ಪ್ರತಿಯೋಬ್ಬ ಮಹಿಳೆಯಲ್ಲಿ ಒಂದಿಲ್ಲೊಂದು ಪ್ರತಿಭೆ ಇರುತ್ತದೆ ಅದನ್ನ ಗುರುತಿಸುವ ಕಾರ್ಯ ಮಾಡಬೇಕು
Every woman has a talent, and we should work to recognize it.
ಶಿಗ್ಗಾವಿ 16 : ಮಹಿಳೆಯು ಬದುಕಿನ ಸಮತೋಲನ ಕಾಪಾಡಿಕೊಳ್ಳುವುದು ಮುಖ್ಯವಾಗಿದ್ದು ಪ್ರತಿಯೋಬ್ಬ ಮಹಿಳೆಯಲ್ಲಿ ಒಂದಿಲ್ಲೊಂದು ಪ್ರತಿಭೆ ಇರುತ್ತದೆ ಅದನ್ನ ಗುರುತಿಸುವ ಕಾರ್ಯ ಮಾಡಬೇಕು ಎಂದು ಸ್ರ್ತೀಶಕ್ತಿ ಸ್ವಸಹಾಯ ಸಂಘದ ಅದ್ಯಕ್ಷೆ ಸುಶೀಲಕ್ಕ ಪಾಟೀಲ ಹೇಳಿದರು. ಪಟ್ಟಣದ ವಿರಕ್ತಮಠದಲ್ಲಿ ವಚನನಿಧಿ ವನಿತಾ ಸಂಘ ಶಿಗ್ಗಾವಿ ವತಿಯಿಂದ ಮಾತೃ ವಂದನಾ, ಸ್ತ್ರೀನಿಧಿ -2026 ಪ್ರಶಸ್ತಿ ಪ್ರಧಾನ ಸಮಾಂಭವನ್ನ ಉದ್ಘಾಟಿಸಿ ಮಾತನಾಡಿದ ಅವರು, ವಚನನಿಧಿ ವನಿತಾ ಸಂಘ ಹಲವಾರು ಕಾರ್ಯಕ್ರಮಗಳನ್ನ ಹಮ್ಮಿಕೊಂಡು ಮಹಿಳೆಯರ ಪ್ರತಿಭೆಯನ್ನ ಗುರುತಿಸುವ ಕಾರ್ಯ ಮಾಡುತ್ತಿದೆ ಎಂದರು.
ಶಿಗ್ಗಾವಿ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾದ್ಯಾಯಿನಿ ವಿನೋಧಾ ಪಾಟೀಲ “ಇಂದಿನ ಮಹಿಳೆಯ ಸವಾಲುಗಳು” ಎಂಬ ವಿಷಯದ ಕುರಿತು ಮಾತನಾಡಿ, 12 ನೇ ಶತಮಾನದ ಸಮಾನವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಪ್ರತಿನಿತ್ಯದ ಬದುಕಿನಲ್ಲಿ ಮಹಿಳೆಯು ಹಲವಾರು ಸವಾಲುಗಳನ್ನ ಬವಣೆಯಾಗಿ ಸ್ವೀಕರಿಸುತ್ತಿದ್ದಾಳೆ, ಹೆಣ್ಣನ್ನ ಕ್ಷಮೆಯಾಧರಿತ್ರಿ ಎಂಬ ಹೆಸರಿನಿಂದ ಕರೆಯುವ ಮೂಲಕ ಮಹಿಳೆಗೆ ಸಹನಾ ಶಕ್ತಿಯುಳ್ಳ ಭೂಮಿ ಸಮಾನ ಹಕ್ಕುಗಳನ್ನು ಹೆಣ್ಣಿಗೆ ಕೊಡಲಾಗಿದೆ, ಸಮಾಜಿಕ ಸವಾಲುಗಳನ್ನ ಪ್ರತಿನಿತ್ಯ ಹೆಣ್ಣು ಅನುಭವಿಸುತ್ತ ಬರುತ್ತಿದ್ದಾಳೆ, ಸಾಮರಸ್ಯದ ಕೊರತೆ ಕೌಟುಂಬಿಕ ಬದುಕಿನಲ್ಲಿ ಎದುರಿಸುತ್ತಿದ್ದೇವೆ, ವಿಘಟಿತ ಕುಟುಂಬದ ಒತ್ತಡದ ಬದುಕಿನಲ್ಲಿ ಹೆಣ್ಣಿಗೆ ಬಹಳಷ್ಟು ತೊಂದರೆಗಳನ್ನ ಎದುರಿಸಬೇಕಾಗುತ್ತದೆ, ಲಿಂಗ ತಾರತಮ್ಯವೂ ನಡೆದುಕೊಂಡು ಬಂದಿದೆ ಎಂದರು.
ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ಮಾತನಾಡಿದರು, ಅದ್ಯಕ್ಷತೆಯನ್ನ ವಚನ ನಿಧಿ ವನಿತಾ ಸಂಘದ ಅದ್ಯಕ್ಷೆ ಡಾ. ಲತಾ ನಿಡಗುಂದಿ ವಹಿಸಿದ್ದರು, ಕಾರ್ಯಕ್ರಮದ ದಿವ್ಯ ಸಾನಿದ್ಯ ಸಂಗನಬಸವ ಮಹಾಸ್ವಾಮಿಗಳು ವಹಿಸಿದ್ದರು. ಕಾರ್ಯಕ್ರಮದಲ್ಲಿ 2026ರ ಸ್ತ್ರೀನಿಧಿ ಪ್ರಶಸ್ತಿಯನ್ನ ಹಾನಗಲ್ನ ಕನ್ನಡ ಉಪನ್ಯಾಸಕಿ ಪುಸ್ಪಾವತಿ ಶಲವಡಿಮಠ ಅವರಿಗೆ ಪ್ರಧಾನ ಮಾಡಲಾಯಿತು. ಶಿಗ್ಗಾವಿ ವಚನನಿಧಿ ವನಿತಾ ಸಂಘದ ಸದಸ್ಯರಾದ ಪ್ರತಿಭಾ ಗಾಂಜಿ, ವಿಜಯಲಕ್ಷ್ಮಿ ಹೆಸರೂರ, ಶಂಕುಂತಲಾ ಕೋಣನವರ, ಗಿರಿಜಮ್ಮ ಹೆಸರೂರ, ವಿಜಯಲಕ್ಷ್ಮಿ ಗೊಟಗೋಡಿ, ಸುಮಂಗಲಾ ಕೋರಿ, ಕವಿತಾ ದಾಸರ, ಸುಜತಾ ಬಳಿಗಾರ ಸೇರಿದಂತೆ ಕ.ಸಾ.ಪ, ಶ.ಸಾ.ಪ ಹಾಗೂ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 