ದೈಹಿಕ ಮಾನಸಿಕ ಸದೃಢತೆಗೆ ಪ್ರತಿಯೊಬ್ಬರು ಕ್ರೀಡಾಸಕ್ತಿ ಬಳಸಿಕೊಳ್ಳಬೇಕು: ಪಟೇಲ್

ದೈಹಿಕ ಮಾನಸಿಕ ಸದೃಢತೆಗೆ ಪ್ರತಿಯೊಬ್ಬರು ಕ್ರೀಡಾಸಕ್ತಿ ಬಳಸಿಕೊಳ್ಳಬೇಕು: ಪಟೇಲ್   Everyone should use sports for physical and mental fitness: Patel

ಕೊಪ್ಪಳ 22:  ಪ್ರತಿಯೊಬ್ಬ ಮನುಷ್ಯನ ದೈಹಿಕ ಮಾನಸಿಕ ಸದೃಢತೆಗಾಗಿ ಕ್ರೀಡಾಸಕ್ತಿ ಬೆಳೆಸಿಕೊಳ್ಳುವುದು ಒಳ್ಳೆಯದು ಎಂದು ಕೊಪ್ಪಳ ನಗರಸಭೆಯ ಅಧ್ಯಕ್ಷರಾದ ಅಮ್ಜದ್ ಪಟೇಲ್ ಹೇಳಿದರು.

ಅವರು ನಗರದ ಹೊರವಲಯ ಚುಕುನಕಲ್  ರಸ್ತೆ, ಸ್ವಾಮಿ ವಿವೇಕಾನಂದ ಶಾಲೆ ಹತ್ತಿರ   ಜಮೀಲ್ ಹುಸೇನ್ ಪೈಮಾಸಿ ಮತ್ತು ಯಾಕೂಬ ಸಾಬ್ ಕಮ್ಮಾರ್ ಹಾಗೂ ಹುಸೇನ್ ಸಾಬ್ ಪೈಮಾಸಿ ರವರುಗಳು ಸೇರಿ ಕೊಂಡು ನೂತನವಾಗಿ ಪ್ರಾರಂಭಿಸಿದ ರಾಯಲ್ ಟರ್ಫ್‌ ಎಂಬ ಕ್ರೀಡಾ ಕೇಂದ್ರದ ಉದ್ಘಾಟನೆ ನೆರವೇರಿಸಿ ಮಾತನಾಡಿ ಕ್ರಿಕೆಟ್, ವಾಲಿಬಾಲ್, ಫುಟ್ಬಾಲ್ ಮತ್ತು ಯೋಗ ಇಂತಹ ಉತ್ತಮವಾದಂತಹ ಮತ್ತು ಯಾವಗ್ಲೂ ಮನುಷ್ಯನ ಆರೋಗ್ಯ ವೃದ್ಧಿ ಯಾಗುವಂತಹ ಕ್ರೀಡಾ ಕೇಂದ್ರ ಇಲ್ಲಿ ಆರಂಭಗೊಂಡಿದ್ದು ಇದರಲ್ಲಿ ಪಾಲ್ಗೊಳ್ಳುವುದರ ಮೂಲಕ ಆರೋಗ್ಯ ಕಾಪಾಡುವಂತ ಕೆಲಸ ಮಾಡಲು ಸಾರ್ವಜನಿಕರು ಕ್ರೀಡಾಸಕ್ತಿ ಬೆಳೆಸಿಕೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕು ಇಂತಹ ಸಂಸ್ಥೆ ಕೇಂದ್ರಗಳಿಗೆ ಪ್ರತಿಯೊಬ್ಬರ ಪ್ರೋತ್ಸಾಹ ಅಗತ್ಯವಾಗಿದೆ ಎಂದು ಕೊಪ್ಪಳ ನಗರಸಭೆಯ ಅಧ್ಯಕ್ಷರಾದ ಅಮ್ಜದ್ ಪಟೇಲ್ ಅಭಿಪ್ರಾಯ ಪಟ್ಟರು.

ಸಮಾರಂಭದಲ್ಲಿ ಸೈಯದ್ ಫೌಂಡೇಶನ್ ಅಧ್ಯಕ್ಷ ಕೆಎಂ ಸಯ್ಯದ್, ಅಂಜುಮನ್ ಕಮಿಟಿ ಅಧ್ಯಕ್ಷ ಆಸಿಫ್ ಕರಕಿಹಳ್ಳಿ, ಕೊಪ್ಪಳ ನಗರಸಭೆಯ ಸದಸ್ಯ ಮುತ್ತುರಾಜ್ ಕುಷ್ಟಗಿ ಅಕ್ಬರ್ ಪಾಷಾ ಪಲ್ಟನ್, ಕರ್ನಾಟಕ ಮುಸ್ಲಿಂ ಯುನಿಟಿ ಜಿಲ್ಲಾಧ್ಯಕ್ಷ ಎಂಡಿ ಜಿಲಾನ್ ಕಿಲ್ಲೆದಾರ್  ಸೈಯದ್ ನಾಸಿರ್ ಹುಸೇನಿ ಸೇರಿದಂತೆ ಕಾರ್ಯಕರ್ತರು ಮತ್ತು ಅಭಿಮಾನಿಗಳು, ಪಾಲ್ಗೊಂಡಿದ್ದರು.