ಕುರಿ ಕದ್ದುಕೊಂಡು ಸಾಗುತ್ತಿದ್ದ ಕಳ್ಳರನ್ನು ಹಿಡಿದ ರೈತ
Farmer catches thieves stealing sheep
ಲೋಕದರ್ಶನ ವರದಿ
ಇಂಡಿ, 09 : ದ್ವಿಚಕ್ರ ವಾಹನದ ಮೇಲೆ ಕುರಿ ಕದ್ದುಕೊಂಡು ಸಾಗುತ್ತಿದ್ದ ಕಳ್ಳರನ್ನು ರೈತನೋರ್ವ ಸಿನಿಮಿಯ ರೀತಿಯಲ್ಲಿ ವಾಹನದ ಮೇಲೆ ಬೆನ್ನಟ್ಟಿದಾಗ ಕುರಿಯನ್ನು ಬಿಟ್ಟು ಕಳ್ಳರು ಪರಾರಿಯಾಗಿದ್ದಾರೆ.
ಇಂಡಿ ತಾಲ್ಲೂಕಿನ ಹಿರೇರೂಗಿ ಗ್ರಾಮದ ಶಾಂತಿ ನಗರದಲ್ಲಿರುವ ಶ್ರೀನಿವಾಸ ತಳವಾರ ಎಂಬ ರೈತನ ಮನೆಯ ಮುಂದೆ ಕಟ್ಟಿರುವ ಕುರಿಯನ್ನು ಬಿಚ್ಚಿಕೊಂಡು ಕಳ್ಳರು ದ್ವಿಚಕ್ರವಾಹನದಲ್ಲಿ ಓಡಿ ಹೋಗುತ್ತೀರುವ ಸಂದರ್ಭದಲ್ಲಿ ಅವರನ್ನು ರೈತ ಶ್ರೀನಿವಾಸ್ ತಳವಾರ ದ್ವಿಚಕ್ರದ ವಾಹನದ ಬೆನ್ನಟ್ಟಿ ಅವರನ್ನು ಹಿಡಿಯಲು ಪ್ರಯತ್ನ ಮಾಡಿದ್ದಾರೆ. ಆದರೆ ಕಳ್ಳರು ಇಂಡಿ ನಗರದ ಅಗ್ನಿಶಾಮಕ ಠಾಣೆ ಹತ್ತಿರ ಕುರಿಯನ್ನು ಬಿಟ್ಟು ಪರಾರಿಯಾಗಿದ್ದಾರೆ.ಒಂದೇ ದ್ವೀಚಕ್ರವಾಹನದಲ್ಲಿದ್ದ ಮೂವರು ಕಳ್ಳರು ವೆಹಿಕಲ್ ಸಂಖ್ಯೆ ಕೆಎ 28 ಕ್ಯೂ 5523 ಹೊಂದಿದ್ದು ಇಂಡಿ ನಗರ ಸೇರಿಕೊಂಡು ಪರಾರಿಯಾಗಿದ್ದಾರೆ. ಇಂಡಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 