ರೈತ ಕ್ಷೇತ್ರ ಪಾಠ ಶಾಲೆ ಯೋಜನೆ ರೈತರಿಗೆ ಸಹಕಾರಿ: ನಿಂಗಪ್ಪ ಅರಿಕೇರಿ

ರೈತ ಕ್ಷೇತ್ರ ಪಾಠ ಶಾಲೆ ಯೋಜನೆ ರೈತರಿಗೆ ಸಹಕಾರಿ: ನಿಂಗಪ್ಪ ಅರಿಕೇರಿ  Farmer Field School Scheme helpful for farmers: Ningappa Arikeri

ನೇಸರಗಿ 10 :  ಇಲ್ಲಿಗೆ ಸಮೀಪದ  ಮೇಕಲಮರಡಿ  ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ಗ್ರಾಮೀಣಭಿವೃದ್ಧಿ ಯೋಜನೆ ಸಹಯೋಗದಲ್ಲಿ ರೈತ ಕ್ಷೇತ್ರ ಪಾಠಶಾಲೆಯನ್ನು ಹಮ್ಮಿಕೊಳ್ಳಲಾಗಿತು. ಈ ಕಾರ್ಯಕ್ರಮವನ್ನು ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ನಿಂಗಪ್ಪ ಅರಿಕೇರಿ ಅವರು  ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. 

ಈ ಸಂದರ್ಭದಲ್ಲಿ ಊರಿನ ಮುಖಂಡರು ಹಾಗೂ ನಿವೃತ್ತ ಪ್ರಶಸ್ತಿ ಅಧಿಕಾರಿಗಳಾದ ವಿದ್ಯಾಧರ ಹೊಸೂರ, ವಲಯದ ಮೇಲ್ವಿಚಾರಕರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳು ರೈತರಿಗೆ ಬೀಜೋಪಚಾರ, ಬೀಜಗಳ ಆಯ್ಕೆ,ಸಾವಯವ  ಕೃಷಿ,  ಹೈನುಗಾರಿಕೆ ಬಗ್ಗೆ ಸಮಗ್ರವಾಗಿ ಮಾಹಿತಿಯನ್ನು ನೀಡಿದರು. ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ನಿಂಗಪ್ಪ ಅರಿಕೇರಿ ಮಾತನಾಡಿ  ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಹಾಗೂ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮ ಉದ್ದೇಶಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.    

ಈ ಕಾರ್ಯಕ್ರಮವನ್ನು ತಾಲೂಕಿನ ಕೃಷಿ ಮೇಲ್ವಿಚಾರಕರು ನಿರೂಪಿಸಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದರು ಕಾರ್ಯಕ್ಷೇತ್ರ ಸೇವಾ ಪ್ರತಿನಿಧಿ  ವಂದಿಸಿದರು. ಈ ಕಾರ್ಯಕ್ರಮದಲ್ಲಿ  ಜ್ಞಾನದೇವ ತುಮ್ಮರಗುದ್ದಿ, ಗ್ರಾಮದ  ರೈತ ಬಾಂಧವರು, ಗ್ರಾಮಸ್ಥರು  ಉಪಸಿತರಿದ್ದರು.