ಸರಕಾರಿ ಶಾಲೆಗೆ 2 ಲಕ್ಷ ರೂ ದೇಣಿಗೆ ನೀಡಿದ ವೀರಯೋಧನ ಕುಟುಂಬಸ್ಥರು
Family members of Soldier donate Rs 2 lakh to government school
ಚಿಕ್ಕೋಡಿ 25: ತಾಲೂಕಿನ ನವಲಿಹಾಳ ಸರಕಾರಿ ಪ್ರೌಢ ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ವೀರಯೋಧ ದಿ.ಯೋಗೇಶ ದತ್ತವಾಡೆ ಇವರ ಸ್ಮರಣಾರ್ಥ ಅಂಗವಾಗಿ ಕುಟುಂಬಸ್ಥರು ಸರಕಾರಿ ಪ್ರೌಢ ಶಾಲೆಗೆ 2 ಲಕ್ಷ ರೂ ದೇಣಿಗೆ ನೀಡಿ ಉಧಾರತೆ ಮೆರೆದರು.
ಇಂದಿನ ಹೈಟಿಕ ಜೀವನದಲ್ಲಿ ದೇಣಿಗೆ ಎನ್ನುವುದು ಮರೆಮಾಚುವ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳು ಪ್ರಗತಿ ಕಾಣಬೇಕು ಎಂದುಕೊಂಡಿರುವ ವೀರಯೋಧನ ಕುಟುಂಬಸ್ಥರು ನವಲಿಹಾಳ ಸರಕಾರಿ ಪ್ರೌಢ ಶಾಲೆಗೆ 2 ಲಕ್ಷ ರೂ ದೇಣಿಗೆ ನೀಡಿರುವುದು ವಿಶೇಷವಾಗಿದೆ.
ಪ್ರೌಢ ಶಾಲೆಯ ಪ್ರಭಾರಿ ಮುಖ್ಯೋಪಾಧ್ಯ ಬಿ.ಡಿ.ನೇರಲೆ ಮಾತನಾಡಿ ದೇಶ ಸೇವೆ ಮಾಡಿ ಹುತಾತ್ಮರಾದ ದಿ.ಯೋಗೇಶ ದತ್ತವಾಡೆ ಇವರ ಸ್ಮರಣಾರ್ಥ ದತ್ತವಾಡೆ ಕುಟುಂಬಸ್ಥರು 2 ಲಕ್ಷ ರೂ ದೇಣಿಗೆ ನೀಡಿರುವುದು ಸರಕಾರಿ ಶಾಲೆಗೆ ಬಲ ಬಂದಿದೆ. ಈ ದೇಣಿಗೆ ಹಣವನ್ನು ಬಡ ಮಕ್ಕಳ ಅಭಿವೃದ್ಧಿಗೆ ಸಮರ್ಕ ಬಳಸಿಕೊಳ್ಳುತ್ತೇವೆ ಎಂದರು.
ಗ್ರಾಮದ ಹಿರಿಯರಾದ ಜಯರಾನಜಿರಾವ ಘೋರೆ್ಡ(ಸರಕಾರ), ಕಾಕಾಸಾಹೇಬ ಖಡ್ಡ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ವಿಶ್ವನಾಥ ಧುಮಾಳ, ಶೀತಲ ಚೌಗಲಾ, ಸಿ.ಆರ್.ಹಿರವೆಣ್ಣವರ ಮುಂತಾದವರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 