ತೀಸರೆ ಚಿಪ್ಪೆ ಹೆಕ್ಕಲು ತೆರಳಿದ್ದ ಒಂದೇ ಕುಟುಂಬದ ಎಂಟು ಮಂದಿ ಸಾವು

ತೀಸರೆ ಚಿಪ್ಪೆ ಹೆಕ್ಕಲು ತೆರಳಿದ್ದ ಒಂದೇ ಕುಟುಂಬದ ಎಂಟು ಮಂದಿ ಸಾವು Eight members of the same family died

ಕಾರವಾರ 25: ಭಟ್ಕಳ ತಾಲೂಕಿನ ಅಳ್ವೇಕೋಡಿ ತಟ್ಟೆ ಹಕ್ಕಲು ನದಿ ತೀರದಲ್ಲಿ 11 ಜನ ಜಲಸಮಾಧಿಯಾದ ದುರಂತ ಘಟನೆ ನಡೆದಿದೆ.   

ತಟ್ಟೆ ಹಕ್ಕಲು ಉಪ ನದಿಯ ತೀರದಲ್ಲಿ ತೀಸರೆ  ಚಿಪ್ಪೆ  ( ಬೆಳಚು) ಹೆಕ್ಕಲು ತೆರಳಿದ್ದ ಒಂದೇ ಕುಟುಂಬದ ಎಂಟು ಮಂದಿ ಹಾಗೂ ಮತ್ತೊಬ್ಬ ಮಹಿಳೆ  ನದಿಯ ಅಬ್ಬರದ ಸೆಳವಿಗೆ ಸಿಕ್ಕಿ  ಕೊಚ್ಚಿಹೋಗಿ ಜಲಸಮಾಧಿಯಾಗಿದ್ದಾರೆ.   

ಓರ್ವ ಪುರುಷ, ಹತ್ತು ಜನ ಮಹಿಳೆಯರು ಸಾವನ್ನಪ್ಪಿದ್ದಾರೆ. ಹನ್ನೊಂದು ಜನರ ಶವ ಪತ್ತೆಯಾಗಿದೆ. ಹತ್ತು ಜನರ ಮೃತದೇಹಗಳು ಮಹಿಳೆಯರದ್ದು.  

ನಾಡದೋಣಿ ಬಳಸಿ ಮೀನುಗಾರರು, ಆಗ್ನಿಶಾಮಕ ದಳದವರು, ಪೊಲೀಸರು ನದಿಯಲ್ಲಿ ಹುಡುಕಾಟ ನಡೆಸಿ, ರಾತ್ರಿ ವೇಳೆಗೆ ನಾಪತ್ತೆಯಾಗಿದ್ದ ಮೂರು ಶವ ಹುಡುಕುವಲ್ಲಿ ಯಶಸ್ವಿಯಾದರು. ಮೂವರ   ಸ್ಥಿತಿ ಗಂಭೀರವಾಗಿದ್ದು ಅವರಿಗೆ  ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಸಲಾಗುತ್ತಿದೆ. ಒಬ್ಬ ಮಹಿಳೆ ಮೊದಲು ನೀರಿನ ಸೆಳೆವಿಗೆ ಸಿಕ್ಕಳು, ಆಕೆಯನ್ನು ರಕ್ಷಿಸಲು ಪುರುಷ ಮುಂದಾಗಿದ್ದು, ಆತ ನೀರಿನ ಸೆಳೆತಕ್ಕೆ ಸಿಕ್ಕಿದ್ದಾರೆ. ಅವರನ್ನು ರಕ್ಷಿಸಲು ಇತರೆ ಮಹಿಳೆಯರು ಮುಂದಾಗಿದ್ದು, ಒಬ್ಬರನ್ನು ರಕ್ಷಿಸಲು ಮುಂದಾಗಿ ಹದಿನಾಲ್ಕು ಜನರ ಪೈಕಿ ಹನ್ನೊಂದು ಜನ ನೀರಲ್ಲಿ ಮುಳುಗಿದರು. 11 ಜನ ಸಾವನ್ನಪ್ಪಿದ್ದು, ಮೂವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.   

ಒಟ್ಟು 14 ಜನರಿದ್ದ ತಂಡವೊಂದು ಅಳಿವೆಕೋಡಿ ತಟ್ಟೆಹಕ್ಕಲು ಎಂಬಲ್ಲಿ ನದಿ ಸಮುದ್ರ ಸಂಗಮದ  ತೀರಕ್ಕೆ ತೆರಳಿತ್ತು. ಈ ವೇಳೆ ನದಿಯಲ್ಲಿ ಚಿಪ್ಪೆಕಲ್ಲು  ತೆಗೆಯಲು ನೀರಿನಲ್ಲಿ ಇಳಿದಾಗ, ಏಕಾಏಕಿ ಬಂದ ಭಾರೀ ಪ್ರವಾಹದ  ಸೆಳೆತಕ್ಕೆ ಸಿಲುಕಿ ನೋಡನೋಡುತ್ತಿದ್ದಂತೆಯೇ ನೀರು ಪಾಲಾಗಿದ್ದಾರೆ.  

ಈ ಅವಘಡದಲ್ಲಿ 11 ಮಂದಿ ಸಾವನ್ನಪ್ಪಿದ್ದು, 8 ಜನ ಒಂದೇ ಕುಟುಂಬದವರು ಎಂಬುದು ದೃಢಪಟ್ಟಿದೆ.  

