ಶಿಕ್ಷಣ ಉತ್ತಮ ನಾಗರಿಕರನ್ನು ರೂಪಿಸುವ ಕಮ್ಮಟ: ಈರಣ್ಣಾ ಹೊಸಮನಿ
Education Makes Better Citizens: Eranna Hosmani
ಯರಗಟ್ಟಿ, 03 ; ಶಿಕ್ಷಣವು ಉತ್ತಮ ನಾಗರಿಕರನ್ನು ರೂಪಿಸುವ ಕಮ್ಮಟ. ಉತ್ತಮ ಶಿಕ್ಷಣ ಪಡೆದು, ಸಮಾಜದಲ್ಲಿ ಅಗ್ರಗಣ್ಯರಾಗಬೇಕು ಎಂದು ಕಾಲೇಜು ಎಸ್ಡಿಎಮ್ಸಿ ಸದಸ್ಯ ಈರಣ್ಣಾ ಹೊಸಮನಿ ಹೇಳಿದರು.
ಸಮೀಪದ ಸತ್ತಿಗೇರಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲಾ ಕಾಲೇಜು ವಿಭಾಗದ ಪಿಯು ಕಾಲೇಜಿನಲ್ಲಿ ಮಂಗಳವಾರ ನಡೆದ ಪಿಯು ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.ನಿಮ್ಮ ಭವಿಷ್ಯ ನೀವೇ ರೂಪಿಸಿಕೊಳ್ಳಬೇಕು. ಸಮಾಜವನ್ನು ನೀವು ಹಿಂಬಾಲಿಸದೆ ಸಮಾಜ ನಿಮ್ಮನ್ನು ಹಿಂಬಾಲಿಸುವಂತೆ ಕಾರ್ಯಪ್ರವೃತ್ತರಾಗಿ ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿ ಕಾಲೇಜು ಎಸ್ಡಿಎಮ್ಸಿ ಉಪಾಧ್ಯಕ್ಷ ಬಂಗಾರೆಪ್ಪ ಹರಳಿ ಮಾತನಾಡಿದರು.ವಿದ್ಯಾರ್ಥಿಗಳಾದ ಪೂಜಾ ರೈನಾಪೂರ, ರತ್ನಾವ್ವ ಪಾಗದ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಉಪನ್ಯಾಸಕರಾದ ಬಿ.ಸಿ.ಮೋದಗಿ, ಬಿ.ಬಿ.ಪಾಟೀಲ, ಸವಿತಾ ಪಾಟೀಲ, ರುಕ್ಮಿಣಿ ಪೂಜೇರಿಪ್ರಾಚಾರ್ಯರಾದ ನಾಗರಾಜು ಕೆ, ಉಪನ್ಯಾಸಕರಾದ ಎಸ್.ಟಿ. ಹಲಕಿ, ಬಿ.ಎಸ್. ದೊಡಮನಿ, ಬಿ.ಆಯ್. ಹರಳಿ, ಬಿ.ಎಂ. ಬಿಷ್ಟಣ್ಣವರ, ಯು.ಬಿ. ಮೂಲಂಗಿ, ಏನ್.ಎಂ. ಮಾದರ, ಎಸ್.ಬಿ. ನದಾಫ್, ದ್ವಿತೀಯ ದರ್ಜೆ ಸಹಾಯಕರು ಯು. ವಾಯ್. ಧಾಮನೇಕರ್ ಇದ್ದರು.ಕುಮಾರ, ಸಂತೋಷ ಪಟ್ಟೆದ ಸ್ವಾಗತಿಸಿದರು, ಕುಮಾರಿ ಶಿಲ್ಪಾ ಉಳ್ಳೆಗಡ್ಡಿ ವಂದಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 