ಸರಕಾರಿ ಶಾಲೆಗೆ 2 ಲಕ್ಷ ರೂ ದೇಣಿಗೆ ನೀಡಿದ ವೀರಯೋಧನ ಕುಟುಂಬಸ್ಥರು

ಸರಕಾರಿ ಶಾಲೆಗೆ 2 ಲಕ್ಷ ರೂ ದೇಣಿಗೆ ನೀಡಿದ ವೀರಯೋಧನ ಕುಟುಂಬಸ್ಥರು Family members of Soldier donate Rs 2 lakh to government school

ಚಿಕ್ಕೋಡಿ   25: ತಾಲೂಕಿನ ನವಲಿಹಾಳ ಸರಕಾರಿ ಪ್ರೌಢ ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ವೀರಯೋಧ ದಿ.ಯೋಗೇಶ ದತ್ತವಾಡೆ ಇವರ ಸ್ಮರಣಾರ್ಥ ಅಂಗವಾಗಿ ಕುಟುಂಬಸ್ಥರು ಸರಕಾರಿ ಪ್ರೌಢ ಶಾಲೆಗೆ 2 ಲಕ್ಷ ರೂ ದೇಣಿಗೆ ನೀಡಿ ಉಧಾರತೆ ಮೆರೆದರು. 

ಇಂದಿನ ಹೈಟಿಕ ಜೀವನದಲ್ಲಿ ದೇಣಿಗೆ ಎನ್ನುವುದು ಮರೆಮಾಚುವ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳು ಪ್ರಗತಿ ಕಾಣಬೇಕು ಎಂದುಕೊಂಡಿರುವ ವೀರಯೋಧನ ಕುಟುಂಬಸ್ಥರು ನವಲಿಹಾಳ ಸರಕಾರಿ ಪ್ರೌಢ ಶಾಲೆಗೆ 2 ಲಕ್ಷ ರೂ ದೇಣಿಗೆ ನೀಡಿರುವುದು ವಿಶೇಷವಾಗಿದೆ. 

ಪ್ರೌಢ ಶಾಲೆಯ ಪ್ರಭಾರಿ ಮುಖ್ಯೋಪಾಧ್ಯ ಬಿ.ಡಿ.ನೇರಲೆ ಮಾತನಾಡಿ ದೇಶ ಸೇವೆ ಮಾಡಿ ಹುತಾತ್ಮರಾದ ದಿ.ಯೋಗೇಶ ದತ್ತವಾಡೆ ಇವರ ಸ್ಮರಣಾರ್ಥ ದತ್ತವಾಡೆ ಕುಟುಂಬಸ್ಥರು 2 ಲಕ್ಷ ರೂ ದೇಣಿಗೆ ನೀಡಿರುವುದು ಸರಕಾರಿ ಶಾಲೆಗೆ ಬಲ ಬಂದಿದೆ. ಈ ದೇಣಿಗೆ ಹಣವನ್ನು ಬಡ ಮಕ್ಕಳ ಅಭಿವೃದ್ಧಿಗೆ ಸಮರ​‍್ಕ ಬಳಸಿಕೊಳ್ಳುತ್ತೇವೆ ಎಂದರು. 

ಗ್ರಾಮದ ಹಿರಿಯರಾದ ಜಯರಾನಜಿರಾವ ಘೋರೆ​‍್ಡ(ಸರಕಾರ), ಕಾಕಾಸಾಹೇಬ ಖಡ್ಡ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ವಿಶ್ವನಾಥ ಧುಮಾಳ, ಶೀತಲ ಚೌಗಲಾ, ಸಿ.ಆರ್‌.ಹಿರವೆಣ್ಣವರ ಮುಂತಾದವರು ಇದ್ದರು.