ಸರಕಾರಿ ಶಾಲೆಗೆ 2 ಲಕ್ಷ ರೂ ದೇಣಿಗೆ ನೀಡಿದ ವೀರಯೋಧನ ಕುಟುಂಬಸ್ಥರು
Family members of Soldier donate Rs 2 lakh to government school
ಚಿಕ್ಕೋಡಿ 25: ತಾಲೂಕಿನ ನವಲಿಹಾಳ ಸರಕಾರಿ ಪ್ರೌಢ ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ವೀರಯೋಧ ದಿ.ಯೋಗೇಶ ದತ್ತವಾಡೆ ಇವರ ಸ್ಮರಣಾರ್ಥ ಅಂಗವಾಗಿ ಕುಟುಂಬಸ್ಥರು ಸರಕಾರಿ ಪ್ರೌಢ ಶಾಲೆಗೆ 2 ಲಕ್ಷ ರೂ ದೇಣಿಗೆ ನೀಡಿ ಉಧಾರತೆ ಮೆರೆದರು.
ಇಂದಿನ ಹೈಟಿಕ ಜೀವನದಲ್ಲಿ ದೇಣಿಗೆ ಎನ್ನುವುದು ಮರೆಮಾಚುವ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳು ಪ್ರಗತಿ ಕಾಣಬೇಕು ಎಂದುಕೊಂಡಿರುವ ವೀರಯೋಧನ ಕುಟುಂಬಸ್ಥರು ನವಲಿಹಾಳ ಸರಕಾರಿ ಪ್ರೌಢ ಶಾಲೆಗೆ 2 ಲಕ್ಷ ರೂ ದೇಣಿಗೆ ನೀಡಿರುವುದು ವಿಶೇಷವಾಗಿದೆ.
ಪ್ರೌಢ ಶಾಲೆಯ ಪ್ರಭಾರಿ ಮುಖ್ಯೋಪಾಧ್ಯ ಬಿ.ಡಿ.ನೇರಲೆ ಮಾತನಾಡಿ ದೇಶ ಸೇವೆ ಮಾಡಿ ಹುತಾತ್ಮರಾದ ದಿ.ಯೋಗೇಶ ದತ್ತವಾಡೆ ಇವರ ಸ್ಮರಣಾರ್ಥ ದತ್ತವಾಡೆ ಕುಟುಂಬಸ್ಥರು 2 ಲಕ್ಷ ರೂ ದೇಣಿಗೆ ನೀಡಿರುವುದು ಸರಕಾರಿ ಶಾಲೆಗೆ ಬಲ ಬಂದಿದೆ. ಈ ದೇಣಿಗೆ ಹಣವನ್ನು ಬಡ ಮಕ್ಕಳ ಅಭಿವೃದ್ಧಿಗೆ ಸಮರ್ಕ ಬಳಸಿಕೊಳ್ಳುತ್ತೇವೆ ಎಂದರು.
ಗ್ರಾಮದ ಹಿರಿಯರಾದ ಜಯರಾನಜಿರಾವ ಘೋರೆ್ಡ(ಸರಕಾರ), ಕಾಕಾಸಾಹೇಬ ಖಡ್ಡ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ವಿಶ್ವನಾಥ ಧುಮಾಳ, ಶೀತಲ ಚೌಗಲಾ, ಸಿ.ಆರ್.ಹಿರವೆಣ್ಣವರ ಮುಂತಾದವರು ಇದ್ದರು.
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್ 