ಸರಕಾರಿ ಶಾಲೆಗೆ 2 ಲಕ್ಷ ರೂ ದೇಣಿಗೆ ನೀಡಿದ ವೀರಯೋಧನ ಕುಟುಂಬಸ್ಥರು
Family members of Soldier donate Rs 2 lakh to government school
ಚಿಕ್ಕೋಡಿ 25: ತಾಲೂಕಿನ ನವಲಿಹಾಳ ಸರಕಾರಿ ಪ್ರೌಢ ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ವೀರಯೋಧ ದಿ.ಯೋಗೇಶ ದತ್ತವಾಡೆ ಇವರ ಸ್ಮರಣಾರ್ಥ ಅಂಗವಾಗಿ ಕುಟುಂಬಸ್ಥರು ಸರಕಾರಿ ಪ್ರೌಢ ಶಾಲೆಗೆ 2 ಲಕ್ಷ ರೂ ದೇಣಿಗೆ ನೀಡಿ ಉಧಾರತೆ ಮೆರೆದರು.
ಇಂದಿನ ಹೈಟಿಕ ಜೀವನದಲ್ಲಿ ದೇಣಿಗೆ ಎನ್ನುವುದು ಮರೆಮಾಚುವ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳು ಪ್ರಗತಿ ಕಾಣಬೇಕು ಎಂದುಕೊಂಡಿರುವ ವೀರಯೋಧನ ಕುಟುಂಬಸ್ಥರು ನವಲಿಹಾಳ ಸರಕಾರಿ ಪ್ರೌಢ ಶಾಲೆಗೆ 2 ಲಕ್ಷ ರೂ ದೇಣಿಗೆ ನೀಡಿರುವುದು ವಿಶೇಷವಾಗಿದೆ.
ಪ್ರೌಢ ಶಾಲೆಯ ಪ್ರಭಾರಿ ಮುಖ್ಯೋಪಾಧ್ಯ ಬಿ.ಡಿ.ನೇರಲೆ ಮಾತನಾಡಿ ದೇಶ ಸೇವೆ ಮಾಡಿ ಹುತಾತ್ಮರಾದ ದಿ.ಯೋಗೇಶ ದತ್ತವಾಡೆ ಇವರ ಸ್ಮರಣಾರ್ಥ ದತ್ತವಾಡೆ ಕುಟುಂಬಸ್ಥರು 2 ಲಕ್ಷ ರೂ ದೇಣಿಗೆ ನೀಡಿರುವುದು ಸರಕಾರಿ ಶಾಲೆಗೆ ಬಲ ಬಂದಿದೆ. ಈ ದೇಣಿಗೆ ಹಣವನ್ನು ಬಡ ಮಕ್ಕಳ ಅಭಿವೃದ್ಧಿಗೆ ಸಮರ್ಕ ಬಳಸಿಕೊಳ್ಳುತ್ತೇವೆ ಎಂದರು.
ಗ್ರಾಮದ ಹಿರಿಯರಾದ ಜಯರಾನಜಿರಾವ ಘೋರೆ್ಡ(ಸರಕಾರ), ಕಾಕಾಸಾಹೇಬ ಖಡ್ಡ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ವಿಶ್ವನಾಥ ಧುಮಾಳ, ಶೀತಲ ಚೌಗಲಾ, ಸಿ.ಆರ್.ಹಿರವೆಣ್ಣವರ ಮುಂತಾದವರು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 