ಹೂವಿನ ಹಡಗಲಿ ತಾ.ಪಂ.ಪ್ರಗತಿ ಪರಿಶೀಲನಾ ಸಭೆ
ಲೋಕದರ್ಶನ ವರದಿ
ಹೂವಿನಹಡಗಲಿ11: ಕೇಂದ್ರ ಸಕರ್ಾರದ ಶ್ಯಾಮ ಪ್ರಸಾದ್ ಮುಖಜರ್ಿ ಗ್ರಾಮೀಣ ನಗರ ಅಭಿವೃದ್ದಿ ಅಭಿಯಾನಕ್ಕೆ ಹೊಳಲು ಕ್ಲಸ್ಟರ್ ಆಯ್ಕೆಯಾಗಿದೆ.ಹೊಳಲು ಮತ್ತ ಮೈಲಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಯೋಜನೆ ಅಡಿ 50ಕೋಟಿ ವೆಚ್ಚದ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಾ.ಪಂ.ಇಒ ಯು.ಎಚ್.ಸೋಮಶೇಖರ ತಿಳಿಸಿದರು.
ಇಲ್ಲಿನ ತಾ.ಪಂ.ಯಲ್ಲಿ ಈಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದರು.ಗ್ರಾಮ ವಿಕಾಸ ಯೋಜನೆಯ ಹಣವನ್ನು ಏಜೆನ್ಸಿಗೆ ವಗರ್ಾವಣೆ ಮಾಡಲು ಹಿಂದೇಟು ಹಾಕುತ್ತಿರುವ ಗ್ರಾ.ಪಂ.ಅಧ್ಯಕ್ಷರ ಮೇಲೆ ಶಿಸ್ತು ಕ್ರಮದ ನೋಟಿಸ್ ನೀಡುವಂತೆ ತಾ.ಪಂ.ಅಧ್ಯಕ್ಷ ಸೋಗಿ ಹಾಲೇಶ ಸೂಚಿಸಿದ ಅವರು ನಂದಿಹಳ್ಳಿ ಹೊರತಾಗಿ ನಾಲ್ಕು ಗ್ರಾ.ಪಂ.ಅಧ್ಯಕ್ಷರು ಹಣ ವಗರ್ಾವಣೆ ಮಾಡಿಲ್ಲ.ಇದರಿಂದ ಕೆಲಸಕ್ಕೆ ಅಡ್ಡಿಯಾಗಿದೆ ಎಂದು ಪಂಚಾಯತ್ ರಾಜ್ಯ ಇಲಾಖೆ ಎಇಇ ಸತೀಶ ಪಾಟೀಲ ಸಭೆಗೆ ತಿಳಿಸಿದರು.
14ನೇ ಹಣಕಾಸು ಯೋಜನೆ,ನರೇಗಾ ಯೋಜನೆ ಹಣ ಕೇಳುತ್ತಿಲ್ಲ.ವಾರದಲ್ಲಿ ಹಣ ವಗರ್ಾವಣೆ ಮಾಡದಿದ್ದಲ್ಲಿ ಅಂತವರ ವಿರುದ್ದ ಕ್ರಮಕ್ಕೆ ಶಿಫಾರಸು ಮಾಡುತ್ತೇವೆ ಎಂದು ಇಒ ತಿಳಿಸಿದರು.
ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಇನ್ನು ವಿಳಂಬವಾಗುತ್ತಿವೆ.ನದಿ ತುಂಬಿ ಹರಿಯುವ ದಿನಗಳಲ್ಲಿ ನೀರು ಪೂರೈಕೆ ಮಾಡದಿದ್ದರೇ ಹೇಗೆ ಎಂದು ಗ್ರಾಮೀಣ ಕುಡಿವ ನೀರು ನೈರ್ಮಲ್ಯ ಇಲಾಖೆ ಎಂಜಿನಿಯರ್ ಅವರನ್ನು ಹಾಲೇಶ ತರಾಟೆಗೆ ತೆಗೆದುಕೊಂಡರು.ಇಟ್ಟಿಗಿಯಲ್ಲಿ 2ಶುದ್ದ ನೀರಿನ ಘಟಕಗಳಿವೆ.ಇನ್ನು ಎರಡು ಘಟಕಗಳು ಮಂಜೂರಾಗಿವೆ.
ಘಟಕಗಳಲ್ಲಿ ಶೇ.50ಕ್ಕಿಂತ ಹೆಚ್ಚು ನೀರು ಪೋಲಾಗುವುದರಿಂದ ಮುಂದಿನ ಬೇಸಿಗೆಯಲ್ಲಿ ನಿರ್ವಹಣೆ ಕಟ್ಟವಾಗುತ್ತದೆ.ಆದ್ದರಿಂದ ಇಟ್ಟಿಗಿಗೆ ನದಿಯಿಂದ ನೀರು ಪೂರೈಕೆ ಮಾಡಬೇಕು ಎಂದು ಪಿಡಿಒ ಶಶಿಕಲಾ ಕೊಪ್ಪದ ಗಮನ ಸೆಳೆದರು. ಉಪನಾಯ್ಕನಹಳ್ಳಿ, ಮಾನ್ಯರ ಮಸಲವಾಡ ಗ್ರಾಮಕ್ಕೆ ಬೇಗ ಯೋಜನೆ ಪೂರ್ಣಗೊಳಿಸಿ ಹಳ್ಳಿಗಳಿಗೆ ನೀರು ಪೂರೈಕೆ ಮಾಡುವಂತೆ ತಾಕೀತ್ ಮಾಡಿದರು.ತಾ.ಪಂ.ಯೋಜನಾಧಿಕಾರಿ ಬಸವನಗೌಡ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 