ವಿಧಾನ ಪರಿಷತ್ ಸದಸ್ಯ ಇಂದ್ರಿಸ್ ನಾಯಕವಡಿಗೆ ಸನ್ಮಾನ
Felicitation to Legislative Council member Indris Nayakwadi
ಸಂಬರಗಿ 06: ಮಹಾರಾಷ್ಟ್ರದ ರಾಷ್ಟ್ರವಾದಿ ಪಕ್ಷದ ಅಜೀತ ಪವಾರ ಗುಂಪಿನ ವಿಧಾನ ಪರಿಷತ್ ಸದಸ್ಯರಾದ ಇಂದ್ರಿಸ್ ನಾಯಕವಡಿ ಇವರು ಹೊಸದಾಗಿ ವಿಧಾನ ಪರಿಷತ್ಗೆ ಆಯ್ಕೆಯಾಗಿ ಪ್ರಥಮ ಬಾರಿಗೆ ತಮ್ಮ ಗ್ರಾಮಕ್ಕೆ ತೆರಳಿದ ನಂತರ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಮಾಧ್ಯಮ ಪ್ರತಿನಿಧಿ ಹಾಗೂ ಅಥಣಿ ಪುರಸಭೆ ಸದಸ್ಯರಾದ ರಾವಸಾಹೇಬ ಐಹೊಳೆ ಇವರು ಅವರನ್ನು ಭೇಟಿಯಾಗಿ ಸನ್ಮಾನಿಸಿದರು.
ಈ ವೇಳೆ ರಾವಸಾಹೇಬ ಐಹೋಳೆ ಮಾತನಾಡಿ ಬೇಸಿಗೆಯ ಅವಧಿಯಲ್ಲಿ ಗಡಿ ಭಾಗದ ಅಗ್ರಾಣಿ ನದಿಗೆ ತಾಕಾರಿ-ಮಹಿಶ್ಯಾಳ ಕಾಲುವೆ ಮುಖಾಂತರ ನೀರು ಹರಿಸಿ ಜನರಿಗೆ ಬೇಸಿಗೆಯ ಅವಧಿಯಲ್ಲಿ ನೀರಿನ ಸಮಸ್ಯೆ ಪರ್ಯಾಗೊಳಿಸಬೇಕು. ಕಾಯಿದೆಶಿರ ಬಿಡಲು ಆಗದಿದ್ದರೆ ಮಾನವೀಯ ದೃಷ್ಠಿಯಿಂದ ವಿಚಾರಿಸಿ ನೀರು ಬಿಡಬೇಕೆಂದು ಅವರು ಹೇಳಿದರು. ಇನ್ನುಳಿದ ಮಹಾರಾಷ್ಟ್ರ ಸಂಪರ್ಕ ರಸ್ತೆಗಳು ಡಾಂಬರೀಕರಣಗೊಳಿಸಬೇಕೆಂದು ಅವರು ವಿನಂತಿ ಮಾಡಿಕೊಂಡರು.
ಈ ವೇಳೆ ಸಂಬರಗಿ ಗ್ರಾಮ ಪಂಚಾಯತ ಉಪಾಧ್ಯಕ್ಷ ಅಶೋಕ ಮಾನೆ, ಪುರಸಭೆ ಸದಸ್ಯರಾದ ಸೈಯದಅಮೀನ ಗದ್ಯಾಳ, ಶಂಕರ ತಂಗಡಿ, ಕುಮಾರ ರಣಧೀರ, ವಿಜಯ ಹೊನ್ನಮನಿ ಸೇರಿದಂತಹ ಅನೇಕರು ಉಪಸ್ಥಿತ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 