ಎಂ.ಕೆ.ಹೆಗಡೆಯವರಿಗೆ ಸನ್ಮಾನ

ಎಂ.ಕೆ.ಹೆಗಡೆಯವರಿಗೆ ಸನ್ಮಾನ Felicitation to M.K. Hegde

ಬೆಳಗಾವಿ 26: ಬೆಳಗಾವಿಯ ವಾಣಿಜ್ಯೋದ್ಯಮ ಸಂಘದ ಆಡಳಿತ ಮಂಡಳಿಗೆ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ರಂಗಸೃಷ್ಟಿ ತಂಡದಿಂದ ಮತ್ತು ದಾನಮ್ಮ ದೇವಿ ದೇವಸ್ಥಾನ ಟ್ರಸ್ಟ್‌ ವತಿಯಿಂದ ಸನ್ಮಾನಿಸಲಾಯಿತು.   

ದಾನಮ್ಮ ದೇವಸ್ಥಾನ ಟ್ರಸ್ಟ್‌ ಅಧ್ಯಕ್ಷ ಚಂದ್ರಶೇಖರ ಬೆಂಬಳಗಿ, ರಂಗಸೃಷ್ಟಿ ಅಧ್ಯಕ್ಷ ರಮೇಶ ಜಂಗಲ್ ಎಂ.ಕೆ.ಹೆಗಡೆಯವರನ್ನು ಸನ್ಮಾನಿಸಿದರು. ಹಿರಿಯ ಸಾಹಿತಿಗಳಾದ ಡಾ.ರಾಮಕೃಷ್ಣ ಮರಾಠೆ, ಶೀರೀಶ ಜೋಶಿ, ಶೈಲಜಾ ಬಿಂಗೆ, ರಂಗಸೃಷ್ಟಿ ಮತ್ತು ದೇವಸ್ಥಾನ ಸಮಿತಿಯ ಪದಾಧಿಕಾರಿಗಳು, ಕಲಾವಿದರು ಇದ್ದರು.