ಪ್ರತಿಯೊಬ್ಬರು ಸಂಸ್ಕಾರ, ಸಂಸ್ಕೃತಿಯಿಂದ ಜೀವನ ನಡೆಸಿ: ಆನಂದ ಗುರೂಜೀ

ಪ್ರತಿಯೊಬ್ಬರು ಸಂಸ್ಕಾರ, ಸಂಸ್ಕೃತಿಯಿಂದ ಜೀವನ ನಡೆಸಿ: ಆನಂದ ಗುರೂಜೀ Everyone should live their life with respect and culture: Anand Guruji

ರನ್ನ ಬೆಳಗಲಿ, 19 ; ಪೂಜೆ ಪುನಸ್ಕಾರ ಒಳ್ಳೆಯ ಆಚಾರ ವಿಚಾರ ನಡೆತೆಯಿಂದ ನಡೆದರೆ ಮನುಕುಲ ಉದ್ಧಾರವಾದಂತೆ. ಪ್ರತಿಯೊಬ್ಬರೂ ಒಳ್ಳೆಯ ಸಂಸ್ಕೃತಿ ಸಂಸ್ಕಾರ ಹಾಗೂ  ಭಕ್ತಿಭಾವಯಿಂದ   ನಡೆದು ಸದೃಢ ಜೀವನ ನಡೆಸಿದರೆ  ಮನುಕುಲದ ಉದ್ದಾರವಾದಂತೆ  ಎಂದು ಜ್ಯೋತಿಷಿ ಆನಂದ ಗುರೂಜಿಯವರು ರನ್ನ ಬೆಳಗಲಿಯ ಪುಣ್ಯಕೋಟಿ  ಸಿದ್ದಾಶ್ರಮ ಚಕ್ರಪುರವಾಸಿನಿ ಚಕ್ರೇಶ್ವರಿ ಜ್ಯೋತಿರ್ ವಿಜ್ಞಾನ ಸಂಶೋಧನಾ ಕೇಂದ್ರದ ನವರಾತ್ರಿ ಉತ್ಸವ ಹಾಗೂ ಐತಿಹಾಸಿಕ ಕುಂಭಮೇಳಕ್ಕೆ ಚಾಲನೆ ನೀಡಿ  ಹೇಳಿದರು. 

ಕಾರ್ಯಕ್ರಮದಲ್ಲಿ ಮುಖಂಡ ಸಿದ್ದು ಗೌಡ ಪಾಟೀಲ್ ಅಧ್ಯಕ್ಷತೆ ಕೇಂದ್ರದ ರಮೇಶ್ ಕುಮಾರ್ ಶಾಸ್ತ್ರಿ ನೇತೃತ್ವ ವಹಿಸಿದರು ಪಟ್ಟದ ಪಂಚಾಯತ್ ಅಧ್ಯಕ್ಷ ರೂಪಾ ಹೊಸಟ್ಟಿ, ಗಂಗಾಧರಯ್ಯ ಶಾಸ್ತ್ರಿ ಲೋಟಗೇರಿಯ ಗುರುಮೂರ್ತಿ ದೇವರ ಕನಕಲಮಠ ಬೆಳಗಾವಿಯ ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿ ಬುಡರಕಟ್ಟೆಯ ಪಂಚಾಕ್ಷರಿ ಸ್ವಾಮೀಜಿ ಗುರುಸಿದ್ದೇಶ್ವರ ಶಿವಚಾರ ಸ್ವಾಮೀಜಿ ಹುಕ್ಕೇರಿಯ ಅಭಿನವ ಮಂಜುನಾಥ ಮಹಾರಾಜರು ಮುಧೋಳದ ಸಿದ್ಧರಾಮ ಶಿವಯೋಗಿಗಳು ಮಹಾಲಿಂಗಪುರದ ಶ್ರೀಶೈಲ ಸ್ವಾಮೀಜಿಗಳು ಇದ್ದರು.  

ಬೆಳಿಗ್ಗೆ ಭುವನೇಶ್ವರಿ ದೇವಿ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಮಹಾ ಚಂಡಿಕಾ ಯಾಗ ನಡೆಯಿತು. ನಂತರ 5008 ಮಹಿಳೆಯರ ಮುಖಾಂತರ ಬೃಹತ್ ಐತಿಹಾಸಿಕ ಕುಂಭಮೇಳ ನಡೆಯಿತು.