ಬದುಕಿನ ಎಲ್ಲ ಸಂದರ್ಭದ ಸಮಸ್ಯೆಗಳಿಗೆ ಶಿಕ್ಷಣದಿಂದ ಪರಿಹಾರ: ಆರ್.ಎಸ್ ಆದಾಪುರ
Education is the solution to all problems in life: R.S. Adapura
ಬೀಳಗಿ 28 : ಇಂದಿನ ವೈಚಾರಿಕ ಯುಗದಲ್ಲಿ ಪ್ರತಿಯೊಬ್ಬರು ಶಿಕ್ಷಣವಂತರಾಗುವುದು ಅವಶ್ಯಕವಾಗಿದೆ. ಬದುಕಿನ ಎಲ್ಲ ಸಂದರ್ಭಗಳಲ್ಲಿ ಬಂದೊದಗುವ ಸಮಸ್ಯೆಗಳಿಗೆ ಶಿಕ್ಷಣ ಪರಿಹಾರ ದೊರಕಿಸುತ್ತದೆ. ಶಿಕ್ಷಣದಿಂದ ಸರ್ವವೂ ಸಾಧ್ಯವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್ ಆದಾಪುರ ಹೇಳಿದರು.
ತಾಲೂಕಿನ ಮುಂಡಗನೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ವಿಧ್ಯಾರ್ಥಿಗಳ ಶುಭ ಹಾರೈಕೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸರಕಾರಿ ಶಾಲೆ ಎಂದರೆ ತಾತ್ಸಾರ ಮಾಡುತ್ತಿರುವ ಈ ಕಾಲದಲ್ಲಿ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಬೋಧನೆ ಮಾಡುತ್ತ ಸಾರ್ವಜನಿಕರ ಪ್ರೀತಿ ಗಳಿಸುತ್ತಿವೆ. ಮುಂಡಗನೂರಿನ ಈ ಶಾಲೆ ಗುಣಮಟ್ಟ ಕಾಯ್ದುಕೊಂಡಿರುವುದು ಸಂತಸ ತಂದಿದೆ ಎಂದರು.
ಬೀಳಗಿ ಕ್ಷೇತ್ರ ಸಮನ್ವಯಾಧಿಕಾರಿ ಶಿವಾಜಿ ಕಾಂಬಳೆ ಮಾತನಾಡಿ, ಸರಕಾರಿ ಶಾಲೆಗಳು ಪ್ರಗತಿದಾಯಕ ಬೋಧನೆ ಮಾಡುತ್ತ ಇಲಾಖೆಯ ಉದ್ದೇಶ ಈಡೇರಿಸುತ್ತಿವೆ. ಸರಕಾರಿ ಶಾಲೆಗಳಲ್ಲಿ ಅನೇಕ ಸೌಲಭ್ಯಗಳಿರುವುದರಿಂದ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಕಳುಹಿಸಲು ವಿನಂತಿಸಿದರು. ಸರಕಾರಿ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಬಾಗಲಕೋಟೆ ಜಿಲ್ಲಾಧ್ಯಕ್ಷ ಎಚ್ ಜಿ ತಿಪರಡ್ಡಿ ಮತ್ತು ಗ್ರಾಮದ ಬಸವರಾಜ ಧೂತಗುಂಡಿ ಮಾತನಾಡಿದರು.
ಮುಖ್ಯ ಶಿಕ್ಷಕ ಬಾಳನಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್ಡಿಎಂಸಿ ಅಧ್ಯಕ್ಷ ಮುತ್ತಪ್ಪ ಬಂಡಿ ಅಧ್ಯಕ್ಷತೆ ವಹಿಸಿದ್ದರು. ಮಾಳಿಂಗೇಶ್ವರ ದೇವಸ್ಥಾನದ ಗದ್ದುಗೆ ಪೂಜಾರಿ ಸಾನಿಧ್ಯ ವಹಿಸಿದ್ದರು. ಉಪಾಧ್ಯಕ್ಷ ಅಮೋಘಸಿದ್ದ ಬಿರಾದಾರ, ಪ್ರಕಾಶ ತಿಪರಡ್ಡಿ, ಯಲ್ಲಪ್ಪ ಲೆಂಡಗಿ, ಸುರೇಶ ಮೀಸಿ, ಎಂ ಬಿ ಕುರಿಯವರ, ನಾಮದೇವ ಬಾಡಗಿ, ಈರ್ಪ ಕುಂಬಾರ, ರಾಯಪ್ಪ ಗಾಡದ, ಲಕ್ಷ್ಮಣ ಬಿರಾದಾರ, ಚಿಕ್ಕಯ್ಯ ಪೂಜಾರಿ, ಶಿಕ್ಷಕರಾದ ಮಲ್ಲಿಕಾರ್ಜುನ ಸೋಲಾಪುರ, ಮಂಜುನಾಥ ಬಿರಾದಾರ, ಉಮಾ ಪವಾರ, ಮದೀನಾ ಪೀರಜಾದೆ, ಯಲ್ಲಮ್ಮ ಕಾಂಬಳೆ ಇತರರು ಇದ್ದರು. ಶಾಲೆಯ ಆದರ್ಶ ವಿಧ್ಯಾರ್ಥಿನಿ ಸಾಕ್ಷಿ ಕುಂಬಾರ ಮತ್ತು ಟಾಪರ್ ವಿದ್ಯಾರ್ಥಿ ರವಿ ಬಿರಾದಾರ ಇವರನ್ನು ಸನ್ಮಾನಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮನರಂಜಿಸಿದವು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 