ಅಬಕಾರಿ ದಾಳಿ : 6 ಲೀ.ಕಳ್ಳಭಟ್ಟಿ ಸಾರಾಯಿ ಜಪ್ತಿ

ಅಬಕಾರಿ ದಾಳಿ : 6 ಲೀ.ಕಳ್ಳಭಟ್ಟಿ ಸಾರಾಯಿ ಜಪ್ತಿ Excise raid: 6 liters of illicit liquor seized

ವಿಜಯಪುರ  20:  ವಿಜಯಪುರ ಅಬಕಾರಿ ಇಲಾಖೆ ಅಧಿಕಾರಿಗಳು ತಿಕೋಟಾ ತಾಲೂಕಿನ ಕಳ್ಳಕವಟಗಿ ತಾಂಡಾ-2ದ ಮನೆಯೊಂದರ ಮೇಲೆ ದಾಳಿ ನಡೆಸಿ, 06 ಲೀ. ಕಳ್ಳಭಟ್ಟಿ ಸಾರಾಯಿ ಜಪ್ತಿ ಮಾಡಿಕೊಂಡು ಆರೋಪಿತ ಅನೀಲ ಪವಾರ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.  

ದಾಳಿಯಲ್ಲಿ ಅಬಕಾರಿ ಉಪ ನೀರೀಕ್ಷಕರಾದ ಅನೀಲ ಪತ್ತಾರ, ಮುಖ್ಯ ಪೇದೆ ಎ.ಎ.ನಾಗೂರ, ಎಂ.ಎಸ್‌.ಕೊಟ್ಟಲಗಿ, ಶ್ರೀಶೈಲ ಬಂಡಗಾರ ಭಾಗವಹಿಸಿದ್ದರು ಎಂದು ಅಬಕಾರಿ ಉಪ ನೀರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.