ಕರ್ನಾಟಕ ಸಮತಾ ಸೈನಿಕ ದಳ ಪದಾಧಿಕಾರಿಗಳ ಆಯ್ಕೆ
Election of Karnataka Samata Sainik Dal office bearers
ಹುಕ್ಕೇರಿ 16: ತಾಲೂಕಿನ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಸುಮತಾ ಸೈನಿಕ ದಳದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಕರ್ನಾಟಕ ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷರಾದ ಬಿ ಚನ್ನಕೃಷ್ಣಪ್ಪ ಹಾಗೂ ಉಪಾಧ್ಯಕ್ಷರಾದ ಕಮಲಾ ಮೇಡಂ ಅವರ ಆದೇಶದಂತೆ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಶಿವಾಜಿ ಓ ಬಾಲೇಶ್ಗೋಳ ಹಾಗೂ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷರಾದ ರಮೇಶ್ ತಳವಾರ್ ಅವರ ನೇತೃತ್ವದಲ್ಲಿ ಹುಕ್ಕೇರಿ ತಾಲೂಕ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಜರಗಿತು.ಕೋರ್ಟ್ ಸರ್ಕಲ್ ನಲ್ಲಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ತಳಿಗೆ ಸಂಘದ ಎಲ್ಲಾ ಸದಸ್ಯರು ಸೇರಿ ಹೂ ಮಾಲೆ ಅರ್ಪಿಸುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಿದರು ಬೆಳಗಾವಿ ಜಿಲ್ಲಾ ಅಧ್ಯಕ್ಷರಾಗಿ ಶಿವಾಜಿ ಎನ್ ಬಾಲೇಶ್ಗೋಳ ಉಪಾಧ್ಯಕ್ಷರಾಗಿ ರಮೇಶ್ ತಳವಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಮಹಮ್ಮದ್ ಅಲಿ ಬಾಡ್ಕರ್, ಬೆಳಗಾವಿ ಜಿಲ್ಲಾ ಕಾನೂನು ಸಲಹೆಗಾರರಾಗಿ ಅಡ್ವಕೇಟ್ ರಾಜೇಂದ್ರ ಮೂಶಿ, ಜಿಲ್ಲಾ ಕಾರ್ಯದರ್ಶಿಯಾಗಿ ಸೊಹೈಲ್ ಬಾಗವಾನ್, ಸಹ ಕಾರ್ಯದರ್ಶಿಯಾಗಿ ರಾಜೇಂದ್ರ ಕಾಂಬಳೆ ಆಯ್ಕೆಯಾಗಿದ್ದು ಹಾಗೂ ಹುಕ್ಕೇರಿ ತಾಲೂಕ ಸಂಘದ ಅಧ್ಯಕ್ಷರಾಗಿ ಶಿವಾನಂದ್ ಬಸಪ್ಪ ಮಾಳಕರಿ, ಸಂಘಟನಾ ಕಾರ್ಯಧ್ಯಕ್ಷರಾಗಿ ಸಾಹುಲ್ ನದಾಫ್ ಉಪಾಧ್ಯಕ್ಷರಾಗಿ ಜಾಫರ್ ನದಾಫ್, ಪ್ರಧಾನ ಕಾರ್ಯದರ್ಶಿಯಾಗಿ ದಸ್ತಗಿರ್ ಬಾಬಾ ಸಾಬ್ ಕಳವಂತ್, ಕಾರ್ಯದರ್ಶಿಯಾಗಿ ಅಜಯ್ ರಾಮಚಂದ್ರ ಹರಬಲೆ, ಖಜಾಂಚಿಯಾಗಿ ಶರಾ್ರಜ್ ಕಾಂಚಾದೇ, ತಾಲೂಕ ಸಂಘಟನಾ ಪ್ರಧಾನ ಸಂಚಾಲಕರಾಗಿ ವಿಠ್ಠಲ್ ಬಂಗಾರಿ, ಸಂಘಟನಾ ಸಂಚಾಲಕರಾಗಿ ಗೌಸ್ ಆಝಮ್ ಜಮಾದಾರ್, ಸಂಚಾಲಕರಾಗಿ ಮಹಮ್ಮದ್ ಆರಿಫ್ ಪಠಾಣ್, ಶಮನ್ ಮುಲ್ತಾನಿ, ಶಂಕರ್ ಭೀಮಪ್ಪ ತಳವಾರ್ ಆಯ್ಕೆಯಾದರು.
ಇದೇ ಸಮಯದಲ್ಲಿ ಮಹಿಳಾ ಘಟಕದ ಕಾಗವಾಡ ತಾಲೂಕ ಅಧ್ಯಕ್ಷರಾಗಿ ಕವಿತಾ ಕಾಂಬಳೆ ಹಾಗೂ ಹುಕ್ಕೇರಿ ತಾಲೂಕ ಮಹಿಳಾ ಘಟಕದ ಗೌರವ ಅಧ್ಯಕ್ಷರಾಗಿ ಶಾಂತವ್ವ ಹಳವಿ, ತಾಲೂಕ ಅಧ್ಯಕ್ಷರಾಗಿ ಮಂಗಲ್ ಮಾನೆ, ಉಪಾಧ್ಯಕ್ಷರಾಗಿ ಆರತಿ ಕಾಂಬಳೆ, ಖಜಾಂಚಿಯಾಗಿ ಲಗಮವ್ವ ಮಾದರ್, ಪ್ರಧಾನ ಕಾರ್ಯದರ್ಶಿಯಾಗಿ ಲಕ್ಷ್ಮಿ ನೂಲಿ, ಕಾರ್ಯದರ್ಶಿಯಾಗಿ ಗೌರವ ಮಾಳಗೆ ಆಯ್ಕೆಯಾದರು.ಈ ಸಂದರ್ಭದಲ್ಲಿ ಗೌಸ್ಜ ಲಾಜಂ ಜಮಾದಾರ್, ಸಂಚಾಲಕ ಕಾರ್ಯದರ್ಶಿ ಮಹಮ್ಮದ್ ಅರಿಪ ಪಟಾನ್, ಹುಕ್ಕೇರಿ ತಾಲೂಕಿನ ಎಲ್ಲಾ ಸದಸ್ಯರು ಹಾಗೂ ಚಿಕ್ಕೋಡಿ ಕಾಗವಾಡ ಬೆಳಗಾವಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 