ಸೈಕ್ಲಿಂಗ್ ಪಟುಗಳಿಗೆ ಸನ್ಮಾನ

ಸೈಕ್ಲಿಂಗ್ ಪಟುಗಳಿಗೆ ಸನ್ಮಾನ Felicitation to cycling champions

ರಾಯಬಾಗ 24: ಬಸವ ಸಂಸ್ಕೃತಿ ಅಭಿಯಾನ ಮತ್ತು ಪರಿಸರ ಜಾಗೃತಿಗಾಗಿ ರಾಯಬಾಗದಿಂದ ಮೈಸೂರುವರೆಗೆ 18 ಜಿಲ್ಲೆಗಳನ್ನು ಸೆ.1 ರಿಂದ 15 ವರೆಗೆ1800 ಕಿ.ಮೀ. ಸೈಕಲ್ ಮೇಲೆ ಕ್ರಮಿಸಿ ಯಶಸ್ವಿಯಾಗಿ  ಹೋಗಿ ಬಂದ ರಾಯಬಾಗ ಸೈಕ್ಲಿಂಗ್ ಸಂಸ್ಥಾಪಕ ಹನುಮಂತ ಟಕ್ಕನ್ನವರ ಮತ್ತು ಶಂಕರ ಕೊಡತೆ ಅವರನ್ನು ಭಾನುವಾರ ಸತ್ಕರಿಸಲಾಯಿತು.  

ದಂತ ವೈದ್ಯ ಅಪ್ಪಾಸಾಹೇಬ ಹೆಗಡೆ, ವಕೀಲ ಮಹಾದೇವ ಪಾಟೀಲ, ರಾಜು ಅಳಾಜ, ಪ್ರೊ.ಸಂಜೀವ ಟಿಳೆ, ಪ್ರೊ.ಸಾಗರ ಸಿತ್ರೆ,  ಮಹಾದೇವ ಧರ್ಮಟ್ಟಿ, ಪ್ರವೀಣ ಬಂಡಗರ, ರಾಜು ನಿಂಬಾಳ್ಕರ, ರಿತೇಶ ಹೊಸಮನಿ, ಸಮರ್ಥ ಕಾಡಾಪುರೆ ಮತ್ತು ರಾಯಬಾಗ ಸೈಕಲ್ ಕ್ಲಬ್ ಸದಸ್ಯರು ಇದ್ದರು.