ಜ್ಯಾನಜ್ಯೋತಿ ವಸತಿ ಶಾಲೆ ಶಿಕ್ಷಕರಿಗೆ ಸನ್ಮಾನ

ಜ್ಯಾನಜ್ಯೋತಿ ವಸತಿ ಶಾಲೆ ಶಿಕ್ಷಕರಿಗೆ ಸನ್ಮಾನ Felicitation for Teachers of Jyanajyoti Residential School

ಹಾವೇರಿ  13: ಇಲ್ಲಿಯ ಜ್ಯಾನಜ್ಯೋತಿ ಅಂಧರ,ಕಿವಡ ಮಕ್ಕಳ ವಸತಿ ಶಾಲೆಯಲ್ಲಿ ಭಾರತಿಯಜನತಾ ಪಕ್ಷದಜಿಲ್ಲಾಘಟಕದ ಮಹಿಳಾ ಮೋರ್ಚಾಘಟಕದಿಂದ ಗುರುಪೂರ್ಣಿಮದ ನಿಮಿತ್ಯ ಅಂದ ಶಿಕ್ಷರನ್ನು ಸನ್ಮಾನಿಸಿ ಗೌರವಿಸಿ ಅಂಧ, ಕಿವಿಡ ಮಕ್ಕಳಿಗೆ ಸಿಹಿಯನ್ನು ವಿತಸಿಲಾಯಿತು. 

ಈ ಸಂದರ್ಭ ಮಾತನಾಡಿದಜಿಲ್ಲಾ ಮಹಿಳಾ ಮೊರ್ಜದಉಪಾಧ್ಯಕ್ಷಣಿರಾಜೇಶ್ವರಿ ಭಿಷ್ಟಣಗೌಡರ,ಕಿವುಡ ಮತ್ತುಅಂಧ ಮಕ್ಕಳ ಬಾಳಲ್ಲಿ ಆಶಾಕಿರಣ ಮೂಡಿಸುವ ಕೆಲಸವನ್ನು ಈ ವಸತಿ ಶಾಲೆಯಅಂದ ಶಿಕ್ಷಕರು ಮಾಡುತ್ತಿರುವದು ಶ್ಲಾಗಿನಿಯಕಾರ್ಯವಾಗಿದ್ದು ಈ ಹಿನ್ನಲೆಯಲ್ಲಿಗುರುಪೂರ್ಣಿಮ ನಿಮತ್ಯ ಅಂಧ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಗುತ್ತಿದೆಎಂದು ತಿಳಿಸಿದರು. 

ಈ ಕಾರ್ಯಕ್ರಮದಲ್ಲಿ ಮಹಿಳಾ ಮೋರ್ಚಾರ ಪ್ರಧಾನ ಕಾರ್ಯದರ್ಶಿ  ಲಲಿತಾ ಗುಂಡೆನಹಳ್ಳಿ,ಅಕ್ಕನ ಬಳಗದ ಮಾಜಿಅಧ್ಯಕ್ಷಣಿ ಚಂಪಕ್ಕ ಹುಣಸಿಮರದ, ಲೀಲಾವತಿ ಹಲಗಲಿ, ಬಸವಣ್ಣಮ್ಮ ಕನವಳ್ಳಿ, ರೇಣುಕಾ ಮಡಿವಾಳರ, ಹಾಗೂ ವಸತಿ ಶಾಲೆಯ ಶಿಕ್ಷಕರಾದ ಮಂಜುನಾಥ, ಎಚ್‌.ಮಹಾದೇವ, ಎಂ.ವಸಂತ, ಯಶವಂತಗೌಡ ನೀಲನಗೌಡರ, ಸೇರಿದಂತೆ ಹಲವಾರು ಮುಖಂಡರುಗಳು ಉಪಸ್ಥಿತರಿದ್ದರು.