ರಬಕವಿ ಧನಲಕ್ಷ್ಮೀ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆ

ರಬಕವಿ ಧನಲಕ್ಷ್ಮೀ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆ Election of Directors to the Board of Directors of Rabakavi Dhanalakshmi Bank

ರಬಕವಿ-ಬನಹಟ್ಟಿ 30 : ರಬಕವಿ ನಗರದ ಶ್ರೀ ಧನಲಕ್ಷ್ಮೀ ಪತ್ತಿನ ಸಹಕಾರಿ ಸಂಘದ 2025-28 ನೇ ಸಾಲಿನ ಮಂಡಳಿಯ ನಿರ್ದೇಶಕರ ಚುನಾವಣೆಯಲ್ಲಿ ಪ್ರಭು ಉಮದಿ ಗುಂಪಿನ ಅಭ್ಯರ್ಥಿಗಳು ಭರ್ಜರಿ ವಿಜಯ ಸಾಧಿಸಿ, ಆಡಳಿತ ಚುಕ್ಕಾಣೆ ಹಿಡಿದಿದ್ದಾರೆ. ಬಣಗಾರರ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾದ ಧನಲಕ್ಷ್ಮೀ ಬ್ಯಾಂಕಿಗೆ ಈ ಬಾರಿ ಶೇರುದಾರರು ಉಮದಿಯವರ ಗುಂಪಿಗೆ ಮಣೆ ಹಾಕಿದ್ದಾರೆ. 

ತ್ರೀವ್ರ ಕುತೂಹಲ ಕೆರಳಿಸಿದ ಈ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದ ಸ್ಥಾನಕ್ಕೆ ಸ್ಫರ್ಧಿಸಿದ ಪರ​‍್ಪ (ಪ್ರಭು) ಉಮದಿ, ಸಂಗಮೇಶ ಹತಪಕಿ, ಗಂಗಾಧರ ಬಿಲವಡಿ, ಸುರೇಶ ಗೊಳಸಂಗಿ, ಗಂಗಾಧರ ನಾಗರಾಳ, ಪ್ರಕಾಶ ಬೀಳಗಿ, ಕಡೋಲಿ ಬಸವರಾಜ, ಹಿಂದುಳಿದ ಅ ವರ್ಗದ ರಾಚಪ್ಪ ಬಿಲವಡಿ, ಹಿಂದುಳಿದ ಬ ವರ್ಗದ ಶಂಕರ ದಡ್ಡ, ಮಹಿಳಾ ಕ್ಷೇತ್ರದ ಸುಷ್ಮಾ ಹಾಗರಗಿ, ಮಹಾನಂದಾ ಗಿಡವೀರ ಚುನಾಯಿತರಾಗಿದ್ದು, ಪರಿಶಿಷ್ಠ ಕ್ಷೇತ್ರದ ಭೀಮಪ್ಪ ಭಜಂತ್ರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.