ಲಕ್ಷ್ಮಿ ಮಾದೇವ ನಾಯ್ಕ(42), ಲಕ್ಷ್ಮಿ ಶಿವರಾಂ ನಾಯ್ಕ( 39), ಲಕ್ಷ್ಮಿ ಅಣ್ಣಪ್ಪ ನಾಯ್ಕ(44), ಜ್ಯೂತಿ ನಾಗಪ್ಪ ನಾಯ್ಕ( 34) , ಮಾಲತಿ ಜಟ್ಟಪ್ಪ  ನಾಯ್ಕ (40),  , ಉಮೇಶ್ ಎಂ.ನಾಯ್ಕ (42),  ಮಾಸ್ತಮ್ಮ ಎಂ.ನಾಯ್ಕ(42), ಮಾದೇವ ಭೈರ​‍್ಪ ನಾಯ್ಕ ( 45), ಮಂಜಮ್ಮ ಗೋಯ್ದ ನಾಯ್ಕ(40), ನಾಗರತ್ನ  ಪರಮೇಶ್ವರ ನಾಯ್ಕ (38 ) ಮೃತಪಟ್ಟವರು ಎಂದು ತಿಳಿದು ಬಂದಿದೆ.   

ಅಸ್ತಸ್ಥರಾಗಿರುವ ನಾಗರತ್ನ, ಮಾಹಾದೇವಿ ಎಂಬುವವರನ್ನು ಹೆಚ್ಚಿನ ಚಿಕಿತ್ಸೆ ಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.  

ನದಿಯ ಅಲೆಗಳ ಅಬ್ಬರಕ್ಕೆ ಕೊಚ್ಚಿಹೋದ ಮೂವರಿಗಾಗಿ ಸಮುದ್ರದಲ್ಲಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ. ಮೃತಪಟ್ಟವರೆಲ್ಲರೂ ಭಟ್ಕಳ ತಾಲೂಕಿನ ಶಾರದಹೊಳೆಯ ಹೆರಿಹಿತ್ಲು ಮಜಿರೆ  ಮೂಲದ ನಿವಾಸಿಗಳು ಎಂದು ತಿಳಿದುಬಂದಿದೆ.  

*ಸಂಬಂಧಿಕರ ಆಕ್ರಂದನ :*  

ನದಿ ಸಮುದ್ರದಲ್ಲಿ ಕೊಚ್ಚಿಹೋದವರ ಪೈಕಿ ಆರು ಮೃತದೇಹಗಳನ್ನು ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಉಳಿದ ಎರಡು ಮೃತದೇಹಗಳನ್ನು ಆರ್‌.ಎನ್‌.ಎಸ್  ಆಸ್ಪತ್ರೆಗೆ ರವಾನಿಸಲಾಗಿದೆ. ಒಂದೇ ಕುಟುಂಬದ ಎಂಟು ಮಂದಿ ಅಸುನೀಗಿದ ಸುದ್ದಿ ತಿಳಿದು ಆಸ್ಪತ್ರೆಯ ಬಳಿ ಜಮಾಯಿಸಿರುವ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.  

ಘಟನೆ ಕುರಿತಂತೆ ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ನಾಪತ್ತೆಯಾದವರಿಗಾಗಿ ಶೋಧ ಕಾರ್ಯಾಚರಣೆ ಹಾಗೂ ಹೆಚ್ಚಿನ ತನಿಖೆ ಮುಂದುವರಿದಿದೆ.  

 ಸ್ಥಳದಲ್ಲಿ ಜಿಲ್ಲಾ ಉಸ್ತುವಾರಿ  

 *ಸಿಎಂ  ಸಿದ್ದರಾಮಯ್ಯ ರಿಂದ ಸಂತಾಪ:*  

*ಮೃತರ ಕುಟುಂಬಕ್ಕೆ 5  ಲಕ್ಷ ರೂ. ಪರಿಹಾರ ಘೋಷಣೆ :*   

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಸಮೀಪದ ತಟ್ಟೆಹಕ್ಕಲು ಕಡಲ ತೀರದಲ್ಲಿ ಕಪ್ಪೆಚಿಪ್ಪು ತರಲು ಹೋದವರ ಪೈಕಿ ಒಂದೇ ಕುಟುಂಬದ ಎಂಟು ಮಂದಿ ನೀರಿನಲ್ಲಿ ಮುಳುಗಿ ಸಾವೀಗೀಡಾಗಿದ ಸುದ್ದಿ ತಿಳಿದು ಸಂಕಟವಾಯಿತು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.  

ಇದೊಂದು ಅತ್ಯಂತ ದುರದೃಷ್ಟಕರ ಮತ್ತು ನೋವಿನ ಘಟನೆ. ದುರಂತದಲ್ಲಿ ಮಡಿದವರ ಕುಟುಂಬಕ್ಕೆ ಮಾನವೀಯ ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.  

ಇನ್ನೂ ಕೆಲವರು ಈ ದುರ್ಘಟನೆಯಲ್ಲಿ ಕಾಣೆಯಾಗಿರುವ ಮಾಹಿತಿಯಿದ್ದು, ಅವರಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ಕಾಣೆಯಾದವರು ಬದುಕಿಬಂದು ತಮ್ಮವರನ್ನು ಕೂಡಿಕೊಳ್ಳಲಿ ಎಂದು ನಾವೆಲ್ಲರೂ ದೇವರಲ್ಲಿ ಪ್ರಾರ್ಥಿಸೋಣ ಎಂದಿದ್ದಾರೆ.