ಸೋಯಾ ಅವರೆ ಬೆಳೆಯುವ ರೈತರೇ ಎಚ್ಚರವಹಿಸಿ
Farmers growing soybeans, please take note
ಹುಕ್ಕೇರಿ 14 : ತಾಲೂಕಿನಾದ್ಯಂತ ಬೆಳೆ ಪರಿಸ್ಥಿತಿ ಅವಲೋಕವನ್ನು ಕೃಷಿ ವಿಜ್ಞಾನ ಕೇಂದ್ರ, ತುಕ್ಕಾನಟ್ಟಿಯ ವಿಜ್ಞಾನಿಗಳಾದ ಡಾಽಽ ದತ್ತಾ ಮೇತ್ರೆ, ಉಪ ಕೃಷಿ ನಿರ್ದೇಶಕರಾದ ಶ್ರೀ ಸಹದೇವ ಯರಗೊಪ್ಪ, ಸಹಾಯಕ ಕೃಷಿ ನಿರ್ದೇಶಕರಾದ ಶ್ರೀ ಎಂ.ಎಸ್.ಪಟಗುಂದಿ ಹಾಗೂ ಹುಕ್ಕೇರಿ ತಾಲೂಕಾ ಕೃಷಿ ಇಲಾಖಾ ಸಿಬ್ಬಂದಿಯವರು ಕೈಗೊಂಡಿದ್ದು , ಇದರಡಿ ತಾಲೂಕಿನ ಹುಕ್ಕೇರಿ, ಬಸ್ತವಾಡ, ಗೌಡವಾಡ, ಬಡಕುಂದ್ರಿ, ಎಲಿಮುನ್ನೋಳಿ, ಬೆಳವಿ, ಗುಡಸ, ಕುರಣಿ, ಕೋಚರಿ, ಹಂಚಿನಾಳ, ಹೆಬ್ಬಾಳ, ಚಿಕ್ಕಾಲಗುಡ್ಡ, ಉ.ಖಾನಾಪೂರ, ಹತ್ತರಗಿ ಮುಂತಾದ ಪ್ರಮುಖ ಸೋಯಾಆವರೆ ಬೆಳೆಯುವ ಪ್ರದೇಶಗಳಿಗೆ ಭೇಟಿ ನೀಡಿ ಪರೀಶೀಲಿಸಲಾಗಿದೆ.
ಭೇಟಿಯ ಸಂದರ್ಭದಲ್ಲಿ ತಡವಾಗಿ ಸೊಯಾಅವರೆ ಬಿತ್ತನೆಯಾದ ಕೆಲವು ಪ್ರದೇಶಗಳಲ್ಲಿ ಹಾಗೂ ಮುಂಚಿತವಾಗಿ ಬಿತ್ತನೆಯಾದ ಬಹುತೇಕ ಕಡೆ ಸ್ವಲ್ಪ ಮಟ್ಟಿಗೆ ಕೀಟಗಳು ಹಾಗೂ ರೋಗಗಳ ಹಾವಳಿ ಇರುವುದನ್ನು ಗಮನಿಸಲಾಗಿದೆ. ರೈತರು ತಮ್ಮ ಹೊಲದಲ್ಲಿ ಹಸಿರು ಕಾಯಿಕೊರಕ (ಹೆಲಿಕೋವರ್ಾ) ಕಂಡು ಬಂದಲ್ಲಿ ಹತೋಟಿಗಾಗಿ ಕ್ಲೋರಾಂಟ್ರಾನಿಲ್ ಪೋಲ್ 18.5ಅ ಎಸ್.ಸಿ ಪ್ರತಿ ಟ್ಯಾಂಕಿಗೆ 5.00 ಮಿಲೀ ಜೊತೆಗೆ 80 ಗ್ರಾಂ 13:0.45 ನೀರಿನಲ್ಲಿ ಕರಗುವ ರಸಗೊಬ್ಬರ ಸೇರಿಸಿ ಸಿಂಪರಣೆ ಮಾಡುವಂತೆ ಕೋರಲಾಗಿದೆ.ಮುಂಚಿತವಾಗಿ ಬೆಳೆದ ಸೊಯಾಅವರೆಯಲ್ಲಿ ಅಲ್ಲಲ್ಲಿ ಕಾಂಡಕೊರಕ ಹುಳು ಕಂಡುಬಂದಿದ್ದು,
ಹತೋಟಿಗಾಗಿ ಥಯಾಮೆಥಾಕ್ಸಮ್ 12.6ಅ + ಲ್ಯಾಂಬ್ಲಾಸೈಹೆಲೋಡ್ರಿನ್ 9.5ಅ 15-20 ಮಿಲೀ ಅಥವಾ 30 ಗ್ರಾಂ ಕಾರ್ಟಾಪ್ ಹೈಡೋಕ್ಲೋರೈಡ್ 50ಅ ಎಸ್.ಪಿ ಪ್ರತಿ 16 ಲೀ ಟ್ಯಾಂಕಿಗೆ ಸೇರಿಸಿ ಸಿಂಪಡಿಸಲು ಸೂಚಿಸಿದೆ. ಮುಂದುವರೆದು, ಅಲ್ಲಲ್ಲಿ ಕಾಂಡಕೊಳೆ ರೋಗದ ಬಾಧೆಯನ್ನು ಕೂಡ ಗಮನಿಸಲಾಗಿದ್ದು, ಹತೋಟಿಗಾಗಿ ಪ್ರತಿ ಟ್ಯಾಂಕಿಗೆ 30 ಗ್ರಾಂ ವೈಟಾವ್ಯಾಕ್ಸ್ ಸಿಂಪರಣೆ ಮಾಡಲು ವಿನಂತಿಸಿದೆ. ಒಣ ಹವೆ ಮುಂದುವರೆದ ಹಿನ್ನಲೆಯಲ್ಲಿ, ಭೂಮಿಯನ್ನು ಕಳೆರಹಿತ ಇಡುವಂತೆ ಹಾಗೂ ತೇವಾಂಶ ರಕ್ಷಿಸುವ ಕ್ರಮಗಳನ್ನು ಕೈಗೊಳ್ಳಲು, ಮತ್ತು ಸಾಧ್ಯವಾದಲ್ಲಿ ತುಂತುರು ನೀರಾವರಿ ಮೂಲಕ ನೀರು ಕೊಡುವಂತೆ ರೈತರಲ್ಲಿ ಕೋರಲಾಗಿದೆ.
ಅಂಬೋಲಿ ಬಳಿ ಕಣಿವೆಗೆ ಬಿದ್ದು ಯುವಕ ದುರ್ಮರಣ : 5 ಗಂಟೆ ಕಾರ್ಯಾಚರಣೆ ಬಳಿಕ ಶವ ಪತ್ತೆ
ಸುತಗಟ್ಟಿ ಗ್ರಾಮದಲ್ಲಿ ಪ್ರತ್ಯಕ್ಷವಾಗಿದ್ದ ಚಿರತೆ ಸೆರೆ : ನಿಟ್ಟೂಸಿರು ಬಿಟ್ಟ ಗ್ರಾಮಸ್ಥರು
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ 