ಇ-ಪೌತಿ ಆಂದೋಲನ ಕಡ್ಡಾಯ

ಇ-ಪೌತಿ ಆಂದೋಲನ ಕಡ್ಡಾಯ  E-Pauthi movement is mandatory

ಮುಂಡಗೋಡ 08: ಜಮೀನುಗಳ ಮಾಲೀಕರು ತಮ್ಮ ಮೃತರಾದಲ್ಲಿ ಅದನ್ನು ವಾರಸುದಾರರು ತಮ್ಮ ಹೆಸರಿಗೆ ಮಾಡಿಕೊಳ್ಳಬೇಕಾಗುತ್ತದೆ ಎಂದು ತಹಶೀಲ್ದಾರ್ ಶಂಕರ ಗೌಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಇ-ಪೌತಿ ಆಂದೋಲನದ ಮೂಲಕ ಮುಂಡಗೋಡ ತಾಲೂಕಿನ ಈ ರೀತಿಯ ಜಮೀನುಗಳನ್ನು ಉಚಿತವಾಗಿ ವಾರಸಾ ಮಾಡಿ ಪಹಣಿ ಪತ್ರಿಕೆ (ಉತಾರ) ಮಾಡಿಕೊಡಲಾಗುತ್ತಿದೆ. ಈ ರೀತಿಯ ಜಮೀನುಗಳ ವಾರಸುದಾರರು ಕೂಡಲೇ ತಮ್ಮ ಎಲ್ಲಾ ದಾಖಲೆಗಳನ್ನು ಗ್ರಾಮ ಆಡಳಿತ ಅಧಿಕಾರಿಗಳ (ಗ್ರಾಮ ಲೆಕ್ಕಾಧಿಕಾರಿ) ಕಡೆ ಸಲ್ಲಿಸಬೇಕು. ಮಾಲೀಕರು ಮೃತರಾಗಿರುವ ಜಮೀನುಗಳ ವಾರಸಾ ಖಾತೆಯನ್ನು ಉಚಿತವಾಗಿ ಇ-ಪೌತಿ ಆಂದೋಲನ ಮೂಲಕ ಮಾಡಿಕೊಡಲಾಗುವುದು ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಲು ತಹಶೀಲ್ದಾರ್ ಶಂಕರ್ ಗೌಡಿ ತಿಳಿಸಿದ್ದಾರೆ.