ಕಾರ್ಯಕಾರಿಣಿ ರಾಜ್ಯ ನಿರ್ದೇಶಕರಾಗಿ ಆಯ್ಕೆ

ಕಾರ್ಯಕಾರಿಣಿ ರಾಜ್ಯ ನಿರ್ದೇಶಕರಾಗಿ ಆಯ್ಕೆ Elected as Executive State Director


ಹನುಮಸಾಗರ 22 : ಇಲ್ಲಿಯ ಕುರುಬಗೇರಾಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ಶಿಕ್ಷಕ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ಅಧ್ಯಕ್ಷರೂ ಆಗಿರುವ ಚಂದಪ್ಪ ಹಕ್ಕಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯಕಾರಿಣಿ ರಾಜ್ಯ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.ಬೆಂಗಳೂರಿನ  ಕಚೇರಿಯಲ್ಲಿ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಿ ಅವರು ಚಂದಪ್ಪ ಹಕ್ಕಿ ಅವರಿಗೆ ಪ್ರಮಾಣ ಪತ್ರ ನೀಡಿ, ಸಿಹಿ ತಿನಿಸಿ, ಅಭಿನಂದಿಸಿದರು.ರಾಜ್ಯದ ಪದಾಧಿಕಾರಿಗಳು, ಶಿಕ್ಷಕರ ಬಳಗ ಹಾಗೂ ಮತ್ತಿತರರಿದ್ದರು. ಹನುಮಸಾಗರದ ಕೆಪಿಎಸ್ ಶಾಲೆ, ಕುರುಬಗೇರಾ ಶಾಲೆ ಸೇರಿದಂತೆ ವಿವಿಧ ಶಾಲೆಗಳಲ್ಲಿ ಅವರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು. ತಾಲೂ ಕಿನ ಶಿಕ್ಷಕರ ಬಳಗ, ಕಸಾಪ ಪದಾಧಿಕರಿಗಳು, ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು, ತಾಲೂಕಿನ ಜನತೆ ಸಂತಸ ವ್ಯಕ್ತಪಡಿಸಿದ್ದಾರೆ.