ರಬಕವಿ ಧನಲಕ್ಷ್ಮೀ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆ
Election of Directors to the Board of Directors of Rabakavi Dhanalakshmi Bank
ರಬಕವಿ-ಬನಹಟ್ಟಿ 30 : ರಬಕವಿ ನಗರದ ಶ್ರೀ ಧನಲಕ್ಷ್ಮೀ ಪತ್ತಿನ ಸಹಕಾರಿ ಸಂಘದ 2025-28 ನೇ ಸಾಲಿನ ಮಂಡಳಿಯ ನಿರ್ದೇಶಕರ ಚುನಾವಣೆಯಲ್ಲಿ ಪ್ರಭು ಉಮದಿ ಗುಂಪಿನ ಅಭ್ಯರ್ಥಿಗಳು ಭರ್ಜರಿ ವಿಜಯ ಸಾಧಿಸಿ, ಆಡಳಿತ ಚುಕ್ಕಾಣೆ ಹಿಡಿದಿದ್ದಾರೆ. ಬಣಗಾರರ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾದ ಧನಲಕ್ಷ್ಮೀ ಬ್ಯಾಂಕಿಗೆ ಈ ಬಾರಿ ಶೇರುದಾರರು ಉಮದಿಯವರ ಗುಂಪಿಗೆ ಮಣೆ ಹಾಕಿದ್ದಾರೆ.
ತ್ರೀವ್ರ ಕುತೂಹಲ ಕೆರಳಿಸಿದ ಈ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದ ಸ್ಥಾನಕ್ಕೆ ಸ್ಫರ್ಧಿಸಿದ ಪರ್ಪ (ಪ್ರಭು) ಉಮದಿ, ಸಂಗಮೇಶ ಹತಪಕಿ, ಗಂಗಾಧರ ಬಿಲವಡಿ, ಸುರೇಶ ಗೊಳಸಂಗಿ, ಗಂಗಾಧರ ನಾಗರಾಳ, ಪ್ರಕಾಶ ಬೀಳಗಿ, ಕಡೋಲಿ ಬಸವರಾಜ, ಹಿಂದುಳಿದ ಅ ವರ್ಗದ ರಾಚಪ್ಪ ಬಿಲವಡಿ, ಹಿಂದುಳಿದ ಬ ವರ್ಗದ ಶಂಕರ ದಡ್ಡ, ಮಹಿಳಾ ಕ್ಷೇತ್ರದ ಸುಷ್ಮಾ ಹಾಗರಗಿ, ಮಹಾನಂದಾ ಗಿಡವೀರ ಚುನಾಯಿತರಾಗಿದ್ದು, ಪರಿಶಿಷ್ಠ ಕ್ಷೇತ್ರದ ಭೀಮಪ್ಪ ಭಜಂತ್ರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 