ಶ್ರಾವಣ ಮಾಸದ ಪ್ರಯುಕ್ತ ದುಗರ್ಾದೇವಿಗೆ ಮಹಾ ಕುಂಬಾಭಿಷೇಕ
ಲೋಕದರ್ಶನ ವರದಿ
ಬ್ಯಾಡಗಿ05:ಶ್ರಾವಣ ಮಾಸದ ಪ್ರಯುಕ್ತ ತಾಲೂಕಿನ ಸುಕ್ಷೇತ್ರಕೆಂಗೊಂಡ ಗ್ರಾಮದಲ್ಲಿನ ದುಗರ್ಾದೇವಿಗೆ ಮಹಾ ಕುಂಬಾಭಿಷೇಕ ನೇರವೇರಿಸಲಾಯಿತು..
ಶ್ರಾವಣ ಮಾಸದಲ್ಲಿ ಪ್ರತಿ ವರ್ಷಆಚರಿಸುವ ನಡೆಯುವ ಕುಂಬ ಮೇಳಕ್ಕೆ ಮಂಗಳವಾರ ಕೆಂಗೊಂಡಗ್ರಾಮಅಕ್ಷರಸಹಃ ಮಧುವಣಗಿತ್ತಿಯಂತೆ ಶೃಂಗಾರಗೊಂಡಿತ್ತು. ಗ್ರಾಮದ ಪ್ರತಿ ಮನೆಯಲ್ಲೂ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತದಲ್ಲದೇ ಗ್ರಾಮದ ತುಂಬೆಲ್ಲ ತಳಿರು ತೋರಣಗಳು ಕಂಗೊಳಿಸುತ್ತಿದ್ದವು.
ಗ್ರಾಮದ ಅಷ್ಟೇ ಏಕೆ ರಾಜ್ಯದಲ್ಲಿಯೇ ತನ್ನದೇ ಆದ ಭಕ್ತರ ವರ್ಗ ಹೊಂದಿರುವಕೆಂಗೊಂಡ ಗ್ರಾಮದ ದುಗರ್ಾದೇವಿಗೆ ಬೆಳಿಗ್ಗೆಯೆ ಅಭಿಷೇಕ, ವಿಶೇಷ ಪೂಜೆ ನೇವರೇರಿಸಿ ನಂತರ ಕುಂಬಾಭಿಷೇಕ ಮಾಡಿ ದೇವಿಗೆ ಭಕ್ತಿಯಿಂದ ಪೂಜೆ ಸಲ್ಲಿಸಲಾಯಿತು.
108 ಕುಂಭ ಮೇಳ:ದೇವಿಗೆ ಪೂಜೆ ಸಲ್ಲಿಸಿದ ನಂತರ 108 ಮುತ್ತೈದೆಯರುಹೊತ್ತಿತ್ತ108 ಕುಂಭ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಧಾಮರ್ಿಕ ಕಾರ್ಯಗಳು ಮಾನವಲ್ಲಿನ ಮೇಲು ಕೀಳು ಎಂಬ ಭಾವ ನೆಯನ್ನು ಹೋಗಲಾಡಿಸಿ ಸಮಾಜದಲ್ಲಿ ಶಾಂತಿ ಸಹನೆ ಸಹಬಾಳ್ವೆ ನೆಲೆಸುವಲ್ಲಿ ಸಹಕಾರಿಯಾಗಲಿವೆ ಎಂದರು. ನಂತರ ಕುಂಭಮೇಳ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ದೇವಸ್ಥಾನ ತಲುಪಿತು.
ಹರಿದು ಬಂದ ಭಕ್ರ ಸಾಗರ: ಶ್ರಾವಣ ಮಾಸದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಜ್ಯದ ಮೂಲೆ ಮೂಲೆ ಗಳಿಂದ ಬಂದ ಸುಮಾರು 10 ಸಾವಿರಕ್ಕೂ ಅಧಿಕ ಭಕ್ತದಂಡೆ ಸೇರಿತ್ತು. ಜಾತ್ರೆಯಂತೆ ಭಾಸವಾದ ಕಾರ್ಯಕ್ರಮದಲ್ಲಿ ಎಲ್ಲರೂ ದೇವಿಯ ದರ್ಶನ ಪಡೆದು ಪುನೀತರಾದರು ಮದ್ಯಾಹ್ನ ಅನ್ನಸಂತರ್ಪಣೆ ನೇರವೆರಿಸಲಾಯಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 