ಲಿ ಯಶಸ್ವಿಯಾಗಿದ್ದು, ಇನ್ನೂಳಿದ ಯೋಜನೆಗಳನ್ನು ಮಂಜೂರು ಮಾಡುವ ಕುರಿತು ಪ್ರತಿಭಟಣೆ ಯೊಂದಿಗೆ ಪ್ರಯತ್ನಿಸೋಣ ಅದಕ್ಕೆ ತಾವೆಲ್ಲರೂ ಕೈಗೂಡಿಸಬೆಕೆಂದು ಹೇಳಿದರು.